ಊರು ಇಂದೂರು. ಮಧ್ಯಪ್ರದೇಶದ ಈ ಪಟ್ಟಣ ಹೆಸರು ಮಾಡಿತು ಮೇಕೆ ವ್ಯಾಪಾರದಲ್ಲಿ. ಮುಸ್ಲಿಂ ಧರ್ಮೀಯರ ಪವಿತ್ರ ಹಬ್ಬ ‘ಬಕ್ರೀದ್’ ದಿನ ಬಲಿಕೊಡಲೆಂದು ಮೇಕೆ ಅರಸುತ್ತಾ ಒಬ್ಬ ಸಿರಿವಂತ ಮುಸ್ಲಿಂ ಬಾಂಧವ ಮಾರುಕಟ್ಟೆಗೆ ತನ್ನ ಕಿರಿ ಮಗನೊಂದಿಗೆ ಬಂದ. ಮಗ ಆಯ್ಕೆ ಮಾಡಿದ ಮೇಕೆ ಗೆ ಐದು ಲಕ್ಷದ ಹನ್ನೊಂದು ಸಾವಿರ ಎಂದು ವ್ಯಾಪಾರಿ ಹೇಳಿದಾಗ without blinking ಅಷ್ಟು ಹಣ ಕೊಟ್ಟು ಮೇಕೆ ಕೊಂಡು ಕೊಂಡ. ಹಣದುಬ್ಬರದ ಕಾರಣ ನಮ್ಮ ರೂಪಾಯಿ ನೆಲಕಚ್ಚಿದ ಪರಿಣಾಮ ಅಲ್ಲ ಈ ದುಬಾರೀ ಮೇಕೆ ವ್ಯಾಪಾರ. ಹಣದುಬ್ಬರ ವಿಪರೀತವಾದಾಗ ಒಂದು ಪ್ಯಾಕೆಟ್ ಹಾಲನ್ನು ಕೊಳ್ಳಲು ಗೋಣೀ ಚೀಲ ತುಂಬಾ ಹಣ ಬೇಕಾಗುತ್ತದೆ. ಮೇಕೆ ಕೊಳ್ಳಲು ಒಂದು ಟ್ರಾಕ್ಟರ್ ತುಂಬಾ ಹಣ ಬೇಕು. ಆ ಪರಿಸ್ಥಿತಿಗೆ ನಮ್ಮ ಸರಕಾರ ನಮ್ಮನ್ನು ತಂದು ನಿಲ್ಲಿಸದಿದ್ದರೆ ಸಾಕು.
ಈಗ ಮತ್ತೆ ಮೇಕೆ: ಕಿರಿ ಮಗ ಆಯ್ಕೆ ಮಾಡಿದ ಮೇಕೆ ಅದೆಷ್ಟೇ ಆದರೂ ಕೊಂಡು ಕೊಳ್ಳುವ ಸಂಪ್ರದಾಯ ಈ ಸಿರಿವಂತನ ಮನೆಯವರದಂತೆ. ಆದ ಕಾರಣ ಯಾವುದೇ ತಕರಾರಿಲ್ಲದೆ, ತಡ ಬಡಿಸದೆ ಮೇಕೆ ವ್ಯಾಪಾರ ಅರ್ಧ ಮಿಲಿಯನ್ ರೂಪಾಯಿಗೆ ತಂದು ನಿಲ್ಲಿಸಿ ದಾಖಲೆ ಮಾಡಿದ.