ಯೋನಿ ಆಕಾರದ ಸ್ಟೇಡಿಯಂ

Image

ತುಂಬಾ ದಿನಗಳ ನಂತರ ಬರೆಯುತ್ತಿರುವುದರಿಂದ ಆ belated ಬರಹ ಸ್ವಲ್ಪ orgasmic ಆಗಿರಲಿ ಎನ್ನುವ ತುಂಟತನ ನನ್ನಲ್ಲಿ ಮೂಡಿತು. ಅಷ್ಟಕ್ಕೂ ಬ್ಲಾಗ್ ಲೋಕಕ್ಕೆ ಸಾಮಾನ್ಯವಾಗಿ ಎಳೆಯರು ಬರೋಲ್ಲ, ಅದರಲ್ಲೂ ಕನ್ನಡ ಬ್ಲಾಗ್ ಕಡೆಯಂತೂ ತಲೆಯೇ ಹಾಕೋಲ್ಲ ಎಂದು ನನ್ನ ಲೆಕ್ಕಾಚಾರ. ಹಾಗೇನಾದರೂ ಅಪ್ಪಿ ತಪ್ಪಿ ‘ಪಡ್ಡೆ’ ಗಳು ತಲೆ ಹಾಕಿದರೆ…keep off !

2022 ರಲ್ಲಿ ಕೊಲ್ಲಿ ಪ್ರದೇಶದ ಕತಾರ್ ದೇಶದಲ್ಲಿ ವಿಶ್ವ ಫುಟ್ಬಾಲ್ ಪಂದ್ಯಾವಳಿ. ಕೊಲ್ಲಿ ಪ್ರದೇಶದಲ್ಲಿ ಫುಟ್ ಬಾಲ್ ಎಂದರೆ ಹುಚ್ಚು. ನಮ್ಮ ಕ್ರಿಕೆಟ್ ಥರ. ಇಲ್ಲಿನ ಶ್ರೀಮಂತ ಶೇಖ್ ಗಳು ಯೂರೋಪ್ ದೇಶದ ಪ್ರತಿಷ್ಠಿತ ಫುಟ್ ಬಾಲ್ ಕ್ಲಬ್ ಗಳ ಮಾಲೀಕರು. ಕತಾರ್ ಗೆ ವಿಶ್ವ ಕಪ್ ಪಂದ್ಯಾವಳಿಯ ಅವಕಾಶ ಸಿಕ್ಕಾಗ ಇಡೀ ಪ್ರಾಂತ್ಯ ದಲ್ಲೇ ಒಂದು ಬಗೆಯ ರೋಮಾಂಚನ. ಕತಾರ್ ನ ಪ್ರಯತ್ನಕ್ಕೆ, ಆಸೆಗೆ ತಣ್ಣೀರೆರೆಚಲು ಸಾಕಷ್ಟು ಪ್ರಯತ್ನಗಳು ನಡೆದರೂ ಅವು ಸಫಲವಾಗಲಿಲ್ಲ. ಕತಾರ್ natural gas ಸಂಪನ್ನ ದೇಶ. ಪುಟ್ಟ ದೇಶ, ಅಗಾಧ ಸಂಪತ್ತು. ದೇಶದ ದೊರೆ modern ಚಿಂತನೆಯ ವ್ಯಕ್ತಿ. ಆತನ ಪತ್ನಿ ಇನ್ನಷ್ಟು ಮಾಡರ್ನ್, ಮಾತ್ರವಲ್ಲ ತನ್ನ ಪತಿಯ ಸಲಹೆಗಾರ್ತಿ ಕೂಡಾ.

ಈ ಫುಟ್ ಬಾಲ್ ಪಂದ್ಯಾವಳಿಯ ಯಶಸ್ಸಿಗೆ ಕತಾರ್ ಏನೆಲ್ಲಾ ಸಾಧ್ಯವೋ ಅವನ್ನೆಲ್ಲಾ ಮಾಡುತ್ತಿದೆ. ಹಣದ ಹೊಳೆಯೇ ಹರಿಯುತ್ತಿದೆ. (ಕಾಮನ್ ವೆಲ್ತ್ ಕ್ರೀಡೆಯಲ್ಲಿ ತನ್ನ ವೈಯಕ್ತಿಕ ‘ವೆಲ್ತ್’ ಹೆಚ್ಚಿಸಿಕೊಂಡ ಸುರೇಶ್ ಕಲ್ಮಾಡಿ ಜೊಲ್ಲು ಸುರಿಸುತ್ತಿರಬಹುದು). ಅನೇಕ ಸ್ಟೇಡಿಯಂ ಗಳು ತಲೆಯುತ್ತುತ್ತಿವೆ. ಅತ್ಯಾಧುನಿಕ ಸ್ಟೇಡಿಯಂ ಗಳು, ಪ್ರತಿಭಾವಂತ architect ಗಳ ಸಂಗಮ ಕತಾರ್.

‘ಅಲ್- ವಕ್ರಾ’ ಹೆಸರಿನ ಸ್ಟೇಡಿಯಂ ಈಗ ಹೆಸರು ಮಾಡುತ್ತಿದೆ. for all wrong reasons. ಸ್ಟೇಡಿಯಂ ನ ನಕ್ಷೆ ನೋಡಿದ ಜನ ಗುಸು ಗುಸು ಅನ್ನ ತೊಡಗಿದರು. ಇದೇನು, ಈ ಸ್ಟೇಡಿಯಂ ಯೋನಿಯ ಥರ ಕಾಣ್ತಾ ಇದೆಯಲ್ಲಾ? ooops. ‘ಯೋನಿ’ ನಾ? ಶಿವ ಶಿವಾ ಎನ್ನಬೇಡಿ. architecture ಅನ್ನು anatomy ಗೆ ಹೋಲಿಸುವ ವಕ್ರ ಬುದ್ಧಿ ಬಿಡಬೇಕು. ಬೆಪ್ಪೆ, ಹವಳ ವನ್ನು ಹೆಕ್ಕಲು ಸಮುದ್ರಕ್ಕೆ ಹೋಗುವ dhow ಎಂದು ಕರೆಯಲ್ಪಡುವ ದೋಣಿಯ ಆಕಾರದಲ್ಲಿದೆ ಈ ಸ್ಟೇಡಿಯಂ ಎಂದು architect ನ ಉದ್ಗಾರ.

ಈಗ ಈ ಚಿತ್ರ ನೋಡಿ, ನಿಮ್ಮ ತೀರ್ಮಾನ ಹೇಳಿ. ಇಲ್ಲಾ ರೀ, ನೀವ್ ಏನೇ ಹೇಳಿ, ಇದು ದೋಣಿಯಲ್ಲ, ಯೋನಿ, ಎಂದಿರಾ?…ಏನೀಗ? ಹೌದು, ಅದು ಯೋನಿಯೇ, put up or shut up.

ಅಷ್ಟಕ್ಕೂ ದೋಣಿ ಮತ್ತು ಯೋನಿ ಕಾಯಕದಲ್ಲಿ, ಮಾಡುವ ಕೆಲಸ ಒಂದೇ….
ಹ ಹಾ.

 

ಪ್ರವಾದಿ ಜಯಂತಿ. ಭಾರತದಲ್ಲಿ ರಜೆ, ಸೌದಿಯಲ್ಲಿ ಇಲ್ಲ.

ಇಂದು ಬೆಳಿಗ್ಗೆ ನನ್ನ ಮಿತ್ರ ನಾಗರಾಜನಿಗೆ ಫೋನ್ ಮಾಡಿ ಮಾತನಾಡುತ್ತಿದ್ದಾಗ ಏನಪ್ಪಾ, ನಾಳೆ ಹಬ್ಬಾ ಜೋರಾ, ಎಂದು ಕೇಳಿದ. ಇದ್ಯಾವ ಹಬ್ಬಾ ನಾಳೆ, ಎಂದು ಯೋಚಿಸುತ್ತಿರುವಾಗ ಅವನು ಹೇಳಿದ ಅದೇ, ನಿಮ್ ಹಬ್ಬ ಈದ್ ಮಿಲಾದ್ ನಾಳೆ, ಇಲ್ಲಿ ಸರಕಾರೀ ರಜೆ ಎಂದ. ಓಹೋ, ಹೌದಾ ಎಂದು ಉದ್ಗಾರ ತೆಗೆದಾಗ ಅವನಿಗೆ ಆಶ್ಚರ್ಯ. ಏನು ಅಲ್ಲಿ ಇಲ್ವಾ ರಜೆ ಎಂದ. ನಾನಂದೆ ಇಲ್ಲಿ ಸೌದಿ ಅರೇಬಿಯಾದಲ್ಲಿ ಪ್ರವಾದಿಗಳ ಜಯಂತಿಗೆ ರಜೆ ಇಲ್ಲ. ಅಂಥ ಒಂದು ದಿನ ಇದೆ ಎಂದೂ ಇಲ್ಲಿನ ಜನಕ್ಕೆ ಗೊತ್ತಿಲ್ಲ. ಪ್ರವಾದಿ ಜಯಂತಿ ಇರಲಿ, ಇಲ್ಲಿನ ರಾಜ ಸತ್ತಾಗಲೂ ರಜೆ ಕೊಡದ ದುರುಳರು ಇವರು ಎಂದು ನನ್ನ ದುಃಖವನ್ನು ವ್ಯಕ್ತಪಪಡಿಸಿದಾಗ ಅವನೂ ಸಂತಾಪ ಸೂಚಿಸಿದ ನನ್ನ ದೌರ್ಭಾಗ್ಯಕ್ಕೆ. ದೌರ್ಭಾಗ್ಯವಲ್ಲದೆ ಮತ್ತೇನು? ಭಾರತದಲ್ಲಿ ಪ್ರತೀ ಮೂರು ದಿನಗಳಿಗೊಮ್ಮೆ ಒಂದಲ್ಲ ಒಂದು ರಜೆ ವಕ್ಕರಿಸಿಕೊಳ್ಳುತ್ತಲೇ ಇರುತ್ತದೆ. ಹಾಗೇನಾದರೂ ರಜೆ ಸಿಗದೇ ಒಂದೆರಡು ವಾರಗಳಾದವು ಅನ್ನಿ, ಆಗ ಯಾವುದಾದರೂ ಒಂದು ನೆಪದಲ್ಲಿ, ನಮ್ಮ ರಾಜಕೀಯ ಪಕ್ಷಗಳ ಕೃಪಾ ಕಟಾಕ್ಷ ದಲ್ಲಿ ಬಂದೋ, ದೊಂಬಿಯೋ ನಡೆದು ರಜೆ ಸಲೀಸಾಗಿ ಸಿಗುತ್ತದೆ. ಯಡ್ಡಿ ಹತ್ತಿರ ಬಹುಮತ ಸಾಬೀತು ಪಡಿಸಿ ಎಂದರೂ ರಜೆ, ಅಯೋಧ್ಯೆಯ ವಿವಾದ ಕ್ಕೆ ನ್ಯಾಯಾಲಯ ಕೊಡುವ ತೀರ್ಪಿನಂದೂ ರಜೆ.  

ಸೌದಿ ಅರೇಬಿಯಾದ ಹಿಂದಿನ ರಾಜ ಫಹದ್ ರವರು ತೀರಿ ಕೊಂಡ ಸುದ್ದಿ ಬಂದಾಗ ನಾನು ಬ್ಯಾಂಕಿನಲ್ಲಿ ಇದ್ದೆ. ನನ್ನ ಕೆಲಸ ಬೇಗ ಬೇಗನೆ ಪೂರೈಸಿ ಹಾಗೆಯೆ ಅಲ್ಲಿನ ಕ್ಲರ್ಕ್ ಹತ್ತಿರ ಕೇಳಿದೆ, ಎಷ್ಟು ದಿನ ರಜೆ ಕೊಡ್ತಾರೆ ಅಂತ? ಅವನು ಕೇಳಿದ, ರಜೆ? ಯಾವುದಕ್ಕೆ? ನಾನು ದೊರೆಯ ಮರಣದ ವಾರ್ತೆ ಆತನಿಗೆ ಹೇಳಿದಾಗ, ಅವನು ಫಹದ್ ನ ಸಮಯ ಮುಗಿಯಿತು ಅವನು ಸೇರಿಕೊಂಡ ಭಗವಂತನ ಪಾದಚರಣಗಳಿಗೆ, ಅದಕ್ಕೇಕೆ ರಜೆ, ನಿಮ್ ದೇಶದಲ್ಲಿ ಇದಕ್ಕೂ ಕೊಡ್ತಾರ ರಜೆ ಎಂದು ಅವನು ಮರು ಪ್ರಶ್ನೆ ಹಾಕಿದಾಗ ಉತ್ತರಿಸಲಾಗದೆ ಮುಗುಳ್ನಕ್ಕು ಹೊರ ನಡೆದೆ. ಸಾವು ನೈಸರ್ಗಿಕ, ಅದನ್ನು ತಡೆಯಲಾಗಲೀ, ವಿಳಂಬಿಸಲಾಗಲೀ ಯಾರಿಂದಲೂ ಸಾಧ್ಯವಿಲ್ಲ. ಹಾಗೆಯೇ ಯಾರಾದರೂ ಸತ್ತರೂ ಅತಿಯಾಗಿ ಶೋಕ ವ್ಯಕ್ತ ಪಡಿಸಲೂ ಬಾರದು. ಹಾಗೆ ಮಾಡಿದ್ದೇ ಆದರೆ ಅವನಿಗೆ ದೇವನ ನಿರ್ಣಯ ಇಷ್ಟವಾಗಿಲ್ಲ ಎಂದು ಅರ್ಥ. ಇದು ಬಹುತೇಕ ಮುಸ್ಲಿಮರ ಅಭಿಪ್ರಾಯ. ಈಗ ಹೇಳಿ ಬಂದ್ ಕೊಡೋದಾದರೂ ಹೇಗೆ ಸಾಧ್ಯ? ಅಲ್ಲೂ ಬಾರದಂತೆ, ಬಂದ್ ಮಾತು ದೂರ ಉಳಿಯಿತು ಅಲ್ಲವೇ? ಅಲ್ಲಾ, ನಾನು ಮಾತಾಡ್ತಾ ಇದ್ದಿದ್ದು ಜಯಂತಿ ಬಗ್ಗೆ, ಇಲ್ಯಾಕೆ ಮುಖಹಾಕಿದ ಯಮ ಧರ್ಮರಾಯ? ಸಾವೆಂದರೆ ಹೀಗೆಯೇ. ಅಚಾನಕ್ ಆಗಿ ಹೊಂಚು ಹಾಕಿ ಬಿಡುತ್ತದೆ.  

ನಾನು ಹೋದ ವರ್ಷ, ಜುಲೈ ತಿಂಗಳಿನಲ್ಲಿ ಭಾರತಕ್ಕೆ ಬಂದಿದ್ದಾಗ ವಾಲ್ಮೀಕಿ ಜಯಂತಿ. ನಾನು ನನ್ನ ಮಿತ್ರನಿಗೆ ಕೇಳಿದೆ ಇದ್ಯಾವಗಿಂದ ಆರಂಭವಾಯ್ತು ಹೊಸ ಜಯಂತಿ ಎಂದು. ಭಾಜಪ ಸರಕಾರ ಆಲ್ವಾ ಇರೋದು, ಬೇರೆಯವರಿಗಿಂತ ತಾನು ಭಿನ್ನ ಎಂದು ತೋರಿಸಲು ಈ ರಜೆ ಅಂದ. ಇಂದು ಬೆಳಿಗ್ಗೆ ಅವನೊಂದಿಗೆ ಮಾತನಾಡಿದಾಗ ಅವನು ಹೇಳಿದ ರಜೆಯ ಪಟ್ಟಿಗೆ ಇನ್ನಷ್ಟು ಹೆಸರುಗಳು ಸೇರಿಕೊಂಡಿವೆ, ಬಸವ ಜಯಂತಿ, ಕನಕ ಜಯಂತಿ. ವಚನಗಳ ಮಹಾತ್ಮ, ವೀರಶೈವ ಪಂಗಡ ಗುರುಗಳಾದ ಬಸವಣ್ಣರಿಗೆ ಅವರು ಹುಟ್ಟಿದ ದಿನ ಜನ ರಜೆಯಲ್ಲಿ ದಿನ ಕಳೆಯೋದು ಎಷ್ಟು ಪ್ರಿಯವಾದ ವಿಷಯವೋ ನಾ ಕಾಣೆ. ಬಸವ ಜಯಂತಿ ಇವತ್ತು ಎಂದು ಸಂಭ್ರಮ ಪಡುತ್ತಿರುವವರಿಗೆ ಅವರ ಒಂದೇ ಒಂದು ವಚನವನ್ನಾದರೂ ಒದರಲು ಹೇಳಿದರೆ ಅನಾಹುತವಾಗಬಹುದೋ, politically incorrect ಆಗಬಹುದೋ?

ಕನಕ ಜಯಂತಿ ಯಂದು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಭಗವಾನ್ ಶ್ರೀ ಕೃಷ್ಣನ ಮಂದಹಾಸವನ್ನು ನೋಡಲು ದಲಿತನಿಗೆ ದಾರಿ ಮುಕ್ತವಾಗಿ ತೆರೆದಿರಬಹುದೇ? ಇಂಥ ಪ್ರಶ್ನೆಗಳು ರಜೆಯ ದಿನ ಏಳಲೇ ಬೇಕು, ನಾವದಕ್ಕೆ ಉತ್ತರ ಕಂಡು ಕೊಳ್ಳಲೇ ಬೇಕು. ನನಗೆ ಅದಕ್ಕೆ ಸಮಯವಿಲ್ಲ, ಏಕೆಂದರೆ ನನಗೆ ಇಂಥಾ ರಜೆಗಳ ಸೌಕರ್ಯ ಇಲ್ಲ  ಅಥವಾ ಸೌಭಾಗ್ಯ ಇಲ್ಲ.

ತಿಂಗಳ ತುಣುಕು

ಇಂದು ಆಗಸ್ಟ್ ತಿಂಗಳ ಆರಂಭ. ನಮಗೆ ಸ್ವಾತಂತ್ರ್ಯ ಸಿಕ್ಕಿದ, ಬಿಳಿಯರಿಂದ ಮುಕ್ತಿ ಸಿಕ್ಕಿದ ಮಾಸ. ಅಷ್ಟೇ ಅಲ್ಲ ನಾನು ಹುಟ್ಟಿದ ತಿಂಗಳೂ ಹೌದು. ಹಾಗಾಗಿ ಈ ತಿಂಗಳಿಗೆ ವಿಶೇಷ ಪ್ರಾಶಸ್ತ್ಯ. ಆಗಸ್ಟ್ ತಿಂಗಳಲ್ಲೇ ಇಂಗ್ಲೆಂಡಿನ ಜನರ ಅಚ್ಚುಮೆಚ್ಚಿನ ರಾಜಕುಮಾರಿ, ರಾಜಕುಮಾರ ಚಾರ್ಲ್ಸ್ ರವರ ಪತ್ನಿ ಡಯಾನ ಅಪಘಾತವೊಂದರಲ್ಲಿ  ನಿಧನ (ಆಗಸ್ಟ್ ೩೧, ೧೯೯೭) ಹೊಂದಿದ ದಿನ.  

ರೋಮ್ ಚಕ್ರವರ್ತಿ “ಆಗಸ್ಟಸ್ ಕಸೆಸರ್” ಸ್ಮರಣಾರ್ಥ ಸೆಕ್ಸ್ಟಿಲಿಸ್ ಎಂದು ಇದ್ದ ಹೆಸರನ್ನು ಆಗಸ್ಟ್ ಎಂದು ನಾಮಕರಣ ಮಾಡಲಾಯಿತು. ಈ ಚಕ್ರವರ್ತಿ ಆಳುವಾಗ ಎಂಟನೆ ತಿಂಗಳಿನಲ್ಲಿ ಮಹತ್ವ ಪೂರ್ಣ ಘಟನೆಗಳು ಜರುಗಿದ್ದರಿಂದ ಆತನ ಗೌರವಾರ್ಥ ಆಗಸ್ಟ್ ಎಂದು ಹೆಸರು ಬಂದಿದ್ದು.

ಆಗಸ್ಟ್ ತಿಂಗಳಿನಲ್ಲೇ ಅಮೆರಿಕೆಯ ಕರಿಯರ ನಾಯಕ ಮಾರ್ಟಿನ್ ಲೂಥರ್ ಕಿಂಗ್ i have a dream ಎನ್ನುವ ಅದ್ಭುತ ಭಾಷಣ ಮಾಡಿ ಅಮೇರಿಕ ಕರಿಯರನ್ನು ನಡೆಸಿಕೊಂಡ ಬಗೆಯನ್ನು ಜನಸ್ತೋಮಕ್ಕೆ ವಿವರಿಸಿದರು.

ಆಗಸ್ಟ್ ತಿಂಗಳಿನಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆ ಮತ್ತು ಜಮೈಕಾ ದೇಶಕ್ಕೂ ಆಗಸ್ಟ್ ತಿಂಗಳಿನಲ್ಲೇ ಬ್ರಿಟಿಷರ ದಾಸ್ಯದಿಂದ ಮುಕ್ತಿ ಸಿಕ್ಕಿದ್ದು.

ಜೋಸೆಫ್ ಪ್ರೀಸ್ಟ್ಲಿ ಆಮ್ಲಜನಕ ವನ್ನ ಕಂಡು ಹಿಡಿದಿದ್ದು ೧೭೭೪, ಆಗಸ್ಟ್ ತಿಂಗಳಿನಲ್ಲಿ.