ಒಬ್ಬ ಪ್ರೊಫೆಸರ್ ತಮ್ಮ ತತ್ವಶಾಸ್ತ್ರದ ತರಗತಿಯಲ್ಲಿ ತಮ್ಮೊಂದಿಗೆ ಒಂದಿಷ್ಟು ವಸ್ತುಗಳನ್ನು ತರುತ್ತಾರೆ. ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಒಂದು ದೊಡ್ಡ ಜಾಡಿಯೊಳಗೆ ( jar ) ಚೆಂಡುಗಳನ್ನು ಹಾಕಿ ಜಾಡಿ ತುಂಬಿತಾ ಎಂದು ಕೇಳುತ್ತಾರೆ. ವಿದ್ಯಾರ್ಥಿಗಳು ಹೌದು ತುಂಬಿತು ಎನ್ನುತ್ತಾರೆ. ನಂತರ ಪ್ರೊಫೆಸರ್ ಒಂದಿಷ್ಟು ಸಣ್ಣ ಸಣ್ಣ ಕಲ್ಲುಗಳನ್ನು ಜಾಡಿಯೊಳಕ್ಕೆ ಹಾಕಿ ಮತ್ತೊಮ್ಮೆ ಕೇಳುತ್ತಾರೆ ಜಾಡಿ ತುಂಬಿತಾ ಎಂದು. ವಿದ್ಯಾರ್ಥಿಗಳು ಹೌದು ಎನ್ನುತ್ತಾರೆ. ಮುಂದುವರೆದ ಪ್ರೊಫೆಸರ್ ಜಾಡಿಯೊಳಗೆ ಒಂದಿಷ್ಟು ಮರಳನ್ನು ಹಾಕಿ ಅಲ್ಲಾಡಿಸಿ ಕೇಳುತ್ತಾರೆ ಅದೇ ಪ್ರಶ್ನೆಯನ್ನು. ವಿದ್ಯಾರ್ಥಿಗಳು ಹೌದು ಸಾರ್ ಜಾಡಿ ತುಂಬಿದೆ ಎನ್ನುತ್ತಾರೆ. ಕೊನೆಗೆ ಪ್ರೊಫೆಸರ್ ಚೆಂಡುಗಳು, ಕಲ್ಲುಗಳು ಮತ್ತು ಮರಳು ತುಂಬಿದ ಜಾಡಿಯೊಳಗೆ ಎರಡು ಕಪ್ಪು ಕಾಫಿ ಹಾಕಿ ತುಮ್ಬಿಸಿದಾಗ ವಿದ್ಯಾರ್ಥಿಗಳು ಗೊಳ್ಳೆಂದು ನಗುತ್ತಾರೆ. ವಿದ್ಯಾರ್ಥಿಗಳನ್ನು ಉದ್ದೇಶಿ ಮಾತನಾಡುವ ಪ್ರೊಫೆಸರ್ ಹೇಳುತ್ತಾರೆ ಈ ಜಾಡಿ ನಿಮ್ಮ ಜೀವನದ ಹಾಗೆ. ಚೆಂಡುಗಳು ಜೀವನದ ಪ್ರಮುಖ ಅಂಗಗಳು; ನಿಮ್ಮ ದೇವರು, ಕುಟುಂಬ, ಮಕ್ಕಳು, ನಿಮ್ಮ ಆರೋಗ್ಯ ಮತ್ತು ಇತರೆ ಅಮೂಲ್ಯ ವಸ್ತುಗಳು. ಬೇರೆಲ್ಲೇ ನಷ್ಟ ಬಂದರೂ ಇವುಗಳಿದ್ದರೆ ನಿಮ್ಮ ಜೀವನ ನಡೆಯುತ್ತದೆ. ಕಲ್ಲುಗಳು ನಿಮ್ಮ ಉದ್ಯೋಗ, ಕಾರು ಮತ್ತು ಮನೆ ಇದ್ದ ಹಾಗೆ. ಮರಳು ಚಿಕ್ಕ ಪುಟ್ಟ ಸಂಗತಿಗಳು. ನೀವು ಮೊದಲಿಗೇ ಮರಳನ್ನು ಜಾಡಿಯೊಳಕ್ಕೆ ತುಂಬಿದರೆ ಚೆಂಡುಗಳಿಗೂ ಮತ್ತು ಕಲ್ಲುಗಳಿಗೂ ಸ್ಥಳವಿರುವುದಿಲ್ಲ ಜಾಡಿಯಲ್ಲಿ. ಬದುಕೂ ಸಹ ಹೀಗೆಯೇ. ಪ್ರಥಮವಾಗಿ ನೀವು ನಿಮ್ಮ ಬಗ್ಗೆ, ಕುಟುಂಬದ ಬಗ್ಗೆ, ಮಕ್ಕಳ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸಣ್ಣ ವಿಷಯಗಳ ಬಗ್ಗೆ ಹೆಚ್ಚು ಗಮನ ನೀಡಿದರೆ ಬದುಕಿನ ದೊಡ್ಡ ಆನಂದಗಳನ್ನು ನಿರ್ಲಕ್ಷ್ಯ ಮಾಡಿದಂತೆ. ಮಕ್ಕಳೊಂದಿಗೆ ಆಡಿ, ಮಡದಿಯ ಕಡೆ ಗಮನ ನೀಡಿ, ಬದುಕನ್ನು ಚೆನ್ನಾಗಿ ಅನುಭವಿಸಿ. ಬಾಕಿಯೆಲ್ಲ ಮರಳು, ಗೌಣ. ಈ ಮಾತನ್ನು ಮುಗಿಸಿ ಪ್ರೊಫೆಸರ್ ಹೊರಡಲು ನಿಂತಾಗ ವಿದ್ಯಾರ್ಥಿಯೊಬ್ಬಳು ಕೇಳುತ್ತಾಳೆ, ಹೌದು ಸಾರ್ ಆದರೆ ಆ ಎರಡು ಕಪ್ಪು ಕಾಫಿ ಯಾವುದನ್ನು ಪ್ರತಿನಿಧಿಸುತ್ತವೆ? ಇದನ್ನು ಕೇಳಿ ಪ್ರೊಫೆಸರ್ ನಗುತ್ತಾ ಹೇಳುತ್ತಾರೆ. ಒಳ್ಳೆಯ ಪ್ರಶ್ನೆ:
ನಿಮ್ಮ ಬದುಕು ಎಷ್ಟೇ ತುಂಬಿದೆ, ತೃಪ್ತಿಕರ ಎಂದು ನಿಮಗನ್ನಿಸಿದರೂ ನಿಮ್ಮ ಮಿತ್ರರೊಂದಿಗೆ ಕಾಫಿ ಕುಡಿಯಲು ಸಮಯ ಇದ್ದೇ ಇರುತ್ತದೆ. ಇದನ್ನು ಕೇಳಿ ವಿದ್ಯಾರ್ಥಿಗಳು ಮೂಕವಿಸ್ಮಿತರಾಗಿ ಧನ್ಯತಾ ಭಾವದಿಂದ ಹೊರನಡೆಯುತ್ತಾರೆ.
how ever busy you are, stop once in a while and smell the grass, ಅಲ್ವಾ
“ರಾಮ ಮಂದಿರದ ಬಗ್ಗೆ ಮುಸ್ಲಿಮರು ಹಿಂದೂಗಳ ಭಾವನೆಗಳನ್ನು ಗೌರವಿಸಬೇಕು” ಎಂದು ದ್ವಾರಕ ಪೀಠದ ಶಂಕರಾಚಾರ್ಯ ಶ್ರೀ ಸ್ವಾಮಿ ಸ್ವರೂಪಾನಂದ ಸರಸ್ವತಿ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು times of india ದಲ್ಲಿ ಸುದ್ದಿ. ಖಂಡಿತ. ವಿವಿಧ ಧರ್ಮಗಳ ಜನ ಬದುಕುತ್ತಿರುವ ಭಾರತದಲ್ಲಿ ಎಲ್ಲರೂ ಧರ್ಮ ಸಹಿಷ್ಣುತೆಯನ್ನು ಮೆರೆಯಬೇಕು. ಅಯೋಧ್ಯೆಯ ವಿವಾದವನ್ನು ಎಲ್ಲರೂ ಕುಳಿತು ದ್ವೇಷದ ಮನಸ್ಥಿತಿ ಬಿಟ್ಟು ಮಾತನಾಡಿದರೆ ಖಂಡಿತ ಅದಕ್ಕೆ ಪರಿಹಾರ ಸಿಗುವ ಸಾಧ್ಯತೆ ಇದೆ. “ಕ್ರೈಸ್ತರಿಗೆ ವ್ಯಾಟಿಕನ್ ಮತ್ತು ಮುಸ್ಲಿಮರಿಗೆ ಪವಿತ್ರ ಮಕ್ಕ ಇರುವಂತೆ ಹಿಂದೂಗಳಿಗೆ ರಾಮ ಜನ್ಮ ಭೂಮಿ ಪವಿತ್ರವಾದುದು” ಎಂದು ಸ್ವಾಮೀಜಿ ಹೇಳಿದರು. ಈ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಯಬೇಕು ಎಂದೂ ಅವರು ಒತ್ತಿ ಹೇಳಿದರು. ಆದರೆ ರಾಜಕಾರಣಿಗಳ ಕೈಯಲ್ಲಿ ಯಾವುದಾದರೂ ಸಮಸ್ಯೆ ನೀತಿಯುತವಾಗಿ, ಶಾಂತಿಯುತವಾಗಿ ಪರಿಹಾರವಾಗಿದ್ದಿದೆಯೇ? ಮುಸ್ಲಿಮರ ಮನ ಗೆದ್ದು ಮಂದಿರ ಕಟ್ಟುವ ಬದಲು ಕೆಲವು ಸಂಘಟನೆಗಳು ಮನಸ್ಸನ್ನು ಒಡೆಯುವ ಕೆಲಸ ಸೊಗಸಾಗಿ ಮಾಡಿದವು. ಸಾಕಷ್ಟು ರಕ್ತಪಾತವನ್ನೂ ಹರಿಸಿದವು. ಶತಮಾನಗಳಿಂದ ಶಾಂತವಾಗಿ ಬದುಕುತ್ತಿದ್ದ ಜನರ ನಡುವೆ ಹಗೆತನದ ಗೋಡೆ ಕಟ್ಟಿ ನಿಲ್ಲಿಸಿದವು. ಪೂರ್ವ ಪಶಿಮ ಜರ್ಮನಿಗಳ ನಡುವೆ ನಿಂತಿದ್ದ ಬರ್ಲಿನ್ ಗೋಡೆ ಜನರ ಪ್ರೀತಿ, ಒಟ್ಟಿಗೆ ಬಾಳುವ ಅದಮ್ಯ ಆಸೆಯ ಮುಂದೆ ನೆಲ ಕಚ್ಚಿತು. ಆದರೆ ಹಿಂದೂ ಮುಸ್ಲಿಮರ ನಡುವಿನ ದ್ವೇಷದ ಗೋಡೆ? ಆ ಗೋಡೆ ಕರಗಳು ಸಂಘಟನೆಗಳು ಮಾತ್ರವಲ್ ಮಾಧ್ಯಮಗಳೂ ಬಿಡುತ್ತಿಲ್ಲ.