ಬುಧ್ಧನ ಪಲಾಯಾನ
ಬುದ್ಧಂ ಶರಣಂ ಗಚ್ಚಾಮಿ, ಧರ್ಮಂ ಶರಣಂ ಗಚ್ಚಾಮಿ ಎನ್ನುತ್ತಾ ಇರು ಎಂದ ಓರ್ವ ತರುಣನಿಗೆ ಡಿಸ್ಕೋ ಬ್ಯಾಂಡ್ ಪಸಂದ್ ಆಗಿ ಆಶ್ರಮ ಬಿಟ್ಟು ಓಡಿದ. ದಲೈ ಲಾಮ ತಮ್ಮ ಅವತಾರ ಎಂದು ನೇಮಿಸಿದ್ದ ಒಸೇಲ್ ಹಿತಾ ತೋರ್ರೆಸ್ ಗೆ ತೋಚಿದ್ದು ತಾನು ಸುಳ್ಳಿನ ಬದುಕನ್ನು ಬದುಕುತ್ತಿದ್ದೇನೆಂದು. “It was like living a lie,”
೫ ತಿಂಗಳ ಮಗುವಾಗಿದ್ದಾಗ ಈತನನ್ನು ಆಶ್ರಮದಲ್ಲಿ ನೋಡಿದ ಒಬ್ಬರು ಇವನಲ್ಲಿ ದಲೈ ಲಾಮರ ಅವತಾರವನ್ನು ಕಂಡರು. ೧೯೮೬ ರಲ್ಲಿ ಈತನಿಗೆ ೧೪ ತಿಂಗಳು ವಯಸ್ಸಾದಾಗ ಅವನ ಪಾಲಕರು ಧರ್ಮಶಾಲೆಗೆ ದಲೈ ಲಾಮರಲ್ಲಿ ಕರೆತಂದರು ಮತ್ತು ೯ ಮಕ್ಕಳಲ್ಲಿ ಲಾಮಾರ ಅವತಾರವಾಗಲು ಇವನನ್ನು ಚುನಾಯಿಸಲಾಯಿತು.
ನನ್ನನ್ನು ನನ್ನ ಪಾಲಕರಿಂದ ದೂರ ಮಾಡಿ ಮಧ್ಯ ಯುಗದ ಜೀವನಕ್ಕೆ ನನ್ನನ್ನು ತಳ್ಳಿದರು ಎಂದು ದೂರುವ ಈತ ಈ ಜೀವನದಿಂದ ಬಹಳಷ್ಟು ನರಳಿದ್ದೇನೆ ಎಂದು ಹೇಳುತ್ತಾನೆ.
ದೇವರು ಮನುಷ್ಯನನ್ನು ತನ್ನ ಅವತಾರ ಎಂದು ಸೃಷ್ಟಿಸಿ ಅವನಿಗಾಗಿಯೇ ಸಕಲ ವಸ್ತುಗಳನ್ನೂ ಸೃಷ್ಟಿಸಿ ಸುಖಿಸು ಎಂದರೆ ದೇವನ ಅಪ್ಪಣೆಗೆ ವಿರುದ್ಧವಾಗಿ ನಾವು ನಡೆದು ವಿರಕ್ತರಾದರೆ ಇದೇ ಪರಿಸ್ಥಿತಿಯೋ ಏನೋ?