MARSHAL LAW IN KANPUR

ರಾಜನ್ ಬಾಲ ಅವರ ಅಕಾಲಿಕ ಮರಣ ಕ್ರಿಕೆಟ್ ಪ್ರೇಮಿಗಳಿಗೆ ದುಃಖಕರ ಸುದ್ದಿ. ಕ್ರಿಕೆಟ್ನಷ್ಟೇ  ಮನೋಹರ ಅವರ ವರ್ಣನಾ ಶೈಲಿ. ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಬರೆಯುತ್ತಿದ್ದ ಅವರು ಕ್ರಿಕೆಟ್ ಆಟವನ್ನು ಮನೋಜ್ಞವಾಗಿ ವರ್ಣಿಸಿ ನಮ್ಮನ್ನು ರಂಜಿಸುತ್ತಿದ್ದರು. ಭಾರತ ೧೯೮೩ ರ prudential world cup ಗೆದ್ದ ಹೊಸತು. ಕ್ರಿಕೆಟ್ ವಿಶ್ವವೇ ದಿಗ್ಭ್ರಾಂತವಾಗಿಸಿದ ಗೆಲುವು ಭಾರತದ್ದು. ಫೈನಲ್ ಪಂದ್ಯದಲ್ಲಿ ಬಲಿಷ್ಟ ವೆಸ್ಟ್ ಇಂಡೀಸ್ ತಂಡವನ್ನು ೪೩ ರನ್ನುಗಳಿಂದ ಸೋಲಿಸಿದ ಭಾರತ ಹೊಸ world champion. ಈ ಸೋಲಿನಿಂದ ಕಂಗೆಟ್ಟ ವೆಸ್ಟ್ ಇಂಡೀಸ್ ಭಾರತಕ್ಕೆ ತಕ್ಕ ಪಾಠ ಕಲಿಸಲು ಭಾರತ ಪ್ರಯಾಣ ಮಾಡಿ ೬ ಟೆಸ್ಟ್ ಮತ್ತು ೬ ಏಕ ದಿನ ಪಂದ್ಯಗಳಲ್ಲಿ ಭಾರತವನ್ನು ಹಿಗ್ಗಾ ಮುಗ್ಗಾ ಬಡಿದು ತೃಪ್ತಿ ಪಟ್ಟುಕೊಂಡಿತು. ಈ ಸರಣಿಯ ಪ್ರಥಮ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ. ವೆಸ್ಟ್ ಇಂಡೀಸ್ ನ ಮಾರಕ ವೇಗಿ ಮಾಲ್ಕಂ ಮಾರ್ಷಲ್ ಚೊಚ್ಚಲ ಓವರಿನ ೨ ಚೆಂಡುಗಳಲ್ಲಿ ಭಾರತದ ದಾಂಡಿಗರನ್ನು ಉರುಳಿಸಿ ಭಾರತ ಚೇತರಿಸಿಕೊಳ್ಳದಂತೆ ಮಾಡಿದರು. ದಿನದ ಆಟ ಮುಗಿದಾಗ ಭಾರತದ ಸ್ಥಿತಿ ಶೋಚನೀಯ. ಮಾರನೆ ದಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ  ರಾಜನ್ ಬಾಲ ಮಾರ್ಷಲ್ ಅವರ ಬೌಲಿಂಗ್ ಬಣ್ಣಿಸಿದ್ದು ಹೀಗೆ:

MARSHAL LAW IN KANPUR

ಈ ವರದಿ ಬರೆದು ೨೬ ವರ್ಷಗಳು ಸಂದರೂ ರಾಜನ್ ಬಾಲ ಎಂದ ಕೂಡಲೇ MARSHAL LAW ನೆನಪಾಗುತ್ತದೆ.