ವಯಸ್ಕರಿಗೆ ಮಾತ್ರ: ಸರ್ದಾರ್ಜಿ ಯ ತಿರುಗೇಟು

ಖುಷ್ವಂತ್ ಸಿಂಗ್ ರನ್ನು ಅರಿಯದವರು ವಿರಳ. ಅವರ ತಲೆಮಾರಿನ ತುಂಬಾ ಜನ ಉರುಳಿಕೊಂಡರೂ ಅವರು ಮಾತ್ರ ಇನ್ನೂ ನಾಟ್ ಔಟ್. the sunset club ಇವರ ಇತ್ತೀಚಿನ ಪುಸ್ತಕ. ಕಥೆಯ ಪಾತ್ರ ಬದುಕಿನ ಸಂಜೆಯಲ್ಲಿರುವ ಮೂವರು ಪುರುಷರ ಅನುಭವದ ಮೆಲುಕು. ಹಿಂದೂ ಮುಸ್ಲಿಂ, ಹಿಂದೂ ಸಿಖ್ ರಾಜಕೀಯ ಸೇರಿದಂತೆ ಎಲ್ಲವೂ ಇದೆ. ಎಲ್ಲವೂ ಇದೆ ಎಂದಾಗ ಸೆಕ್ಸ್ ಸಹ ಇದೆ ಎಂದು ಕೊಳ್ಳಿ. ಖುಷ್ವಂತ್ ಒಬ್ಬ ಪೋಲಿ ಲೇಖಕ. ಪೋಲಿ ಪದವನ್ನು abusive ಆಗಿ ಉಪಯೋಗಿಸಿಲ್ಲ. ಆ ಪುಸ್ತಕದ ಲ್ಲಿನ ಒಂದು ಜೋಕ್ ಬಗ್ಗೆ ಓದಿ, ಚೆನ್ನಾಗಿ ನಕ್ಕುಬಿಡಿ.

ಸರ್ದಾರ್ಜಿ ಬಗೆಗಿನ ಜೋಕುಗಳು ಭಾರತೀಯರ ಮೊಬೈಲುಗಳಲ್ಲಿ ರಾರಾಜಿತ. ಅವರ ಬಗ್ಗೆ ಇರುವುದನ್ನೂ, ಇಲ್ಲದ್ದನ್ನೂ ಹುಟ್ಟಿಸಿ ಸೃಷ್ಟಿಸಿದ ಜೋಕುಗಳು ಸರ್ದಾರ್ಜಿಗಳನ್ನು ತಿಕ್ಕಲು ಸ್ವಭಾದವರು ಎನ್ನುವ ರೀತಿ ಬಿಂಬಿಸುವುದನ್ನು ನಾವು ಕಂಡಿದ್ದೇವೆ. ಎಲ್ಲರ ಬಾಯಲ್ಲಿ ತನ್ನ ಬಗೆಗಿನ ಜೋಕುಗಳನ್ನು ಕೇಳಿ ಕೇಳಿ ಸರ್ದಾರ್ಜಿ ತಿರುಗೇಟು ನೀಡುತ್ತಾನೆ ಕೆಲಸಕ್ಕಾಗಿ ನಡೆದ ಸಂದರ್ಶನವೊಂದರಲ್ಲಿ.

ಸಂದರ್ಶನಕ್ಕೆಂದು ಕೋಣೆಯೊಳಗೆ ಹೋಗುವ ಸರ್ದಾರ್ಜಿ ಗೆ ಮೂವರು ಅಧಿಕಾರಿಗಳು ಕಾದಿರುತ್ತಾರೆ. ಅಧಿಕಾರಿಯೊಬ್ಬನ ಕೆಣಕುವ ಬುದ್ಧಿ ಜಾಗೃತವಾಗಿ ಅವನನ್ನು ಕೆಣಕಲು ನಿರ್ಧರಿಸಿ ಪ್ರಶ್ನೆ ಕೇಳಲು ಆರಂಭಿಸುತ್ತಾನೆ.

ಅಧಿಕಾರಿ: ಸರ್ದಾರ್, kooooooooo, ಛುಕ್ ಭುಕ್, ಛುಕ್, ಭುಕ್, kooooooooooo ಇದು ಯಾವುದರ ಶಬ್ದ? ಸರ್ದಾರ್ಜಿ: ಗೆಲುವಿನಿಂದ, ಅದು “ರೈಲು”, ರೈಲಿನ ಶಬ್ದ.

ಅಧಿಕಾರಿ: ಸರಿಯಾಗೇ ಹೇಳಿದಿರಿ, ಆದರೆ ಈ ರೈಲು ನಿಜಾಮುದ್ದೀನ್ ಎಕ್ಸ್ ಪ್ರೆಸ್ಸೋ, ರಾಜಧಾನಿ ಎಕ್ಸ್ ಪ್ರೆಸ್ಸೋ?

ಸರ್ದಾರ್ಜಿ: ರಾಜಧಾನಿ ಎಕ್ಸ್ ಪ್ರೆಸ್.

ಅಧಿಕಾರಿ: ನೋ, ತಪ್ಪು. ಇದು ನಿಜಾಮುದ್ದೀನ್ ಎಕ್ಸ್ ಪ್ರೆಸ್.

ಅಧಿಕಾರಿ: ಮತ್ತೊಂದು ಪ್ರಶ್ನೆ. ವೌ, ವೌ, ಬೌ, ಬೌ, ಬೌ, ಇದು ಯಾವುದರ ಶಬ್ದ?

ಸರ್ದಾರ್ಜೀ: ಆಹ್, ಇದು ನಾಯಿಯದು.

ಅಧಿಕಾರಿ: ವೆರಿ ಗುಡ್. ಇದು ಯಾವ ನಾಯಿಯ ಶಬ್ದ? doberman ಜಾತಿಯದೋ ಅಥವಾ spaniel ಜಾತಿಯದೋ?

 ಸರ್ದಾರ್ಜೀ: ತಲೆ ಕೆರೆದು ಕೊಳ್ಳುತ್ತಾ, ಇದು ಡಾಬರ್ಮನ್ ಜಾತಿಯದು.

ಅಧಿಕಾರಿ: ನೋ, ತಪ್ಪು. ಇದು spaniel.

ಈಗ ಸರ್ದಾರ್ಜೀಗೆ ಸ್ಪಷ್ಟವಾಗುತ್ತದೆ. ನನ್ನನ್ನು ಕೆಲಸಕ್ಕಾಗಿ ಸಂದರ್ಶಿಸಲು ಕರೆದಿದ್ದಲ್ಲ, ಬದಲಿಗೆ ಹೀಯಾಳಿಸಲು, ಹೇಗೂ ಬಂದಾಗಿದೆ, ಹೋಗುವ ಮೊದಲು ಇವರಿಗೂ ಒಂದು ಪಾಠ ಕಲಿಸೋಣ ಎಂದು, ನಾನೊಂದು ಪ್ರಶ್ನೆ ಕೇಳಲೇ ಎನ್ನುತ್ತಾನೆ. ಅಧಿಕಾರಿಗಳು ಓಹೋ, ಧಾರಾಳವಾಗಿ ಎಂದು ಸಮ್ಮತಿಸುತ್ತಾರೆ.

ಒಂದು ಕಾಗದದ ಹಾಳೆ ತೆಗೆದ ಸರ್ದಾರ್ ಹೆಣ್ಣಿನ ಯೋನಿಯ ಚಿತ್ರವನ್ನು ಬಿಡಿಸಿ, ಇದು ಏನು ಎಂದು ಹೇಳುವಿರಾ? ಎಂದು ಕೇಳುತ್ತಾನೆ. ಮೂರೂ ಅಧಿಕಾರಿಗಳು ಪುಳಕಿತರಾಗಿ ಒಕ್ಕೊರಲಿನಿಂದ “ಯೋನೀ” ಎನ್ನುತ್ತಾರೆ. ಸರ್ದಾರ್ಜೀ ಹೇಳುತ್ತಾನೆ, ಫೆಂಟಾಸ್ಟಿಕ್. ನೀವುಗಳು ಸರಿಯಾಗೇ ಹೇಳಿದಿರಿ. ಈಗ ಹೇಳಿ, ಈ ಯೋನಿ ನಿಮ್ಮ ತಾಯಿಯದೋ ಅಥವಾ ಸೋದರಿಯದೋ? ಅವಾಕ್ಕಾದ ಅಧಿಕಾರಿಗಳು ತಾವು ತೆರೆದ ಬಾಯಿಯನ್ನು ಮುಚ್ಚುವ ಮೊದಲೇ ಸರ್ದಾರ್ಜೀ ಗೆಲುವಿನ ನಗೆಯೊಂದಿಗೆ ಕಚೇರಿಯ ಮೆಟ್ಟಿಲು ಇಳಿದು ರಸ್ತೆ ಕಡೆ ಹೆಜ್ಜೆ ಹಾಕುತ್ತಾನೆ.

ದುರಂತ ಕಂಡ ಅತ್ರಿ ಪ್ರಕಾಶನ

ಕನ್ನಡಿಗನೊಬ್ಬನ ಕನ್ನಡ ಪುಸ್ತಕ ಮಾರುವ ಧಂಧೆ ಕನ್ನಡಿಗರ ಅಸಡ್ಡೆ, ನಿರುತ್ಸಾಹ, ಅವಗಣನೆ ಯಿಂದ ಯಾವ ರೀತಿ ಅವಸಾನದ ಅಂಚಿನಲ್ಲಿದೆ ಎನ್ನುವ ಒಂದು ಲೆಲ್ಹನವನ್ನು ಓದಿದೆ. ಕಣ್ಣಲ್ಲಿ ನೀರು ಬಂತು ಇದನ್ನು ಓದಿ. ಪರಭಾಷಾ ವ್ಯಾಮೋಹಕ್ಕೆ ಒಳಗಾಗಿ ನಮ್ಮ ಸ್ವಂತ ಭಾಷೆಯನ್ನೂ ಕಡೆಗಣಿಸುವ, ಅಷ್ಟೇ ಅಲ್ಲ ಆ ಕಡೆ ಗಣಿ ಸುವಿಕೆಗೆ ತಮ್ಮದೇ ಆದ ಕುತರ್ಕಗಳನ್ನು ನೀಡುವ ಮಂದಿ ಎಂದು ಎಚ್ಚೆತ್ತು ಕೊಳ್ಳುತ್ತಾರೋ ನೋಡಬೇಕು. ಪೂರ್ತಿ ಓದಿಗೆ ಕೆಳಗಿನ ಕೊಂಡಿ ಕ್ಲಿಕ್ಕಿಸಿ..

ಅತ್ರಿ ತಮ್ಮ ಪ್ರಕಾಶನವನ್ನು ಮುಚ್ಚಿದರು