* ಮುಂದಿನ ಪಂದ್ಯ ಕ್ರಿಕೆಟ್ನ ಸ್ವರ್ಗ ಈಡನ್ ಗಾರ್ಡನ್ಸ್ ನಲ್ಲಿ

ನಾಗಪುರದ ಟೆಸ್ಟ್ ಪಂದ್ಯದಲ್ಲಿ ಭಾರತದ ಪ್ರದರ್ಶನ ವೀಕ್ಷಿಸಿದವರಿಗೆ ಬಾಕಿ ಎರಡು ಪಂದ್ಯಗಳ ಹಾದಿ ಯಾವುದು ಎಂದು ತಿಳಿಯಲು ಯಾವ ಜ್ಯೋತಿಷಿಯ ಭವಿಷ್ಯದ ಅವಶ್ಯಕತೆ ಬರದು. ಆಟದ ಎಲ್ಲಾ ರಂಗಗಳಲ್ಲೂ – ಫೀಲ್ಡಿಂಗ್, ಬೌಲಿಂಗ್, ಬ್ಯಾಟ್ಟಿಂಗ್ ಮತ್ತು ನಾಯಕತ್ವ – ದಕ್ಷಿಣ ಆಫ್ರಿಕಾ ತಾನು ಉಚ್ಚ ಮಟ್ಟದ ತಂದ ಎಂದು ಜಗಜ್ಜಾಹೀರು ಮಾಡಿತು. ಸೋತ ಕಾರಣ ಸಾಮಾನ್ಯವಾಗಿ ನಮ್ಮ ಮಾಧ್ಯಮದವರು ಅನುಸರಿಸುವ ದಾರಿ ನಾನು ಹಿಡಿಯುವುದಿಲ್ಲ.   ಸೋತ ಕೂಡಲೇ ಭಾರತ ಮಣ್ಣು ಮುಕ್ಕಿತು, ಹೀನಾಯ ಸೋಲು…. ಹಾಗೆ ಹೀಗೆ ಎಂದು ಪುಂಖಾನು ಪುಂಖವಾಗಿ ಬರೆದು ತಂಡದ ಮನೋಸ್ಥೈರ್ಯವನ್ನು ಕುಗ್ಗಿಸುವ ಕೆಲಸವನ್ನೂ ಮಾಡುವುದಿಲ್ಲ. ಸೋಲು ಗೆಲುವು ಪಂದ್ಯದಲ್ಲಿ ಇದ್ದದ್ದೇ. ಕ್ರಿಕೆಟ್ನ ವಿಶೇಷತೆ ಏನಂದರೆ ಅದು ಮೂರನೆಯ ಸಂಭವನೀಯತೆಯನ್ನು ನೀಡುತ್ತದೆ; ಅದೇ ಡ್ರಾ. ಎಷ್ಟಿದ್ದರೂ cricket is a gentlemen’s game ಅಲ್ಲವೇ? ಡ್ರಾ ಬಿಡಿ ಹತ್ತು ನಿಮಿಷ ಹೆಚ್ಚಾಗಿ ಬ್ಯಾಟ್ ಮಾಡಿದ್ದರೆ ಪ್ರೋಟೀಯಾಗಳು ಮತ್ತೊಂದು ಇನ್ನಿಂಗ್ಸ್ ಆಡಿ ಇನ್ನಿಂಗ್ಸ್ ಸೋಲಿನ ಪ್ರತಿಷ್ಠೆಯಿಂದ ನಾವು ಪಾರಾಗಬಹುದಿತ್ತು. 
 
ಸಚಿನ್ ತೆಂಡೂಲ್ಕರ್ ಸೆಂಚುರಿ ಬಾರಿಸಿದ ಕೂಡಲೇ ಸಂತಸದಿಂದ ಬೀಗಿದ ನಾನು ಏನಾದರೂ ಸಾಹಸ ಮಾಡಿ ಏನಿಲ್ಲವೆಂದರೂ ಟೆಸ್ಟ್ ಅನ್ನು ಉಳಿಸಬಹುದೇನೋ ಎನ್ನುವ ಆಸೆ ಈಡೇರಲಿಲ್ಲ. ಸಹೋದ್ಯೋಗಿಯೊಬ್ಬ ಹೇಳಿದ ಮಾತು ಇಷ್ಟವಾಗದಿದ್ದರೂ ಸರಿ ಎನ್ನಿಸಿತು. ಆತ ಹೇಳಿದ್ದು ಸಚಿನ್ ನ ಸೆಂಚುರಿ “ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ” ಎಂದು. ಮಾತು ಖಾರವಾದರೂ ಆ ಸೆಂಚುರಿ ಯಾವ ಫಲವನ್ನೂ ನೀಡಲಿಲ್ಲ. ಗಾವಸ್ಕರನ ಸೆಂಚುರಿಗಳೂ ಹಾಗೇ ಅಲ್ಲವೇ? ಏನಾದರೂ ಪ್ರಯೋಜನ ಕಂಡಿದ್ದೀವಾ? 
 
ಮುಂದಿನ ಪಂದ್ಯ ಕ್ರಿಕೆಟ್ನ ಸ್ವರ್ಗ ಈಡನ್ ಗಾರ್ಡನ್ಸ್ ನಲ್ಲಿ. ನಮ್ಮ ತಂಡದವರು ಅಲ್ಲಿ ನಮಗೆ ನರಕದ ರುಚಿ ತೋರಿಸದಿದ್ದರೆ ಸಾಕು.