ಬೇಡದ ಕಡೆ ತಲೆ ಹಾಕಿದ ಕರಡಿ

ನಮಗೆ ಅವಶ್ಯಕತೆ ಇರದ ಕಡೆ ತಲೆ ಹಾಕಬಾರದು ಎಂದು ಹಿರಿಯರ ಬುದ್ಧಿವಾದ. ಕಿತಾಪತಿ ಮಾಡುವವರನ್ನು ಕಂಡರೆ ಹೇಳುತ್ತಾರೆ ಬೇಡದೆ ಇರೋ ಜಾಗದಲ್ಲಿ ತಲೆ ಹಾಕೋದು ಅಂದ್ರೆ ಇವ್ನಿಗೆ ತುಂಬಾ ಇಷ್ಟ ಎಂದು ತೆಗಳೋದನ್ನೂ ನಾವು ಕೇಳಿದ್ದೇವೆ. ಆದರೆ ಇಲ್ಲಿ ಬೇಡ ಕಡೆ ತಲೆ ಹಾಕಿ ಮಂಗಳಾರತಿ ಮಾಡಿಸಿ ಕೊಂಡಿದ್ದು ಹುಲು ಮನುಜನಲ್ಲ. ಬದಲಿಗೆ ಮೈ ತುಂಬಾ ಕೇಶ ಇಟ್ಟುಕೊಂಡು ನಮ್ಮ ಮಕ್ಕಳಿಗೆ ಬೊಂಬೆ ರೂಪದಲ್ಲೂ, ನಿಜ ರೂದಲ್ಲೂ ಕಚಗುಳಿ ಇಡುವ ಜಾಂಬವ. ಕರಡಿ.

ಫ್ಲೋರಿಡಾ ರಾಜ್ಯದಲ್ಲಿರುವ “ಒಕಾಲಾ” ನಗರದಲ್ಲಿ ವಾಸಿಸುವ ಕರಡಿಯೊಂದು ತನ್ನ ತಲೆಯನ್ನು ಪ್ಲಾಸ್ಟಿಕ್ ಬಾಟಲಿ ಯೊಂದರಲ್ಲಿ ಸಿಕ್ಕಿಸಿಕೊಂಡು ಪರದಾಡಿತು. ಪೂರ್ತಿ ಹತ್ತು ದಿನ. ಓಹ್, ಹತ್ತು ದಿನಗಳ ಮನುಷ್ಯನ ನಿರ್ಲಕ್ಷ್ಯೆ ಕಾರಣ  ಕಾಲ ತಿನ್ನಲು, ಕುಡಿಯಲು ಆಗದೆ ಒದ್ದಾಡಿದ ಕರಡಿಗೆ ಕೊನೆಗೆ ಮುಕ್ತಿ ಸಿಕ್ಕಿದ್ದೂ ಭಾಗ್ಯಕ್ಕೆ ಮನುಷ್ಯನಿಂದಲೇ. ಪ್ರವಾಸದ ವೇಳೆ ಹೋದ ಹೋದೆಡೆ ನಮ್ಮ ಗಾರ್ಬೇಜ್ ಎಳೆ ದು ಕೊಂಡು ಹೋಗುವ ನಮಗೆ ನಿಸರ್ಗದ ಕಡೆ ನಮಗಿರುವ ಬೇಜವಾಬ್ದಾರಿತನಕ್ಕೆ ಪ್ರವಾಸ ಅಥವಾ ಪರ್ಯಟನ ಕಳೆದು ಬರುವಾಗ ನಮ್ಮ ಹಿಂದೆ ಬಿಟ್ಟು ಹೋಗುವ ತಿಪ್ಪೆಗಳೇ ಸಾಕ್ಷಿ.

ಜೆಡ್ಡಾ ದಿಂದ ಸುಮಾರು ೨೦೦ ಕಿ.ಮೀ ಇರುವ ನಮ್ಮ ಕೆಮ್ಮಣ್ಣು ಗುಂಡಿಯನ್ನು ಹೋಲುವ “ತಾಯಿಫ್” ಭೇಟಿಯ ವೇಳೆ ಬೆಟ್ಟದ ಕೆಳಗಿನ ದಾರಿಯಲ್ಲಿ ಒಂದು ಮರವನ್ನು ಕಂಡೆ. ಸಾಮಾನ್ಯವಾಗಿ ಮರ ಎಂದ ಮೇಲೆ ಎಲೆಗಳು ಇದ್ದೇ ಇರುತ್ತವೆ, ಅಲ್ಲವೇ? ಸಖೇದಾಶ್ಚರ್ಯ, ಇದೊಂದು ವಿಚಿತ್ರ ಮರವಾಗಿ ಕಂಡಿತು ನನಗೆ. ಮರದ ಟೊಂಗೆಯ ತುಂಬಾ ಬಣ್ಣ ಬಣ್ಣದ, ವಿವಿಧ ಆಕಾರದ, ಗಾತ್ರದ ಚೀಲಗಳು. ಪ್ಲಾಸ್ಟಿಕ್ ಚೀಲಗಳು. ಸಂಪೂರ್ಣ ಮರವನ್ನು ಆವರಿಸಿ ಬಿಟ್ಟಿತ್ತು. ಗಾಡಿಯಲ್ಲಿ ಹೋಗುವಾಗ ಮೇಯೋದು, ತದನಂತರ ಬಿಡೋದು ಗಾಳಿ ಪಟವ. ಅಲ್ಲಲ್ಲ, ಪ್ಲಾಸ್ಟಿಕ್ ಪಟವ. ಸ್ವಲ್ಪ ದೂರ ಹೋದ ನಂತರವೇ ನನ್ನ ಮಂದ ಮಾತಿಗೆ ತೋಚಿದ್ದು ಒಹ್, ಈ ಮರದ ಚಿತ್ರವೊಂದನ್ನು ಕ್ಲಿಕ್ಕಿಸಬೇಕಿತ್ತು ಎಂದು.       

ತನ್ನ ಸುಂದರ ಮೂತಿಯನ್ನು ಈ ಪ್ಲಾಸ್ಟಿಕ್ ಬಾಟಲಿಗೆ ಸಿಕ್ಕಿಸಿಕೊಂಡ ಕೇವಲ ಆರು ತಿಂಗಳ ಹಸುಳೆ ಕರಡಿಗೆ ವನ್ಯ ಜೀವಿ ಸಂರಕ್ಷಕರು ಬಂದು ಮೊದಲು ಪಕ್ಕದಲ್ಲೇ ಇದ್ದ ಅದರ ತಾಯಿಗೆ ಶಾಂತ ಗೊಳಿಸುವ ಚಚ್ಚು ಮದ್ದನ್ನು ನೀಡಿ ಪ್ಲಾಸ್ಟಿಕ್ ಮುಕ್ತ ಗೊಳಿಸಿದರು. ಅವರ ಪ್ರಕಾರ ಆ ಕರಡಿ ಒಂದೆರಡು ದಿನಗಳಲ್ಲಿ ಸಾಯುತ್ತಿತ್ತಂತೆ ಬಾಟಲಿ ಕಾರಣ  ತಿನ್ನಲು ಕುಡಿಯಲು ಆಗದೆ.     

ಚಿತ್ರ ಕೃಪೆ: http://www.newstimes.com/news/article/Plastic-jar-removed-from-Fla-bear-cub-s-head-615774.php#photo-3

ಪ್ರತಿ ಭಾನುವಾರ ನೀಡಿ ಉತ್ತರ, ಪ್ರಶ್ನೆಗಳಿಗೆ

ಆಧುನಿಕ ಬದುಕಿನ ಹುಚ್ಚು ಓಟ ಕೆಲವೊಮ್ಮೆ ನಿಜವಾದ ಅರ್ಥವನ್ನು ಕಂಡುಕೊಳ್ಳುವುದಕ್ಕೆ ಆಸ್ಪದ ನೀಡುವುದಿಲ್ಲ. ಹೇಗೆ ಸಾಧ್ಯ ಹೇಳಿ, ಸಮಯವೇ ಸಿಗುವುದಿಲ್ಲವಲ್ಲ. ಎಷ್ಟೋ ಸಲ ಸಮಯ ಬರೀ ಮನೆಯಿಂದ ಕೆಲಸಕ್ಕೆ, ಕೆಲಸದಿಂದ ಮನೆಗೆ ಮರುಳುವುದರಲ್ಲೇ ಕಳೆದುಹೋಗುತ್ತದೆ. ಈ ಜಂಜಾಟದಲ್ಲಿ ನಮ್ಮ ಗುರಿಗಳು ನಮ್ಮ ಕಣ್ಣಿಂದ ಮರೆಯಾಗಿ ಗೋಲ್ ಪೋಸ್ಟ್ ಇಲ್ಲದ ಮೈದನಾದಲ್ಲಿ ದಿಕ್ಕೆಟ್ಟ ಚೆಂಡು ಅಲೆಯುವಂತೆ ನಮ್ಮ ಗುರಿಗಳು ಸಾಕಾರ ಕಾಣದೆ ಹೋಗುತ್ತವೆ. ಹಾಗಾದರೆ ಇದಕ್ಕೆ ಪರಿಹಾರ ಇಲ್ಲವೇ? ಇದೆ, ಖಂಡಿತ ಇದೆ ಪರಿಹಾರ. ನನ್ನದಲ್ ಎಂದು ಸ್ವಲ್ಪ ಸಮಯ ಬದಿಗಿಟ್ಟು ನಮ್ಮ ದಿನಚರಿಯ “stock taking” ತೆಗೆದುಕೊಳ್ಳುವುದು. marcandangel ವೆಬ್ ತಾಣದಲ್ಲಿ ೨೦ ಪ್ರಶ್ನೆಗಳಿವೆ ಪ್ರತಿ ಭಾನುವಾರ ಉತ್ತರಿಸಲು. ನಮಗೆ ತೋಚಿದ್ದನ್ನು ಆರಿಸಿಕೊಂಡು, ಬೇಕಿದ್ದರೆ ಮತ್ತಷ್ಟನ್ನು ಸೇರಿಸಿಕೊಂಡು ಉತ್ತರಿಸುವ, ಮತ್ತು ಪ್ರಶ್ನೆಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಿದರೆ ಖಾಸಗಿ ಮತ್ತು ವ್ರುತ್ತಿಮಯ ಜೀವನದಲ್ಲಿ ಯಶಸ್ಸನ್ನು ಕಾಣಬಹುದು. ೧. ಕಳೆದ ವಾರದಲ್ಲಿ ನಾನು ಕಲಿತದ್ದೇನು? ಕ್ಲಿಷ್ಟಕರವಾದರೂ ಇದು ನಿಮ್ಮ ಪ್ರಶ್ನೆಯೇ ಆದ್ದರಿಂದ ಮುಜುಗುರ ಬೇಡ. ೨. ಕಳೆದ ವಾರದ ನನ್ನ ಸಾಧನೆ. ಹಿಮಾಲಯ ಹತ್ತಿರಬೇಕೆನ್ದೇನೂ ಇಲ್ಲ. ಎಂಥ ಚಿಕ್ಕ ಸಾಧನೆಯೂ ಸಾಧನೆಯೇ. ೩. ನಿಮ್ಮ ಅವಿಸ್ಮರಣೀಯ ದಿನ. ಏನಿರಬಹುದು, ಯೋಚಿಸಿ. ಒಂದಲ್ಲ ಒಂದು ಖಂಡಿತ ಇದ್ದೆ ಇರುತ್ತದೆ. ೪. ಯಾರಿಗಾದರೂ ಸಹಾಯ ಮಾಡಿದ್ದೆನೆಯೇ? ೫. ಮುಂದಿನ ಮೂರು ವರ್ಷಗಳಿಗೆ ನನ್ನ ಗುರಿಗಳೇನು? ಹೊಸ ಪದವಿ, MBA? ೬. ನನ್ನ ಭಯ, ಅಡಚಣೆಗಳೇನು? ೭. ನನ್ನ ಬದುಕು ಇನ್ನು ಒಂದೇ ವಾರದಲ್ಲಿ ಮುಗಿಯುವುದಿದ್ದರೆ ನಾನೇನು ಮಾಡಬಲ್ಲೆ? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳಿ, ಪ್ರಾಮಾಣಿಕವಾಗಿ ಉತ್ತರಿಸಿ. ಈ ಉತ್ತರ ಅಥವಾ ಪ್ರಶ್ನೆಗಳನ್ನು ನಿಮ್ಮ ಅತ್ತೆ ಅಥವಾ ಮಡದಿ (ಕುಹಕದ ಭಯವಿದ್ದರೆ ) ಕಾಣುವಂತೆ ಇಡುವ ಅಗತ್ಯವಿಲ್ಲ. ನೆನಪಿಡಿ, ಸಾಧಿಸಲು MBA ಆಗಿರಬಹುದು, ಕಂಪ್ಯೂಟರ್ ಕಲಿಯುವುದೇ ಆಗಿರಬಹುದು ಮನಸ್ಸಿದ್ದರೆ ಖಂಡಿತ ಇದೆ ಮಾರ್ಗ.