ಮನೋರಂಜನೆ ಮತ್ತು ಮಕ್ಕಳು

” ವಿದ್ಯುಚ್ಛಕ್ತಿ ತಡೆಯಿಲ್ಲದೆ ಸರಬರಾಜಿದ್ದರೆ ಜನ ತಡ ರಾತ್ರಿವರೆಗೂ ಟೀ ವೀ ನೋಡಿ ಮಲಗಿಬಿಡುವುದರಿಂದ ಮಕ್ಕಳನ್ನು ಉತ್ಪಾದಿಸಲು ಅವಕಾಶ ಸಿಗದು ಎಂದು ನಮ್ಮ ಸನ್ಮಾನ್ಯ ಕೇಂದ್ರ ಆರೋಗ್ಯ ಮಂತ್ರಿ ಗುಲಾಂ ನಬಿ ಆಜಾದ್ ಭಾರತದ ಜನ ಸಂಖ್ಯೆ ತಡೆಯಲು ತಮ್ಮದೇ ಆದ ಸುವರ್ಣ ಸೂತ್ರ ಬೋಧಿಸಿದರು. ಇದು ಎಷ್ಟು ಯಶಸ್ವಿ ಸೂತ್ರವೋ ಏನೋ ಕಾಲವೇ ಹೇಳಬೇಕು.

ನನ್ನ  ಪ್ರಕಾರ ಜನಸಂಖ್ಯೆ ವೃಧ್ಧಿಗೂ ಮನೋರಂಜನೆಗೂ ಯಾವುದೇ ಸಂಬಂಧವಿಲ್ಲ. ಲೈಂಗಿಕ ಕ್ರಿಯೆ ನಡೆಸುವವನಿಗೆ ಕರೆಂಟ್ ಇದ್ದರೂ ಬಿಟ್ಟರೂ ಕಾಮ ಕೇಳಿಗೆ ಯಾವ ಅಡಚಣೆಯೂ ಬರದು. ಉದಾಹರಣೆಗೆ ಒಬ್ಬ ಶ್ರಮಜೀವಿ ತನ್ನ ಕೆಲಸ ಮುಗಿಸಿ ದಣಿದು ಮನೆಗೆ  ಬಂದಾಗ ಅವನಿಗೆ ಬೇಕಿದ್ದರೆ ಲೈಂಗಿಕ ಕ್ರಿಯೆ ನಡೆಸಿಯೇ ತೀರುತ್ತಾನೆ. ಇನ್ನು ಅವನಿಗೆ ಪೂರಕ ಮನೋರಂಜನೆಯನ್ನು ಕೊಟ್ಟು ನೋಡಿ. ಕೆಲಸ ಮುಗಿಸಿ ದಣಿದು ಬಂದು ಒಂದಿಷ್ಟು ವಿಶ್ರಮಿಸಿ ಟೀವೀ ನೋಡುತ್ತಾನೆ. ಟೀವೀಯಲ್ಲಿ ತೋರಿಸುವುದಾದರೂ ಏನನ್ನು? ಬಿಪಾಶಾಳ ಮೈಮಾಟವನ್ನೂ, ನಿಹಾ ಧುಪಿಯಾಳ ಅಂಗಸೌಷ್ಟವವನ್ನೂ ಅಲ್ಲವೇ? ಇದನ್ನು ನೋಡಿದ ನಮ್ಮ ಉಪ್ಪು ಹುಳಿ ತಿಂದ ಶ್ರಮ ಜೀವಿ ಇನ್ನ್ನಷ್ಟು ಉದ್ರೇಕಗೊಂಡು ರತಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳದೆ ಇರುತ್ತಾನೆಯೇ? ಎಲ್ಲಾ ರೀತಿಯ ಮನೋರಂಜನೆಯನ್ನು ನೀಡಿದ ಮತ್ತು ಪಡೆದ ಮಾಜಿ ಮಂತ್ರಿ ಮಹೋದಯರಾದ ಲಾಲೂ ಪ್ರಸಾದ್ ಅವರಿಗೆ ಎಷ್ಟು ಮಕ್ಕಳೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ? 

ಜನಸಂಖ್ಯೆ ಅ ನಿಯಂತ್ರಣಕ್ಕೆ ಬೇಕಿರುವುದು ಅತ್ಯಂತ  ಪ್ರಭಾವೀ ಮತ್ತು ಜ ಕ್ರಿಯಾತ್ಮಕ ಅಭಿಯಾನ. ಮಕ್ಕಳ ಸಂಖ್ಯೆ ನಿರ್ಧರಿಸುವುದು ಗಂಡಾದರೆ  ಆಗುವ  ಅಭಾಸ ಜನಸಂಖ್ಯೆಯ ಹೆಚ್ಚಳ.  ಉತ್ತರ ಭಾರತದ ಹಳ್ಳಿಯೊಂದರಲ್ಲಿ ಮಹಿಳೆಯೊಬ್ಬರು ಮಕ್ಕಳ ಸಂಖ್ಯೆ ನಿರ್ಧರಿಸುವುದು ಗಂಡಾದ್ದರಿಂದ ನಾವು ಅಸಹಾಯಕರೆಂದು ಆಂಗ್ಲ ಪತ್ರಿಕೆಯ ವರದಿಗಾರ್ತಿಗೆ ತಿಳಿಸಿದಳು.  ಆರೋಗ್ಯ ಮಂತ್ರಿಗಳ ಸೂತ್ರದ ಬಗ್ಗೆ ಕೇಳಿದಾಗ “ಓರ್ವ ಗಂಡು ಮತ್ತು ಚಂಡಮಾರುತ ಮೇಲೆರಗುವ ಮೊದಲು ಮುನ್ಸೂಚನೆಗಳನ್ನೇನೂ ಕೊಡುವುದಿಲ್ಲ” ಎಂದು ಹಾಸ್ಯ ಚಟಾಕಿ ಹಾರಿಸಿದಳು. ನಮ್ಮ ಕಾಲದಲ್ಲಿ ಪ್ರತಿಯೊಬ್ಬರಿಗೂ 13 ಮಕ್ಕಳಿದ್ದು ಈಗ ಕುಟಂಬ ಯೋಜನೆ ಪ್ರಭಾವದಿಂದ ನಾಲ್ಕರಿಂದ ಆರಕ್ಕೆ ಇಳಿದಿದೆ  ಎಂದು ವಯಸ್ಸಾದ ಮಹಿಳೆಯೊಬ್ಬರು ಹೇಳಿದರು. ಈ ವರದಿಗಳನ್ನು ನೋಡಿದಾಗ  ನಮಗನ್ನಿಸುವುದು ಮಕ್ಕಳ ಸಂಖ್ಯೆ ನಿರ್ಧರಿಸುವುದರಲ್ಲಿ ಗಂಡಿನ ಪಾತ್ರವೂ ಮತ್ತು ಹೆಣ್ಣುಮಕ್ಕಳಲ್ಲಿ ಶಿಕ್ಷಣದ ಕೊರತೆಯೂ ಇರುವುದು.

ಇನ್ನು ಕೆಲವೊಂದು ಸ್ವಾರಸ್ಯಕರವಾದ ಅಂಕಿ ಅಂಶಗಳತ್ತ ದೃಷ್ಟಿ ಹರಿಸೋಣ.
೧. ಭಾರತದಲ್ಲಿ ಜನಸಂಖ್ಯೆ ವಿಪರೀತ ಹೆಚ್ಚುತ್ತಿದೆ.
ತಪ್ಪು. ನಿಜವೆಂದರೆ ೧೯೮೧ ರಿಂದ ಜನಸಂಖ್ಯೆ ಇಳಿಯುತ್ತಿದೆ.

೨. ಜನಸಂಖ್ಯೆ ಅವಿದ್ಯಾವಂತರಲ್ಲೂ ಮತ್ತು ಗ್ರಾಮೀಣರಲ್ಲೂ ಹೆಚ್ಚಳ ಕಾಣುತ್ತಿದೆ.
ಇಲ್ಲ. ಗ್ರಾಮೀಣ ಜನರಲ್ಲೂ ಮತ್ತು ನಗರ ವಾಸಿಗಳಲ್ಲೂ ೭೦ ರ ದಶಕಕ್ಕೆ ಹೋಲಿಸಿದಾಗ ಜನಸಂಖ್ಯೆ  ಶೇಕಡಾ ೪೪ ರಷ್ಟು ಇಳಿತ ಕಂಡಿದೆ.

೩. ಜನಸಂಖ್ಯೆ ಆಹಾರ ಉತ್ಪಾದನೆಯನ್ನು ಹಿಂದಕ್ಕೆ ಹಾಕಿದೆ.
ಇಲ್ಲ. ಆಹಾರ ಉತ್ಪಾದನೆ ೧೯೪೭ ರ ನಂತರ ನಾಲ್ಕು ಪಟ್ಟು ಹೆಚ್ಚಿದ್ದು ಅದೇ ಸಮಯ ಜನಸಂಖ್ಯೆ ಮೂರು ಪಟ್ಟು ಹೆಚ್ಚಿದೆ.

೪. ದೊಡ್ಡ ಜನಸಂಖ್ಯೆ ಬಡತನಕ್ಕೆ ಕಾರಣ.
ತಪ್ಪು. ಬಾಂಗ್ಲಾದೇಶ ೧೯೭೫ ರಿಂದ ೧೯೯೮ ರವರೆಗೆ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಗ್ರಹಿಸಿದ್ದು ಇನ್ನೂ ಬಡ ರಾಷ್ಟ್ರವಾಗಿಯೇ ಉಳಿದಿದೆ.

ಒಂದು ಎರಡು ಬೇಕು…

family-planningಒಂದು ಎರಡು ಬೇಕು ಮೂರು ಮಕ್ಕಳು ಸಾಕು. ೭೦ ರ ದಶಕದಲ್ಲಿ ನಮ್ಮ ನಿಶಾ ಚಟುವಟಿಕೆ ಜೋರಾದಾಗ ಸರಕಾರ ನಿಷೇಧಾಜ್ಞೆ ಜಾರಿ ಮಾಡಿದ್ದು ಹೀಗೆ. ತದನಂತರ ಇಲಿ ಹೆಗ್ಗಣಗಳು FCI ಗೋಡೌನ್ನಿನ ದವಸ ಧಾನ್ಯಗಳನ್ನು ನುಂಗಿ ಹಾಕಿದಾಗ ಆ ಪ್ರಮಾದವನ್ನು ಮರೆಮಾಚಲು ಮತ್ತೊಂದು ಬಾಣ ಬಿಟ್ಟಿತು ಸರಕಾರ; food grain shortage ಇದೆ, ಮ್ಯಾಟಿನೀ, ಫರ್ಸ್ಟ್ ಶೋ ಎರಡು ದೆಖಾವೆಗಳು ಸಾಕು, ಆರತಿಗೊಬ್ಬ, ಕೀರ್ತಿಗೊಬ್ಬಳು ಅಂತ. ಸ್ವಲ್ಪ ವರ್ಷಗಳ ನಂತರ ರಾಜೀವ್ ಗಾಂಧಿಯ ವಿದೇಶ ಪ್ರವಾಸ ಜಾಸ್ತಿಯಾಗಿ ಮುಂದುವರಿದ ರಾಷ್ಟ್ರಗಳನ್ನು ನೋಡಿ one is fun ಎಂದು ನಮ್ಮ ಚೇಷ್ಟೇಗಳಿಗೆ ಪೂರ್ಣ ವಿರಾಮ ಹಾಕಿತು. ಇದ್ಯಾವುದರ ರಗಳೆಯೂ ಬೇಡ let us find middle course ಎಂದು ೨ ಮಕ್ಕಳಿಗೆ ಇನಿಂಗ್ಸ್ ಡಿಕ್ಲೇರ್ ಮಾಡಿದೆವು ನಾವು.

ಬ್ರಿಟಿಷ್ ಏಕಲವ್ಯ

brian31ಬ್ರಿಟಿಷ್ ರಾಜಧಾನಿ ಲಂಡನ್ನಿನಲ್ಲಿ ಒಬ್ಬ ಪ್ರತಿಭಟನಾಕಾರನ ಕತೆ ಕೇಳಿ. ಯಾರ ಸಹಾಯವೂ ಇಲ್ಲದೆ ಶಸ್ತ್ರಾಸ್ತ್ರ ವಿದ್ಯೆ ಕಲಿತ  ಏಕಲವ್ಯನಂತೆ ಈತ ಒಂಟಿಯಾಗಿ ಬ್ರಿಟಿಷ್ ಸರಕಾರದ ವಿದೇಶಾಂಗ ನೀತಿಯ ವಿರುದ್ಧ ಸಮರ ಸಾರಿದ್ದಾನೆ. ಸುಮಾರು ಎಂಟು ವರ್ಷಗಳಿಂದ ಬ್ರಿಟಿಷ್ ಸಂಸತ್ತಿನ ಎದುರು ಡೇರೆ ಹಾಕಿ ಕುಳಿತಿರುವ ಈತ ಮಾಜಿ ಪ್ರಧಾನಿ ಬ್ಲೇರ್ಗಿಂತ ಹೆಚ್ಚು ಜನಪ್ರಿಯ ವ್ಯಕ್ತಿ. ಈ ಆದುನಿಕ ಏಕಲವ್ಯನ ಹೆಸರು ಬ್ರಯನ್ ಹಾವ್,ಬಡಗಿ ಮತ್ತು ೭ ಮಕ್ಕಳ ತಂದೆ. ಅಮೇರಿಕೆಯಲ್ಲಿ ನಡೆದ ಸೆಪ್ಟೆಂಬರ್ ೧೧,೨೦೦೧ ಧಾಳಿಯ ೩ ತಿಂಗಳ ಮೊದಲೇ ಈತ ಇರಾಕಿನ ವಿರುದ್ಧದ ಆರ್ಥಿಕ ದಿಗ್ಬಂಧನದ ವಿರುದ್ಧ ಹೋರಾಟಕ್ಕಿಳಿದ. “Stop Killing Kids”, “Make Peace Not War”,“Let Iraqi Infants Live”,ಮುಂತಾದ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಜನರ ಗಮನ ತನ್ನೆಡೆ ಸೆಳೆದ. ವಿಶೇಷವಾಗಿ “Baby killers” and “Tony B Liar”ಎನ್ನೋ ಭಿತ್ತಿಚಿತ್ರ ಪ್ರದರ್ಶಿಸಿದ ಈತ ಇಷ್ಟು ವರ್ಷಗಳ ಕಾಲ ಈ ರೀತಿ ಪ್ರತಿಭಟನೆಗೆ ಇಳಿಯುತ್ತಾನೆಂದು ಯಾರೂ ಭಾವಿಸಿರಲಿಲ್ಲ. brian-hawe3

ಬ್ರಿಟಿಷ್ ಸಂಸತ್ತಿನ ಚೌಕದ ಮುಂದೆ ಮತ್ತು ಪ್ರಧಾನಿ ಅಧಿಕೃತ ನಿವಾಸ 10,Downing streetನ ಬಹು ಸಮೀಪ ಡೇರೆ ಹಾಕಿರುವ ಈತನನ್ನು ಒಮ್ಮೆ ಡಜನ್ಗಟ್ಟಲೆ ಪೊಲೀಸರು ಬಂದು ಓಡಿಸಲು ಪ್ರಯತ್ನ ಪಟ್ಟರೂ ಜುಮ್ಮೆನ್ನದೆ ಅಲ್ಲೇ ಬೀಡು ಬಿಟ್ಟಿದ್ದಾನೆ. ಈ ಪೋಲಿಸ್ ಕ್ರಮದ ಬಗ್ಗೆ ಅಲ್ಲಿನ ಪ್ರಸಿದ್ದ ಪತ್ರಿಕೆಗಳು ( The DailyTelegraph ran the story with a headline: “Police sent 78 to quell loneprotester.” )ವರದಿ ಮತ್ತು ಲೇವಡಿ ಮಾಡಿ ಬರೆದಾಗ ಸರಕಾರಕ್ಕೆ ಕಸಿವಿಸಿ ಆಗಿ ಆತನನ್ನು ಅವನ ಪಾಡಿಗೆ ಬಿಡಲು ನಿರ್ಧರಿಸಿತು.ಇಂಗ್ಲೆಂಡಿನ ಕ್ರೂರ ಚಳಿಗೂ ಸೊಪ್ಪು ಹಾಕದೆ ತನ್ನ ಡೇರೆಯಲ್ಲೇ  ಕಳೆಯುವ ಈತ ಚಳಿ ಬಗ್ಗೆ ಕೇಳಿದರೆ ಆಫ್ಘಾನಿಸ್ತಾನದಲ್ಲಿ ಭೂಕಂಪದ ನಂತರ ಬೆಟ್ಟ ಗುಡ್ಡ ಮೇಲಿರುವ ಎಲ್ಲವನ್ನೂ ಕಳೆದುಕೊಂಡ ಪುಟ್ಟ ಬಾಲಕಿಯರ ಬಗ್ಗೆ ಮಾತನಾಡಿ ಈ ಚಳಿ ಅದಕ್ಕೆ ಹೋಲಿಸಿದರೆ ದೊಡ್ಡದೇನೂ ಅಲ್ಲ ಎನ್ನುತ್ತಾನೆ. ಹೀಗೆ ನಿಷ್ಠುರವಾಗಿ ತನ್ನ ಮತ್ತು ಅಮೆರಿಕೆಯ ಸರಕಾರಗಳನ್ನು ತರಾಟೆಗೆ ತೆಗೆದುಕೊಳ್ಳುವ ಬ್ರಯನ್ ಹಾವ್ ಎಷ್ಟು ದಯಾಮಯಿ ಎಂದು ಅನ್ನಿಸದಿರದೆ?

ಲಂಡನ್ನಿನ ಆಕರ್ಷಣೆಗಳಲ್ಲಿ ಬ್ರಯನ್ ಹಾವ್ ಒಬ್ಬ ಎಂದರೂ ಸರಿಯೇ.