ಯಾರ ಸೋಲು, ಯಾರ ಗೆಲುವು

ಬೆಂಗಳೂರು ನಗರ ಕಾತುರದಿಂದ ಕಾಯುತ್ತಿದ್ದ ಕ್ರಿಕೆಟ್ ವಿಶ್ವ ಕಪ್ ಪಂದ್ಯಾವಳಿಯ ಭಾರತ ಇಂಗ್ಲೆಂಡ್ ನಡುವಿನ ಹಣಾಹಣಿ ರೋಮಾಂಚಕಾರಿಯಾಗಿ ಕೊನೆಗೊಂಡಿತು. ಗೆಲ್ಲಲು ೩೩೮ ರ ಗುರಿಯನ್ನು ಕೆಚ್ಚೆಯಿಂದ ಸ್ವೀಕರಿಸಿದ ಅಂಡ್ರೂ ಸ್ಟ್ರಾಸ್ ನ ಬಂಟರು ಗೆಲುವಿನ ಹೊಸ್ತಿಲಿನವರೆಗೂ ಬಂದು ಬರಿಗೈಲಿ ಹೋದರು. ಬರಿಗೈಲಿ ಹೋದರು ಆದ್ರೆ  ಹೋಗಿದ್ದು ಮಾತ್ರ ಹಿಗ್ಗುತ್ತಾ, ಮುಗುಳ್ನಗುತ್ತಾ. ಭಾರತೀಯರ ಹೃದಯಗಳು ಅವರ ಬಾಯಿಗಳಿಗೆ ಬರುವಂತೆ ಮಾಡಿದ ನಮ್ಮ ಮಾಜಿ ಯಜಮಾನರುಗಳು ತಾವೆಂಥಾ ಆಟಗಾರರೆಂದು ವಿಸ್ಮಯಕಾರಕವಾಗಿ ತೋರಿಸಿದರು. ವಿಪರೀತ ಕೇಕೆ ಹಾಕುವ ಬೆಂಗಳೂರಿನ ಜನರ  ಸದ್ದಡಗಿಸುತ್ತೇವೆ ಎನ್ನುವಂಥ ಸ್ಪಿನ್ನೆರ್ “ಸ್ವಾನ್” ನ ಹೇಳಿಕೆಗೆ ನ್ಯಾಯ ಒದಗಿಸುವಂತೆ ಆಡಿದ ಇಂಗ್ಲೆಂಡ್ ನಾಯಕ ತನ್ನ ಜೀವನದ ಅತ್ಯುತ್ತಮ ಇನ್ನಿಂಗ್ಸ್ ಅನ್ನು ಬೆಂಗಳೂರಿಗರಿಗೆ ಉಣಬಡಿಸಿದ.

ಆದರೆ ೩೩೯ ಮಾಡಿದ್ದು ನಮ್ಮ ಸಾಹಸವಲ್ಲವೇ? ಅಷ್ಟೇ ಅಲ್ಲ ಆ ಗುರಿ ಮುಟ್ಟದಂತೆ ತಡೆಯುವಲ್ಲಿ ನಾವು ಯಶಸ್ವಿಯಾಗಲಿಲ್ಲವೇ? no. a resounding NO. ೩೩೯ ಮಾಡಿ ಮುನ್ನೂರರ ಒಳಗೆ ಅವರ ಇನ್ನಿಂಗ್ಸ್ ಅನ್ನು ಕವುಚಿ ಬಿಟ್ಟಿದ್ದರೆ ನಾವು ಹೆಮ್ಮೆ ಪಡಬಹುದಿತ್ತು. ಆ ರೀತಿ ಮಾಡದೆ ಶತ್ರು ನಮ್ಮ ಅಡುಗೆ ಮನೆ ತನಕ ನುಸುಳಲು ಬಿಟ್ಟಿದ್ದು ನಮ್ಮ ಸೋಲು. ಇಲ್ಲಿ ನಮ್ಮ ಬೌಲಿಂಗ್ ನ ಬಂಡವಾಳ ಬಟಾ ಬಯಲಾಯಿತು. mediocre bowling ಎನ್ನುವ ಹಣೆ ಪಟ್ಟಿ ಸಿಗುವಂತೆ ಮಾಡಿತು. ಹೌದು ಜಹೀರ್ ಖಾನ್ ಆಟದ ಗತಿಯನ್ನೇ ಬದಲಿಸಿದ ಆ ಅದ್ಭುತ ಓವರ್ ಅನ್ನು unleash ಮಾಡದೆ ಇದ್ದಿದ್ದರೆ ಇಂಗ್ಲೆಂಡ್ ಆಟಗಾರರು ಚಿನ್ನಸ್ವಾಮಿ ಮೈದಾನದ ಪ್ರದಕ್ಷಿಣೆ ಹಾಕುತ್ತಿದ್ದರು ಕೇಕೆ ಹಾಕುತ್ತಾ.  ತನ್ನ ವಯಸ್ಸು ನಾಚುವಂತೆ ಶತಕಗಳ ಮೇಲೆ ಶತಕ ಸಿಡಿಸುತ್ತಿರುವ ತೆಂಡೂಲ್ಕರ್ ಅವರ ಈ ಶತಕವೂ ಮತ್ತೊಂದು ಅಂಕಿ ಅಂಶವಾಗಿ ಉಳಿಯಿತೇ ವಿನಃ “ಅಂತಿಮ ನಗು” ವಿನ ರೋಮಾಂಚನವನ್ನು ನೀಡಲಿಲ್ಲ.

believe me, ನಾನು ಗಂಡಸೇ ಅಲ್ಲಾ…

“I am not a man, godman Nityananda told CID sleuths”. ಹಾಂ? ಮೂರ್ಛೆ ಹೋದಿರಾ ಇದನ್ನು ಕೇಳಿ? ಎಂಥ master stroke ನೋಡಿ ಈ ಯೋಗಿಯದು. ನೀವು ಕನಸಿನಲ್ಲಾದರೂ ನೆನೆಸಿದ್ದಿರೋ ಈ  flirting master ನಮ್ಮ ಕ್ರಿಕೆಟ್ನ ಮಾಸ್ಟರ್ ಬ್ಲಾಸ್ಟರ್ ರೀತಿ ಬಿಡು ಬೀಸಾಗಿ ಧಾಳಿ ಮಾಡುತ್ತಾನೆಂದು? ನಾನು ಗಂಡೇ ಅಲ್ಲ ! ಎಂಥ ಗಂಡೂ ನಿಜವಾಗಿಯೂ ಗಂಡೇ ಅಲ್ಲದಿದ್ದರೂ ಈ ಮಾತನ್ನು ಆಡಲು ಹಿಂಜರಿಯುತ್ತಾನೆ. ಯಾರೋ ಒಬ್ಬರು ಹೇಳಿದರು I am not a man, but Godman ಎಂದು ಆತ ಹೇಳಬೇಕಿತ್ತು ಎಂದು. ನನ್ನ ಪ್ರಕಾರ ಅವನು ಹೀಗೆ ಹೇಳಬೇಕಿತು, ನಾನು ಮನುಷ್ಯನಲ್ಲ, ಮನುಷ್ಯ ರೂಪದಲ್ಲಿರುವ ಮತ್ತೇನೋ, ನಾನು ನಿಮ್ಮ ಊಹೆಗೆ ನಿಲುಕದ ವ್ಯಕ್ತಿಯಲ್ಲ ವಗೈರೆ, ವಗೈರೆ. ನಾವು ಮೂಲತಃ ಇಂಥ ಕಪಟಿ ಗಳನ್ನು ನಂಬುವವರು, ನಮಗೆ ಮಂತ್ರವಾದಿಗಳು, ಮೋಸ ಮಾಡುವ ದೇವ ಮಾನವರು ಎಂದರೆ ಪಂಚ ಪ್ರಾಣ, ಈ ಜನ ನಮ್ಮ ಮೇಲೆ ಪಂಚ ಭೂತಗಳನ್ನು ಪ್ರಯೋಗ ಮಾಡಿದರೂ ನಮಗೆ ಅವರ ಮೇಲೆ ಅತೀವ ಭಕ್ತಿ, ವಿಶ್ವಾಸ. ಈ ನಮ್ಮ ದೌರ್ಬಲ್ಯವನ್ನು ಉಪಯೋಗಿಸಿ ಪೊಲೀಸರನ್ನೂ, ತನ್ನನ್ನು ತೆಗಳುವವರನ್ನೂ ಈ ನಿತ್ಯಾನಂದ ಕನ್ಫ್ಯೂಸ್ ಮಾಡಿದ್ದರೆ ಕಾನೂನಿನ ಕೋಳ ತಪ್ಪಿಸಿಕೊಂಡು ಮತ್ತೊಮ್ಮೆ ಬಳೆಗಳ ಹಿಂದೆ ಓಡಬಹುದಿತ್ತು.       

ಪುರುಷ ತನ್ನ erectile ಸಾಮರ್ಥ್ಯದ ಬಗ್ಗೆ ಅನುಮಾನ ಇದ್ದರೂ ದೊಡ್ಡ macho ರೀತಿಯ ಫೋಸ್ ಕೊಡುತ್ತಾನೆ. ಗಂಡ್ಸಾ ದರೆ ಬಾರೋ ಎಂದು ಚಾಲೆಂಜ್ ಮಾಡುವುದಿದೆ. ಆದರೆ ನಾನು ಗಂಡೇ ಅಲ್ಲ ಕಣೋ ಅಂದು ಬಿಟ್ಟರೆ? ಮರ್ಯಾದೆ ಬಿಟ್ಟು ಮಾನ ಸಂಪಾದಿಸುವ ಚಾಣಾಕ್ಷತನ. ನಾನು ಮಂತ್ರಮುಗ್ಧನಾದೆ ಈ ವ್ಯಕ್ತಿಯ ಚಾಣಾಕ್ಷತನಕ್ಕೆ. ನನ್ನ ಶುಕ್ರವಾರದ ಬೆಳಗಿನ ಮಂಪರು ಎಗರಿ ಹೋಯಿತು ನಿತ್ಯಾನಂದನ ಈ ಯಾರ್ಕರ್ ಗೆ. ಈಗ ನಮ್ಮ ಪೊಲೀಸರು ಏನು ಮಾಡಬಹುದು? doppler test ಅಂತೂ ಇದ್ದೇ ಇದೆ ಅನ್ನಿ. ಈ ಟೆಸ್ಟ್ ನಲ್ಲಿ ರಕ್ತ ಸಂಚಲನದ ತೀವ್ರತೆಯನ್ನು ಕಂಡು  ಹಿಡಿಯುತ್ತಾರೆ. ಬಹುಶಃ ಈ ಪರೀಕ್ಷೆಯಲ್ಲಿ ಗೊತ್ತಾಗಬಹುದು. ನಿತ್ಯಾನಂದನ ಈ ಸಮಸ್ಯೆಗೆ ಪೊಲೀಸರು ಕಚ್ಚೆ ಇಳಿಸಬಹುದು, ಆದರೂ ನಾನು ಗಂಡಲ್ಲ ಎಂದು ಅವನು ಹಠ ಹಿಡಿದು ಕೂತರೆ? ಅವನೊಂದಿಗೆ ಮರ, ಅಲ್ಲಲ್ಲ ಮಂಚ ಸುತ್ತಿದ ಲಲನಾ ಮಣಿಗಳನ್ನು ಪೊಲೀಸರು ಬುಲಾವ್ ಮಾಡಬಹುದೇ ನಿತ್ಯಾನಂದನನ performance evaluation ಮಾಡಲು?

ಭಾರತ ಒಂದು ದೊಡ್ಡ drama stage. ಯಾವ ಯಾವ ರೀತಿಯ, ವಿಶ್ವವೇ ಮೂಗಿನ ಮೇಲೆ ಬೆರಳಿಟ್ಟುಕೊಂಡು ಬೆರಗಾಗಿ ನೋಡುವ ಒಂದು ಡ್ರಾಮ ನಮ್ಮ ಭಾರತ.

ನೀವೇನಂತೀರಾ? ಏನಾದರೂ ಅನ್ನಿ, ತಮಾಷೆಗೆ ಕೂಡ ನಾನು ಗಂಡಲ್ಲ ಎನ್ನಬೇಡಿ ಮಾರಾಯ್ರೆ.