ಅಪರೂಪದ ಚಿತ್ರಗಳು, ಅಪರೂಪ ಚೇತನಗಳದು…
ಗಾಂಧೀಜಿ ಗಡಿ ನಾಡ ಗಾಂಧೀ ಖಾನ್ ಅಬ್ದುಲ್ ಗಫ್ಫಾರ್ ಖಾನರೊಂದಿಗೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಖಾನ್ ಸಾಹೇಬರು ಭಾರತದ ಬಗ್ಗೆ ಉತ್ಕಟ ಪ್ರೀತಿ ಇಟ್ಟುಕೊಂಡಿದ್ದವರು. ಭಾರತದ ವಿಭಜನೆಯನ್ನು ಶತಾಯ ಗತಾಯ ವಿರೋಧಿಸಿದ್ದ ಭಾರತ ಮಾತೆಯ ಅಪೂರ್ವ, ನೆಚ್ಚಿನ ಪುತ್ರ ಖಾನ್ ಅಬ್ದುಲ್ ಗಫ್ಫಾರ್ ಖಾನ್ ರಿಗೆ “ಭಾರತ ರತ್ನ” ಪ್ರಶಸ್ತಿ ನೀಡುವ ಮೂಲಕ ದೇಶ ತನ್ನ ಕೃತಜ್ಞತೆ ಅರ್ಪಿಸಿತು.
ಗಾಂಧೀಜಿ, ನೆಹರೂ, ವಲ್ಲಬ್ಹ್ ಪಟೇಲ್ ಜೊತೆ
ಗಾಂಧೀಜಿ ರೈಲಿನಿಂದ ಇಳಿಯುತ್ತಿರುವುದು…
ಗಮನಿಸಿ, ಬೋಗಿ ಮೂರನೇ ದರ್ಜೆಯದು (third class). ಗಾಂಧೀಜಿ ಯಾವಾಗಲೂ ಈ ದರ್ಜೆಯಲ್ಲೇ ಪ್ರಯಾಣಿಸುತ್ತಿದ್ದರು. ಬೋಗಿ ಮೂರನೇ ದರ್ಜೆಯಾದರೂ ಮಹಾತ್ಮ ಹತ್ತಿದ ಕೂಡಲೇ ಮೂರನೇ ದರ್ಜೆಯ ಬೋಗಿ ಉನ್ನತ ಮಟ್ಟಕ್ಕೇರಿತು, ಅಲ್ಲವೇ?
ನೆಹರೂ ಕ್ರಿಕೆಟ್ ಮೈದಾನದಲ್ಲಿ



