ವಯಸ್ಕರಿಗೆ ಮಾತ್ರ: ಸರ್ದಾರ್ಜಿ ಯ ತಿರುಗೇಟು

ಖುಷ್ವಂತ್ ಸಿಂಗ್ ರನ್ನು ಅರಿಯದವರು ವಿರಳ. ಅವರ ತಲೆಮಾರಿನ ತುಂಬಾ ಜನ ಉರುಳಿಕೊಂಡರೂ ಅವರು ಮಾತ್ರ ಇನ್ನೂ ನಾಟ್ ಔಟ್. the sunset club ಇವರ ಇತ್ತೀಚಿನ ಪುಸ್ತಕ. ಕಥೆಯ ಪಾತ್ರ ಬದುಕಿನ ಸಂಜೆಯಲ್ಲಿರುವ ಮೂವರು ಪುರುಷರ ಅನುಭವದ ಮೆಲುಕು. ಹಿಂದೂ ಮುಸ್ಲಿಂ, ಹಿಂದೂ ಸಿಖ್ ರಾಜಕೀಯ ಸೇರಿದಂತೆ ಎಲ್ಲವೂ ಇದೆ. ಎಲ್ಲವೂ ಇದೆ ಎಂದಾಗ ಸೆಕ್ಸ್ ಸಹ ಇದೆ ಎಂದು ಕೊಳ್ಳಿ. ಖುಷ್ವಂತ್ ಒಬ್ಬ ಪೋಲಿ ಲೇಖಕ. ಪೋಲಿ ಪದವನ್ನು abusive ಆಗಿ ಉಪಯೋಗಿಸಿಲ್ಲ. ಆ ಪುಸ್ತಕದ ಲ್ಲಿನ ಒಂದು ಜೋಕ್ ಬಗ್ಗೆ ಓದಿ, ಚೆನ್ನಾಗಿ ನಕ್ಕುಬಿಡಿ.

ಸರ್ದಾರ್ಜಿ ಬಗೆಗಿನ ಜೋಕುಗಳು ಭಾರತೀಯರ ಮೊಬೈಲುಗಳಲ್ಲಿ ರಾರಾಜಿತ. ಅವರ ಬಗ್ಗೆ ಇರುವುದನ್ನೂ, ಇಲ್ಲದ್ದನ್ನೂ ಹುಟ್ಟಿಸಿ ಸೃಷ್ಟಿಸಿದ ಜೋಕುಗಳು ಸರ್ದಾರ್ಜಿಗಳನ್ನು ತಿಕ್ಕಲು ಸ್ವಭಾದವರು ಎನ್ನುವ ರೀತಿ ಬಿಂಬಿಸುವುದನ್ನು ನಾವು ಕಂಡಿದ್ದೇವೆ. ಎಲ್ಲರ ಬಾಯಲ್ಲಿ ತನ್ನ ಬಗೆಗಿನ ಜೋಕುಗಳನ್ನು ಕೇಳಿ ಕೇಳಿ ಸರ್ದಾರ್ಜಿ ತಿರುಗೇಟು ನೀಡುತ್ತಾನೆ ಕೆಲಸಕ್ಕಾಗಿ ನಡೆದ ಸಂದರ್ಶನವೊಂದರಲ್ಲಿ.

ಸಂದರ್ಶನಕ್ಕೆಂದು ಕೋಣೆಯೊಳಗೆ ಹೋಗುವ ಸರ್ದಾರ್ಜಿ ಗೆ ಮೂವರು ಅಧಿಕಾರಿಗಳು ಕಾದಿರುತ್ತಾರೆ. ಅಧಿಕಾರಿಯೊಬ್ಬನ ಕೆಣಕುವ ಬುದ್ಧಿ ಜಾಗೃತವಾಗಿ ಅವನನ್ನು ಕೆಣಕಲು ನಿರ್ಧರಿಸಿ ಪ್ರಶ್ನೆ ಕೇಳಲು ಆರಂಭಿಸುತ್ತಾನೆ.

ಅಧಿಕಾರಿ: ಸರ್ದಾರ್, kooooooooo, ಛುಕ್ ಭುಕ್, ಛುಕ್, ಭುಕ್, kooooooooooo ಇದು ಯಾವುದರ ಶಬ್ದ? ಸರ್ದಾರ್ಜಿ: ಗೆಲುವಿನಿಂದ, ಅದು “ರೈಲು”, ರೈಲಿನ ಶಬ್ದ.

ಅಧಿಕಾರಿ: ಸರಿಯಾಗೇ ಹೇಳಿದಿರಿ, ಆದರೆ ಈ ರೈಲು ನಿಜಾಮುದ್ದೀನ್ ಎಕ್ಸ್ ಪ್ರೆಸ್ಸೋ, ರಾಜಧಾನಿ ಎಕ್ಸ್ ಪ್ರೆಸ್ಸೋ?

ಸರ್ದಾರ್ಜಿ: ರಾಜಧಾನಿ ಎಕ್ಸ್ ಪ್ರೆಸ್.

ಅಧಿಕಾರಿ: ನೋ, ತಪ್ಪು. ಇದು ನಿಜಾಮುದ್ದೀನ್ ಎಕ್ಸ್ ಪ್ರೆಸ್.

ಅಧಿಕಾರಿ: ಮತ್ತೊಂದು ಪ್ರಶ್ನೆ. ವೌ, ವೌ, ಬೌ, ಬೌ, ಬೌ, ಇದು ಯಾವುದರ ಶಬ್ದ?

ಸರ್ದಾರ್ಜೀ: ಆಹ್, ಇದು ನಾಯಿಯದು.

ಅಧಿಕಾರಿ: ವೆರಿ ಗುಡ್. ಇದು ಯಾವ ನಾಯಿಯ ಶಬ್ದ? doberman ಜಾತಿಯದೋ ಅಥವಾ spaniel ಜಾತಿಯದೋ?

 ಸರ್ದಾರ್ಜೀ: ತಲೆ ಕೆರೆದು ಕೊಳ್ಳುತ್ತಾ, ಇದು ಡಾಬರ್ಮನ್ ಜಾತಿಯದು.

ಅಧಿಕಾರಿ: ನೋ, ತಪ್ಪು. ಇದು spaniel.

ಈಗ ಸರ್ದಾರ್ಜೀಗೆ ಸ್ಪಷ್ಟವಾಗುತ್ತದೆ. ನನ್ನನ್ನು ಕೆಲಸಕ್ಕಾಗಿ ಸಂದರ್ಶಿಸಲು ಕರೆದಿದ್ದಲ್ಲ, ಬದಲಿಗೆ ಹೀಯಾಳಿಸಲು, ಹೇಗೂ ಬಂದಾಗಿದೆ, ಹೋಗುವ ಮೊದಲು ಇವರಿಗೂ ಒಂದು ಪಾಠ ಕಲಿಸೋಣ ಎಂದು, ನಾನೊಂದು ಪ್ರಶ್ನೆ ಕೇಳಲೇ ಎನ್ನುತ್ತಾನೆ. ಅಧಿಕಾರಿಗಳು ಓಹೋ, ಧಾರಾಳವಾಗಿ ಎಂದು ಸಮ್ಮತಿಸುತ್ತಾರೆ.

ಒಂದು ಕಾಗದದ ಹಾಳೆ ತೆಗೆದ ಸರ್ದಾರ್ ಹೆಣ್ಣಿನ ಯೋನಿಯ ಚಿತ್ರವನ್ನು ಬಿಡಿಸಿ, ಇದು ಏನು ಎಂದು ಹೇಳುವಿರಾ? ಎಂದು ಕೇಳುತ್ತಾನೆ. ಮೂರೂ ಅಧಿಕಾರಿಗಳು ಪುಳಕಿತರಾಗಿ ಒಕ್ಕೊರಲಿನಿಂದ “ಯೋನೀ” ಎನ್ನುತ್ತಾರೆ. ಸರ್ದಾರ್ಜೀ ಹೇಳುತ್ತಾನೆ, ಫೆಂಟಾಸ್ಟಿಕ್. ನೀವುಗಳು ಸರಿಯಾಗೇ ಹೇಳಿದಿರಿ. ಈಗ ಹೇಳಿ, ಈ ಯೋನಿ ನಿಮ್ಮ ತಾಯಿಯದೋ ಅಥವಾ ಸೋದರಿಯದೋ? ಅವಾಕ್ಕಾದ ಅಧಿಕಾರಿಗಳು ತಾವು ತೆರೆದ ಬಾಯಿಯನ್ನು ಮುಚ್ಚುವ ಮೊದಲೇ ಸರ್ದಾರ್ಜೀ ಗೆಲುವಿನ ನಗೆಯೊಂದಿಗೆ ಕಚೇರಿಯ ಮೆಟ್ಟಿಲು ಇಳಿದು ರಸ್ತೆ ಕಡೆ ಹೆಜ್ಜೆ ಹಾಕುತ್ತಾನೆ.

ಈ ವೆಬ್ ತಾಣ ನಿಷಿದ್ಧ

عزيزي المستخدم، 

Dear User,

عفواً، الموقع المطلوب غير متاح.

Sorry, the requested page is unavailable.



إن كنت ترى أن هذه الصفحة ينبغي أن لا تُحجب تفضل بالضغط هنا. 

If you believe the requested page should not be blocked please click here.

ಬೇಡದ ವೆಬ್ ತಾಣಕ್ಕೆ ಭೆಟ್ಟಿ ನೀಡುವ ದಾರ್ಷ್ಟ್ಯತನ ತೋರಿದರೆ ಸೌದಿ ಯಲ್ಲಿರುವ ಇಂಟರ್ನೆಟ್ ಇಲಾಖೆ ಈ ಸಂದೇಶವನ್ನು ರವಾನಿಸುತ್ತದೆ. ಧರ್ಮಬಾಹಿರ, ಲೈಂಗಿಕ, ಹಿಂಸಾತ್ಮಕ contents ಇರುವ ತಾಣಗಳನ್ನು ತಡೆ ಹಿಡಿಯುತ್ತಾರೆ. ಹಾಗೇನಾದರೂ ನಿಮಗೆ ಅವರ ತೀರ್ಪಿನ ಬಗ್ಗೆ ತಕರಾರಿದ್ದರೆ ಈ ಮೇಲ್ ಮೂಲಕ  ಸಂಪರ್ಕಿಸ ಬಹುದು. world sex ತಾನವನ್ನು ನನಗಾಗಿ ಬಿಚ್ಚಿ ಕೊಡಪ್ಪ ಎಂದು ಯಾರಾದರೂ “ಮೇಲ್” ಮನವಿ ಸಲ್ಲಿಸಿಯಾರೆ? 
ಒಮ್ಮೆ times of india ತಾಣವನ್ನು ಒಂದು ದಿನದ ಮಟ್ಟಿಗೆ ನಿಷೇಧಿಸಿದ್ದರು. ಆದರೆ ಅಚ್ಚರಿದಾಯಕವಾಗಿ ಸೌದಿಯ ಇಂಟರ್ನೆಟ್ ನಿರ್ಬಂಧ  ನಮ್ಮ ನೆರೆಯ ಚೀನಾದಷ್ಟು ಇಲ್ಲ. ಹಾಗೆಯೇ ಈಗ ನಡೆಯುತ್ತಿರುವ ಈಜಿಪ್ಟ್ ಸರ್ವಾಧಿಕಾರದ ವಿರುದ್ಧದ ಸಮಯ ಅಲ್ಲಿನ ಸರಕಾರ ಅಂತರ್ಜಾಲವನ್ನು ನಿಷೆಧಿಸಿದರೂ ಸೌದಿ ಆ ನಿಲುವನ್ನು ತಾಳಲಿಲ್ಲ. ಅಷ್ಟೊಂದು supremely confident ಇಲ್ಲಿನ ರೂಲರ್ ಗಳು.    

ನಗ್ನ ಪ್ರದರ್ಶನ

ಓರ್ವ ಮಹಿಳೆಯನ್ನು ನಗ್ನಳನ್ನಾಗಿಸಿ ಮರಕ್ಕೆ ಕಟ್ಟಿ ಹಾಕಿದ ದೃಶ್ಯ ನೋಡಿ ದಂಗಾದ ವ್ಯಕ್ತಿಯೊಬ್ಬ ಕೂಡಲೇ 911 ಕ್ಕೆ ಫೋನಾಯಿಸಿ ಪೊಲೀಸರನ್ನು ಕರೆಸುತ್ತಾನೆ. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಅಲ್ಲೇ ಅಡ್ಡಾಡುತ್ತಿದ್ದ ಒಬ್ಬ ವ್ಯಕ್ತಿ ಕಾಣಲು ಸಿಗುತ್ತಾನೆ. ಅವನನ್ನೂ, ಮರಕ್ಕೆ ಕಟ್ಟಿ ಹಾಕಲ್ಪಟ್ಟ ನಿಸ್ಸಹಾಯಕ ನೀರೆಯನ್ನೂ ಪ್ರಶ್ನಿಸಿದಾಗ ಕೃತ್ಯ ಬಯಲಿಗೆ ಬರುತ್ತದೆ. ಇಬ್ಬರೂ ಹೇಳಿದ್ದು ಪರಸ್ಪರರ ಅನುಮತಿಯೊಂದಿಗೆ (consensual rendezvous) ನಗ್ನತೆಯ ಸರ್ಕಸ್ ಏರ್ಪಟ್ಟಿದ್ದು ಎಂದು. ಯಾರನ್ನೂ ಬಂಧಿಸದೆ ಪೊಲೀಸರು ಮರಳಿದರು ನಗ್ನ ಮಹಿಳೆಯ ಅಂಗಸೌಷ್ಟವನ್ನು ಕಣ್ಣಿನಲ್ಲಿ ತುಂಬಿಸಿಕೊಂಡು. ಇದು ನಡೆದಿದ್ದು ಅಮೆರಿಕೆಯ ವಾಷಿಂಗ್ಟನ್ ರಾಜ್ಯದ ಟಕೋಮ ನಗರದ ಒವೆನ್ ಬೀಚ್ ಏರಿಯಾದಲ್ಲಿ. ಅಮೇರಿಕಾ land of opportunities ಮಾತ್ರವಲ್ಲ land of whimsical ideas ಕೂಡಾ ಎಂದು ಮೇಲಿನ ಘಟನೆ ನಮಗೆ ತಿಳಿಸುತ್ತದೆ. ನಮ್ಮಲ್ಲಿ ಈ ತೆರನಾದ ಘಟನೆ ನಡೆದಿದ್ದರೆ ? ಈ ದೃಶ್ಯವನ್ನು ಕಂಡವ ಪೊಲೀಸರಿಗೆ ಫೋನಾಯಿಸುವ ಬದಲು ಅಲ್ಲೇ ಅಡ್ಡಾಡುತ್ತಿದ್ದ ಆಕೆಯ ಪ್ರಿಯಕರನನ್ನು ಮತ್ತೊಂದು ಕಂಬಕ್ಕೆ ಕಟ್ಟಿ ಹಾಕಿ “ಕನ್ಸೆನ್ಸುವಲ್ ರಾನ್ಡೇವೂ” ಸಾಹಸದ ನೈಜ ಪಾಠ ಹೇಳುತ್ತಿದ್ದನೋ ಏನೋ?

ಹೀಗೊಂದು ಸ್ವಾರಸ್ಯಕರ “ಪಂಪು”

ಕನ್ನಡದ ಪ್ರಸಿದ್ಧ ವೆಬ್ ತಾಣವೊಂದರಲ್ಲಿ “ಹೆಸರಲ್ಲಿ ಏನಿದೆ” ಶೀರ್ಷಿಕೆಯಡಿ ಒಂದು ಲೇಖನ ಬಂದಿತ್ತು. ಅದರಲ್ಲಿ ಕೆಲವೊಂದು ರಾಜ್ಯಗಳ ಜನರ ಹೆಸರುಗಳು ಬೇರೊಂದು ರಾಜ್ಯಗಳಲ್ಲಿ ಯಾವ ರೀತಿ ಆಭಾಸವಾಗಿ ಕಾಣುತ್ತದೆ ಎಂದು ಲೇಖಕಿ ಬರೆದಿದ್ದರು. ಚಟ್ಟೋಪಾಧ್ಯಾಯ ಎನ್ನುವ ಉತ್ತರಭಾರತದ ಹೆಸರು ನಮಗೆ “ಚಟ್ಟ’ ಕಟ್ಟೋದ ರಲ್ಲಿ ಫೇಮಸ್ ಎಂದು ತೋರುತ್ತದೆ. ಅದೇ ಲೇಖನದಲ್ಲಿ “ ಇಂಟರ್ವ್ಯೂವ್ ಗೆ ಬಂದಿದ್ದ ’Vivek Tulluri’ ಎಂಬ ಆಂಧ್ರ ಯುವಕನ ಹೆಸರನ್ನು ಯಾವ ರೀತಿ ಕೆಡಸಿಟ್ಟಳು ಎಂದು ನಾನು ಬಾಯ್ಬಿಟ್ಟು ಹೇಳೋಲ್ಲಪ್ಪ…ಕನ್ನಡ ಬಂದ್ರೆ ನೀವೆ ಅರ್ಥ ಮಾಡ್ಕಳಿ!” ಎಂದು ನಿರ್ಭಿಡೆಯಾಗಿ ಬರೆದು ನನ್ನನ್ನು ಚಕಿತ ಗೊಳಿಸಿದರು. ಕೆಲವೊಮ್ಮೆ ಮಡಿವಂತರು ಅಧಿಕ ಇರುವ ವೆಬ್ ತಾಣದಲ್ಲಿ ಆ ರೀತಿಯ ಬಳಕೆ ಸ್ವಲ್ಪ ಕಷ್ಟವೇ. ಆದರೆ ಸುದೈವವಶಾತ್ ಯಾರೂ ಅದಕ್ಕೆ ದೊಡ್ಡ ರೀತಿಯ ತಕರಾರು ಮಾಡದೆ ಆನಂದಿಸಿದ್ದು ಲೇಖನಕ್ಕೆ ಬಂದ ಪ್ರತಿಕ್ರಿಯಗಳಿಂದ ತಿಳಿಯಿತು. “ಸನ್ನೆ” (sign) ಭಾಷೆಯ ಬಗ್ಗೆ ನಾನು ಒಂದು ಲೇಖನವನ್ನು ಇದೇ ವೆಬ್ ತಾಣಕ್ಕೆ ಕಳಿಸಿದ್ದೆ. ಪ್ರಕಟವಾದ ೨೪ ಘಂಟೆಗಳ ಒಳಗೆ ಅದನ್ನು ತಿಪ್ಪೆ ಸೇರಿಸಿದರು ನಿರ್ವಾಹಕರು. ಏಕೆಂದರೆ ಆ ಲೇಖನದಲ್ಲಿ ಜನ ಕೋಪಗೊಂಡಾಗ ಯಾವ ಯಾವ ರೀತಿಯ ಲ್ಲಿ ಹಾವಭಾವ ಪ್ರದರ್ಶಿಸಿ ತಮ್ಮ ಕೋಪ ತೋರಿಸುತ್ತಾರೆ ಎಂದು ಬರೆದು, f**k off ಎಂದು ಅರ್ಥ ಬರಲು “ಮಧ್ಯದ ಬೆರಳನ್ನು ಹೊರಕ್ಕೆ ತೂರಿಸಿ” ಪ್ರದರ್ಶಿಸುವ ಬಗ್ಗೆ ಬರೆದಿದ್ದೆ. ಅದು ಶಿಷ್ಟಾಚಾರಕ್ಕೆ ವಿರುದ್ಧವಾಗಿ ತೋರಿತು. ನಂತರ ನನಗೂ ಒಂದು ರೀತಿಯ ಅಪರಾಧೀ ಮನೋಭಾವ ಕಾಡಿತು, ಬರೆಯುವಾಗ ಒಂದಿಷ್ಟು discretion ಪ್ರದರ್ಶಿಸಬೇಕಿತ್ತು ಎಂದು. ನಾನು ಮೇಲೆ ಪ್ರಸ್ತಾಪ ಮಾಡಿದ “ಹೆಸರಲ್ಲಿ ಏನಿದೆ’ ಬರಹಕ್ಕೆ ಪ್ರತಿಕ್ರಿಯೆ ಬರೆಯಲು ಯತ್ನಿಸಿದೆ. ಪ್ರತಿಕ್ರಿಯೆ ಪೋಲಿ ಆಗಬಹುದೋ ಏನೋ ಎಂದು ಭಯ ಬಿದ್ದು ಅಲ್ಲಿ ಬರೆಯದೆ ನನ್ನ ಬ್ಲಾಗ್ ಗೆ ಅದನ್ನು ಬರೆದು ಹಾಕಲು ತೀರ್ಮಾನಿಸಿದೆ. ಏಕೆಂದರೆ “ಹಳೆ ಸೇತುವೆ” (ನನ್ನ ಬ್ಲಾಗ್) ಬಹಳಷ್ಟು ಪೋಲಿ ಕೆಲಸಗಳನ್ನ ಕಂಡ ಸೇತುವೆ. ಇಲ್ಲಿ ಏನೇ ಬರೆದರೂ “ಇವನು ತನ್ನ ಹಳೆ ಬುದ್ಧಿ ಬಿಡುವವನಲ್ಲ“ ಎಂದು ಕೈ ಚೆಲ್ಲಿ ಕೂರಬಹುದೇ ಅಷ್ಟೇ ನನ್ನ ಸೇತುವೆ. ಈಗ ಈ ಲೇಖನಕ್ಕೆ ಪ್ರೇರೇಪಣೆ ಆದ ವಿಷಯಕ್ಕೆ ನೇರವಾಗಿ ಬರೋಣ.

ನೀವೂ ಸಹ ನೋಡಿರಬಹುದು ಅಲ್ಲಲ್ಲಿ ಗೋಡೆ ಮೇಲೆ ನೀರಿನ ಪಂಪ್ ಒಂದರ ಜಾಹೀರಾತು. “TULLU” PUMP” ಅಂತ. ಅದು “ಟುಲ್ಲು” ಪಂಪೋ ಅಥವಾ ಉಚ್ಛಾರ ತಪ್ಪಿದಾಗ ಬೇರಾವುದಾದರೂ ಪಂಪೋ ನನಗೆ ಗೊತ್ತಿಲ್ಲ. ಆದರೆ ಅದನ್ನು ನೋಡಿದಾಗ ಮಾತ್ರ ಮನಸ್ಸು ಕಿಲ ಕಿಲ ಎಂದು ನಕ್ಕಿದ್ದಿದೆ. ಅದೇ ರೀತಿ “tulika’ ಎನ್ನುವ ಹೆಸರೂ ಅಷ್ಟೇ. ಈ ಹೆಸರನ್ನು ಇಟ್ಟುಕೊಂಡಾಕೆಯನ್ನು ಜೋರಾಗಿ, ಪೂರ್ತಿಯಾಗಿ ಕರೆಯಲೂ ಕಷ್ಟ, ಪ್ರೀತಿಯಿಂದ ಅರ್ಧ ಮಾಡಿ ಕರೆಯುವುದು ಇನ್ನೂ ಕಷ್ಟ. ಇದೆ ರೀತಿಯ ಇನ್ನೂ ತುಂಬಾ ಹೆಸರುಗಳಿವೆ. ಈ ಹೊತ್ತಿನಲ್ಲಿ ತೋಚಿದ್ದು ಇಷ್ಟು. ಇದನ್ನು ಓದುವವರು ತಮಗೆ ಕಿರಿಕ್ ಆಗಿ ತೋಚಿದ ಹೆಸರುಗಳನ್ನು ಪ್ರತಿಕ್ರಿಯೆ ಮೂಲಕ ಬರೆಯಬಹುದು…

ನನ್ನ ಸೇತುವೆ ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಳ್ಳುತ್ತದೆ, ಭಯ ಬೇಡ.

ಶುಭಾಶಯಗಳು

“ಬೆಟರ್ ಲೇಟ್ ದ್ಯಾನ್ ನೆವರ್” ಅಂತಾರೆ. ಜನವರಿ ಎರಡಾದರೇನಂತೆ ತಡವಾಗಿಯಾದರೂ ತಮಗೆಲ್ಲರೋಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹೊಸ ವರ್ಷದಲ್ಲಿ ಸಲ್ಪವಾಗಿ ಕಡಿಮೆ ಬರೆಯುತ್ತಿರುವವರು ಹೆಚ್ಚು ಬರೆಯಲಿ, ಹೆಚ್ಚು ಬರೆಯುತ್ತಿರುವವರು ಇನ್ನಷ್ಟು ಬರೆಯಲಿ ಎನ್ನುವ ಹಾರೈಕೆಗಳೊಂದಿಗೆ…

ಹೊಸ ವರುಷ ಎಂದಕೂಡಲೇ ನಮ್ಮ ಗಮನ ತಿರುಗುವುದು ಹೊಸ ಸಂಕಲ್ಪದೆಡೆಗೆ. ತೂಕ ಕಡಿಮೆ ಮಾಡ್ಬೇಕು, ವ್ಯಾಯಾಮ ಮಾಡ್ಬೇಕು, ಸಿಗರೆಟ್ ಬಿಡಬೇಕು, ಸೇಂದಿ ನಿಲ್ಲಿಸಿ ನೀರು ಹೆಚ್ಚು ಕುಡಿಯಬೇಕು, ಒಳ್ಳೆಯ ಹೆಂಡತಿಯಾಗಬೇಕು, ಆದರ್ಶ ತಂದೆಯಾಗಬೇಕು, ಉತ್ತಮ ಮಿತ್ರನಾಗಬೇಕು….ಹೀಗೆ ಸಾಗುತ್ತದೆ ಬಯಕೆಗಳ ಮೆರವಣಿಗೆ. ಆದರೆ ಶಾರೀರಿಕ ಮತ್ತು ಇತರೆ ಕುಂದು ಕೊರತೆಗಳ ಬಗ್ಗೆ ಗಮನ ಹರಿಸುವ ನಾವು ನಮ್ಮ ಬುದ್ಧಿ ಮತ್ತೆಯನ್ನು ಇನ್ನಷ್ಟು ವೃದ್ಧಿಸುವ ಕಡೆ ಯೋಚಿಸಿದರೆ ಎಷ್ಟು ಚೆಂದ ಅಲ್ಲವೇ? ವರುಷಗಳುರುಳಿದಂತೆ, ಸಂಕಲ್ಪಗಳು ಸೊರಗಿದಂತೆ, ನಮ್ಮ ಬುದ್ಧಿ ಶಕ್ತಿಯೂ ಕ್ಷೀಣಿಸುತ್ತದೆ ಎಂದು ನಮ್ಮ ನಂಬಿಕೆಯಾದರೆ ಇಲ್ಲಿದೆ ಶುಭ ವಾರ್ತೆ.

ಮೆದುಳಿನ ಶಕ್ತಿ ಎಳೆಯರಲ್ಲಿ ಮಾತ್ರವಲ್ಲ ಇಳಿ ವಯಸ್ಸಿನವರಲ್ಲೂ ತೀಕ್ಷ್ಣ ವಾಗಿರಲು ಸಾಧ್ಯ ಎಂದು ಒಬ್ಬ neurologist ತಮ್ಮ ಲೇಖನದಲ್ಲಿ ಬರೆಯುತ್ತಾರೆ. ಬದಕಿನ ಸಂಜೆಯಲ್ಲೂ ಹೊಸತನ್ನು ಹೇಗೆ ಕಲಿಯಬಹುದು ಎಂದು ಸವಿಸ್ತಾರವಾಗಿ ವರ್ಣಿಸಿದ್ದಾರೆ ಈ ಲೇಖಕ, ಲೇಖನವನ್ನು ಓದಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.

ಮತ್ತೊಮ್ಮೆ ಹೊಸ ವರುಷ, ಹೊಸ ಹರುಷ ದ ಹಾರೈಕೆಗಳು.

ಚಾಕಲೇಟ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ

ಚಾಕಲೇಟ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ? where?

ಶಾಪ್ಪಿಂಗ್ ಗೆಂದು ಮೊನ್ನೆ ಹೈಪರ್ ಮಾರ್ಕೆಟ್ ಗೆ ಹೋದೆವು. ಬೇಕಾದ ಸಾಮಾನುಗಳನ್ನು ತೆಗೆದುಕೊಂಡ ನಂತರ ನನ್ನ ಮಗಳು ಚಾಕಲೇಟ್ ಸೆಕ್ಷನ್ ಕಡೆ ಓಡಿದಳು. ಅವಳನ್ನು ಹಿಂಬಾಲಿಸಿದ ನಾನು ಸುಮಾರು ೨೦೦ ಮೀಟರ್ ಉದ್ದದ ಚಾಕಲೇಟ್ ಶೆಲ್ಫ್ ಗಳಲ್ಲಿ ಇಟ್ಟಿದ್ದ ತರಾವರಿ ಚಾಕಲೇಟ್ ಗಳನ್ನು ನೋಡುತ್ತಾ ಇದ್ದಾಗ ಒಂದು ಆಫರ್ ಕಣ್ಣಿಗೆ ಬಿತ್ತು. ಆಫರ್ ಇದ್ದದ್ದು ‘ಸ್ನಿಕ್ಕರ್ಸ್’ ಚಾಕಲೇಟ್ ಮೇಲೆ. ಒಂದು ಚಾಕಲೇಟ್ ಬಾರ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ. ಹತ್ತಿರ ನಿಂತಿದ್ದ ನನ್ನ ಪತ್ನಿ ಹೇಳಿದಳು ಪಾಪ, ಅಲ್ಲಿ ನಮ್ಮ ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಸಿದ್ದಾರೆ ಎಂದು ಜನ ಸಂಕಟ ಪಡುತ್ತಿದ್ದರೆ ಇಲ್ಲಿ ಅಗ್ಗದ ಪೆಟ್ರೋಲ್ ಸಾಲದು ಎಂದು ಫ್ರೀ ಬೇರೆ ಕೊಡುತ್ತಿದ್ದಾರೆ ಎಂದು ಕನಿಕರ ಪಟ್ಟಳು. ಆದರೆ ಈ ಕೊಡುಗೆಯನ್ನ ಜನ ಉಪಯೋಗಿಸಿ ಕೊಳ್ಳಲಾರರು. ಏಕೆಂದರೆ ಇಲ್ಲಿ ಪೆಟ್ರೋಲ್ ಗೆ ಲೀಟರ್ ಒಂದಕ್ಕೆ ಇಲ್ಲಿನ ೫೦ ಪೈಸ. ಅಂದರೆ ಹೆಚ್ಚು ಕಡಿಮೆ ಆರು ರೂಪಾಯಿಗಳು. ಚಾಕಲೇಟ್ ತಿಂದ ನಂತರ ಅದರ ಕವಚವನ್ನು ಜೋಪಾನವಾಗಿ ಇಟ್ಟುಕೊಂಡು ಪೆಟ್ರೋಲ್ ಹಾಕಿಸಿ ಕೊಳ್ಳುವ ಜಾಯಮಾನದವರಲ್ಲ ಅರಬರು. ಕವಚ ಹಿಡಿದು ಕೊಂಡು ಪೆಟ್ರೋಲ್ ಹಾಕಿಸಿ ಕೊಳ್ಳುವ ಅವಶ್ಯಕತೆ ನನಗಂತೂ ಇಲ್ಲ. ಕಂಪೆನಿಯ ಕಾರು, ಕಂಪೆನಿಯದೆ ಪೆಟ್ರೋಲು. ಯಾರದೋ ದುಡ್ಡು, ಎಲ್ಲಮನ್ ಜಾತ್ರೆ ಥರ. ಹಾಗಾಗಿ ಕವಚ ಸಲೀಸಾಗಿ ತಿಪ್ಪೆ ಸೇರುತ್ತದೆ.  

ಪೆಟ್ರೋಲ್ ಗೆ ಮೊದಲು ಒಂದು ಲೀಟರಿಗೆ ಇಲ್ಲಿನ ಒಂದು ರಿಯಾಲ್ ಇತ್ತು. ಅಂದರೆ ೧೨ ರೂಪಾಯಿ. ಕಳೆದ ವರ್ಷಗಳ ಹಿಂದೆ ದರ ಕಡಿತ ಮಾಡಿ ಆರು ರೂಪಾಯಿಗೆ ಇಳಿಸಿದರು. ಭಾರತದಲ್ಲಿ ‘ದರ ಕಡಿತ’ ಖಾದಿ ಭಂಡಾರ ಬಿಟ್ಟು ಬೇರೆಲ್ಲಾದರೂ ಕಂಡಿದ್ದೀರಾ?  

ಈಗ ಕರುಬದಿರಿ ನನ್ನ ಅದೃಷ್ಟಕ್ಕೆ. ನನ್ನ ‘ಟ್ರಾಲಿ’ ಯಲ್ಲಿರುವ ಒಂದು ಕೆಜಿ ಟೊಮೆಟೋ ಹಣ್ಣಿಗೆ ಭಾರತದ ಎಪ್ಪತ್ತು ರೂಪಾಯಿ ಪೀಕ್ತಾ ಇದ್ದೀನಿ. ಅಕ್ಕಿ ಕೆಜಿಗೆ ನಲವತ್ತಾರು ರೂಪಾಯಿ. ಸಮಾಧಾನ ಆಯಿತೆ? ಟೊಮೆಟೋ ಇಲ್ಲದೆ ಟೊಮೆಟೋ ಗೊಜ್ಜು  ಆಗುವಂತಿದ್ದರೆ? ಅಕ್ಕಿ ಇಲ್ಲದೆ ಅನ್ನ ಆಗುವಂತಿದ್ದರೆ?

ಕತ್ತೆ ಕಲಿಸಿದ ಪಾಠ

ಕತ್ತೆ ಎಂದ ಕೂಡಲೇ ಸೋಮಾರಿ, ಹೆಡ್ಡ, ಪೆದ್ದ ಎಂದೇ ನಮ್ಮ ಭಾವನೆ. ಯಾರಾದರೂ ಕರ್ಕಶವಾಗಿ ಹಾಡಿದರೆ ಆಹಾ, ಎಂಥ ಗಾರ್ದಭ ಸ್ವರ ಎಂದು ಗೇಲಿ. ಬಾಲ್ಯದ ನೆನಪು. ಐದನೇ ಕ್ಲಾಸಿನಲ್ಲಿ ಗಣಿತದಲ್ಲಿ ನಾನು ಹಿಂದೆ ಇದ್ದಿದ್ದರಿಂದ ಸುಶೀಲಮ್ಮ ಟೀಚರ್ ಬೆನ್ನಿಗೆ ಒಂದು ಏಟು ಹಾಕುತ್ತಾ ಹೇಳಿದ್ದು ‘ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯಿತು” ಅಂತ. ಇಷ್ಟಕ್ಕೇ ಸೀಮಿತ ಕತ್ತೆಯ ಬಗೆಗಿನ ನಮ್ಮ ಜ್ಞಾನ. ಕೆಳಗಿದೆ ನೋಡಿ ಕತ್ತೆ ನಮಗೆ ಕಲಿಸುವ ಬದುಕಿನ ಪಾಠ. ಯಶಸ್ವೀ ಬದುಕಿಗೆ ಬೇಕಾದ ಸೂತ್ರ ಕಲಿಸಲು ಸ್ಟೀಫನ್ ಕವೇ, ದೀಪಕ್ ಚೋಪ್ರ ಅಥವಾ “ಎಕ್ಹಾರ್ಟ್ ತೂಲೇ” ಯಂಥ ಮಾಡರ್ನ್ “ಗುರು” ಗಳೇ ಆಗಬೇಕೆಂದಿಲ್ಲ. ಕತ್ತೆಯೂ ಸಹ ಆಗಬಹುದು ಗುರುವರ್ಯ.

ಒಂದು ದಿನ ಓರ್ವ ರೈತನ ಕತ್ತೆ ಹಾಳು ಬಾವಿಯೊಳಕ್ಕೆ ಬಿದ್ದು ಬಿಡುತ್ತದೆ. ಕತ್ತೆಯ ಆಕ್ರಂದನ ಕೇಳಿ ರೈತ ಅಲ್ಲಿಗೆ ಧಾವಿಸಿ ಬಂದು ನೋಡುತ್ತಾನೆ. ಸ್ವಲ್ಪ ಹೊತ್ತು ಯೋಚಿಸಿ, ಏನು ಮಾಡಬೇಕೆಂದು ಹೊಳೆಯದೆ ಹೇಗೂ ಈ ಕತ್ತೆಗೆ ವಯಸ್ಸಾಗಿ ಬಿಟ್ಟಿದೆ, ಅಲ್ಲಿಗೇ ಮಣ್ಣು ಹಾಕಿ ಸಮಾಧಿ ಮಾಡಿದರಾಯಿತು ಎಂದು ತನ್ನ ಪರಿಚಿತರನ್ನು ಕರೆಯುತ್ತಾನೆ ಸಹಾಯಕ್ಕೆಂದು. ಎಲ್ಲರೂ ಸೇರಿ ಕತ್ತೆಯ ಮೇಲೆ ಮಣ್ಣನ್ನು ಅಗೆದು ಹಾಕಲು ಆರಂಭಿಸುತ್ತಾರೆ. ಮೊದಮೊದಲಿಗೆ ಸುಮ್ಮನಿದ್ದ ಕತ್ತೆಗೆ ಕೊನೆಗೆ ಹೊಳೆಯುತ್ತದೆ ಇವರು ನನ್ನನ್ನು ಉಳಿಸಲು ಅಲ್ಲ ಬಂದಿದ್ದು, ಬದಲಿಗೆ ಜೀವಂತ ಸಮಾಧಿ ಮಾಡಲು ಎಂದು ದೈನ್ಯತೆಯಿಂದ ಅಳಲು ಆರಂಭಿಸುತ್ತದೆ. ಕತ್ತೆಯ ಅಳು ಯಾರಿಗೂ ಕೇಳಿಸುವುದಿಲ್ಲ. ಸ್ವಲ್ಪ ಹೊತ್ತಿನ ನಂತರ ಕತ್ತೆ ತನ್ನ ಆಕ್ರಂದನ ನಿಲ್ಲಿಸಿ ತನ್ನ ಮೇಲೆ ಬೀಳುತ್ತಿದ್ದ ಮಣ್ಣನ್ನು ಕೊಡವಿ ಒಂದು ಹೆಜ್ಜೆ ಮೇಲೆ ಇಡುತ್ತದೆ. ಹೀಗೆ ಒಂದೇ ಸಮನೆ ತನ್ನ ಮೇಲೆ ಮಣ್ಣು ಬೀಳುತ್ತಿದ್ದರೂ ಕತ್ತೆ ಮಾತ್ರ ಸಾವಧಾನದಿಂದ ಮೈ ಕೊಡವುತ್ತಾ ಒಂದೊಂದೇ ಹೆಜ್ಜೆ ಗಳನ್ನು ಮೇಲಕ್ಕೆ ಇಡುತ್ತಾ ಹೋಗುತ್ತದೆ. ಇದನ್ನು ಗಮನಿಸಿದ ಜನರಿಗೆ ಆಶ್ಚರ್ಯ ಮತ್ತು ಸ್ವಲ್ಪ ಹೊತ್ತಿನಲ್ಲಿ ಕತ್ತೆ ಬಾವಿಯಿಂದ ಹೊರಕ್ಕೆ ಬಂದಿರುತ್ತದೆ. ಈ ವಿಸ್ಮಯದ ಬಗ್ಗೆ, ಕತ್ತೆಯ ಜಾಣ್ಮೆಯ ಬಗ್ಗ್ಗೆ ಜನ ತಮ್ಮ ತಮ್ಮಲ್ಲೇ ಮಾತನಾಡುತ್ತಿದ್ದರೆ ಕತ್ತೆ ಮಾತ್ರ ಅಳಿದುಳಿದ ಧೂಳನ್ನು ತನ್ನ ಮೈ ಮೇಲಿಂದ ಕೊಡವಿ ಗಾಂಭೀರ್ಯದಿಂದ ತನ್ನ ದಾರಿ ಹಿಡಿಯುತ್ತದೆ.

ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಗೂಡಿದರೆ ರಾಶಿ, ಹೆಜ್ಜೆ ಮೇಲೆ ಹೆಜ್ಜೆ ಇಟ್ಟಾಗ ಗುರಿಯ ಸಾಫಲ್ಯ.

ಈ ಕತೆ ಕಲಿಸುವ ನೀತಿ ಏನೆಂದರೆ, ಬದುಕು ನಿಮ್ಮ ಮೇಲೆ ಮಣ್ಣನ್ನು ಎರಚುತ್ತಿರುತ್ತದೆ. ಎಲ್ಲಾ ರೀತಿಯ ಮಣ್ಣನ್ನು.

ಉಪಾಯವೇನೆಂದರೆ ಮೇಲೆ ಬಿದ್ದ ಮಣ್ಣನ್ನು ಕೊಡವಿ ಮೆಲಕ್ಕೆಳಲು ಶ್ರಮಿಸುವುದು.

ನಮ್ಮ ಪ್ರತೀ ಹೆಜ್ಜೆಯೂ ಉನ್ನತಿ ಕಡೆಗಿನ ಯಾತ್ರೆ. ಎಷ್ಟೇ ಆಳವಾದ ಬಾವಿಯಿಂದಲಾದರೂ ಸರಿ ನಾವು ಹೊರಕ್ಕೆ ಬರಬಹುದು ತಾಳ್ಮೆ, ಛಲವೊಂದಿದ್ದರೆ.

ಕೊಡವಿ ಮತ್ತು ಎದ್ದೇಳಿ.

ಮೇಲಿನ ನೀತಿ ಪಾಠಕ್ಕೆ ಮತ್ತೈದು ಸೂತ್ರಗಳನ್ನು ಸೇರಿಸಿಕೊಳ್ಳಿ.

ಹಗೆಯಿಂದ ದೂರವಿರಿ. ಕ್ಷಮಾಶೀಲರಾಗಿ. ಯಾರದೋ ತಾತ ಮುತ್ತಾತ ಮಾಡಿದ ಪಾಪಕ್ಕೆ ಅವರ ಮಕ್ಕಳ ಬದುಕು ಅಸಹನೀಯವಾಗಿಸಬೇಡಿ.

ಚಿಂತೆಯಿಂದ ದೂರವಿರಿ. ನಾವು ಊಹಿಸಿಕೊಳ್ಳುವ ಬಹುತೇಕ ಚಿಂತೆಗಳು ಬಹುಮಟ್ಟಿಗೆ ಎದುರಾಗಲಾರವು.

ಸರಳವಾಗಿ ಬದುಕಿ. ಇರುವುದರಲ್ಲೇ ತೃಪ್ತಿಯನ್ನು ಕಾಣಿರಿ.

ನಿಮ್ಮಲ್ಲಿ ಇರುವುದರಲ್ಲಿ ಸ್ವಲ್ಪ ಇಲ್ಲದವರಿಗೂ ಕೊಡಿ. ನಿಮ್ಮಿಂದ ಪಡೆದುಕೊಂಡವನ ಮುಖದ ಮೇಲೆ ನೀವು ಕಾಣುವ ಧನ್ಯತಾ ಭಾವ ಯಾವ ಸ್ವರ್ಗಕ್ಕೂ ಕಡಿಮೆಯಲ್ಲ. ಕೊನೆಯದಾಗಿ, ಜನರಿಂದ ಅತಿ ಕಡಿಮೆಯನ್ನೇ ಬಯಸಿರಿ. ಆದರೆ ನಮ್ಮೆಲ್ಲರನ್ನೂ ಸೃಷ್ಟಿಸಿದ ಭಗವಂತನಿಂದ ಮಾತ್ರ ಅತಿ ಹೆಚ್ಚಿನದನ್ನು ನಿರೀಕ್ಷಿಸಿ. ಏಕೆಂದರೆ ಎಂದಿಗೂ ಬರಿದಾಗದ ಖಜಾನೆ ಅವನಲ್ಲಿದೆ.

TBA ಅಂದ್ರೆ ಏನು?

ಹೀಗೇ ಬ್ರೌಸ್ ಮಾಡ್ತಾ ಇದ್ದಾಗ ಒಂದು ವೆಬ್ ತಾಣದಲ್ಲಿ release date TBA ಅಂತ ಕಣ್ಣಿಗೆ ಬಿತ್ತು. ಹಾಗೇ ಗೆಸ್ ಮಾಡ್ದೆ. ಏರ್ಲೈನ್ಸ್ ನ parlance ನಲ್ಲಿ ETA ಅಂದ್ರೆ EXPECTED TIME OF ARRIVAL. ಇದೇನಿರಬಹುದು TBA? ಸರಿ TBA ಅಂದ್ರೆ ಬಹುಶಃ TO BE ANNONCED ಅಂತ ಇರಬೇಕು ಎಂದು ಆ ವೆಬ್ ತಾಣದಲ್ಲಿ ಇದ್ದ ವಿಷಯವನ್ನ ಗ್ರಹಿಸಿ contextual ಆಗಿ ಊಹಿಸಿದೆ. ಊಹೆಗೆ ಒಂದು ಸಮರ್ಥನೆ ಬೇಕಲ್ಲ, ಅದಕ್ಕೆ ತಾನೇ ಗೂಗ್ಲ್  ಇರೋದು. ಬಾಕುಲ್ ತೆಗಿ ಸೇಸಮ್ಮ ಎಂದ ಕೂಡಲೇ ಗುಹೆಯ ಬಾಗಿಲು ತೆರೆದುಕೊಂಡ ಹಾಗೆ ಗೂಗ್ಲ್ ಮೊರೆ ಹೋದೆ. ಅರರೆ, ಸರಿಯಾಯಿತಲ್ಲ ನನ್ನ ಊಹೆ. ಹೌದ್ರೀ, TBA ಅಂದ್ರೆ to be announced. ಯಾವುದಾದರೂ ಚಿತ್ರ ಬಿಡುಗಡೆ ಯಾಗುವಾಗ, CD ಬಿಡುಗಡೆ ಆಗುವಾಗ TBA ಅಂತ ಕಣ್ಣಿಗೆ ಬಿದ್ರೆ ಅದರರ್ಥ ಬಿಡುಗಡೆ ದಿನಾಂಕ TO BE ANNOUNCED ಅಂತ. IAS ಪರೀಕ್ಷೆಯಲ್ಲಿ ಈ ಪ್ರಶ್ನೆ ಬಂದರೆ ಉತ್ತರಿಸುವಿರಿ ತಾನೇ?

Holding a grudge….

ಎಷ್ಟು ಸತ್ಯ ನೋಡಿ, ಮೇಲಿನ ಮಾತುಗಳು. ದೇವರು ಮನುಷ್ಯರನ್ನು ಕ್ಷಮಿಸುತ್ತಾನಂತೆ, ಆದರೆ ಮನುಷ್ಯ ಮಾತ್ರ ಕ್ಷಮಿಸಲಾರ. ಹಳೆಯಕಾಲದ, ಓಬೀರಾಯನ ಕಾಲದಲ್ಲಿ ನಡೆದ, ನಡೆಯದ ಘಟನೆಗಳ ಬಗ್ಗೆ ಸೇಡಿನ ಮನೋಭಾವದಿಂದ ತಿರುಗುವ ಮನುಷ್ಯನಿಗೆ ಧ್ವೇಷ, ಹಗೆ, ಸೇಡು ಇವು ತನ್ನ ವ್ಯಕ್ತಿತ್ವವನ್ನೇ ಸುಟ್ಟು ಹಾಕುವ ಬೆಂಕಿ ಎಂದು ತಿಳಿಯುವ ದಿನ ಯಾವಾಗ ಬರಬಹುದು?

ದಿವಾಳಿ ಮತ್ತು ದಿವಾಲಿ

ಕನ್ನಡಿಗರು ಕರೆಯುವ ದೀಪಾವಳಿ ಗೆ ಹಿಂದಿ ಹೆಸರು ದಿವಾಲಿ. ಈ ಹಬ್ಬ ದಲ್ಲಿ ಧನ ದೇವತೆ ಲಕ್ಷ್ಮಿ ಯನ್ನ ಒಲಿಸಿಕೊಂಡು ತಮ್ಮ ತಮ್ಮ ಧಂಧೆ ಗಳಲ್ಲಿ ಲಾಭ ಬಯಸುತ್ತಾರೆ. ಅದೇ ಸಮಯ ಹಿಂದಿಯಲ್ಲಿ ಅರಿಯಲ್ಪಡುವ ದಿವಾಲಿ ಪದದ “ಲ” ಕಾರ ಮತ್ತು “ಳ” ಕಾರದಲ್ಲಿ ಸ್ವಲ್ಪ ಏರುಪೇರಾಗಿ ದಿವಾಳಿ ಆಗಿಬಿಟ್ಟರೆ, ಹಬ್ಬದ ಒಟ್ಟು ಉದ್ದೇಶವೇ “ದಿವಾಳಿ” ಎದ್ದಂತೆ ಅಲ್ಲವೇ? ತಿಳಿದೂ ತಿಳಿದೂ ದಾರಿದ್ರ್ಯವನ್ನು ಮನೆಯೋಲಕ್ಕೂ, ಧಂಧೆ ಯೊಳಕ್ಕೂ ಬಿಟ್ಟುಕೊಂಡಂತೆ. ದೀಪಾವಳಿ ಹಬ್ಬವನ್ನು ನಾಡಿನ ಎಲ್ಲ ಸಮುದಾಯದವರೂ ಉತ್ಸಾಹದಿಂದ ಆಚರಿಸಿದರು. ಬೆಳಕಿನ ಹಬ್ಬ ಸಾಮರಸ್ಯದ ಹಬ್ಬವಾಗಲಿ ಎಂದು ಹಾರೈಸುತ್ತಾ….

extra:  ಹಿಂದೂ ದೇವ ದೇವತೆಗಳಿಗೆ ವಾಹನಗಳು ಇರುತ್ತವೆ. ಗಣೇಶನಿಗೆ “ಮೂಷಕ” ವಾಹನ, ಇಂದ್ರನಿಗೆ, ಐರಾವತ, ಇಂದ್ರನಿಗೆ ಸಪ್ತ ಹಂಸಗಳು, ಶಿವನಿಗೆ ನಂದಿ, ಹೀಗೆ….ಈಗ ಧನ ದೇವತೆ ಲಕ್ಷ್ಮಿಯ ವಾಹನ ಊಹಿಸಿ? ಕಮಲ ಮತ್ತು ಗೂಬೆ.