ಮಾದಕ ದ್ರವ್ಯ ಸೇವನೆ OK ಎಂದ ನ್ಯಾಯಾಲಯ

ಇಟಲಿಯ ಪೊಲೀಸರು ಶೋಧನೆಯ ವೇಳೆ ಕುರಿಕಾಯುವವನ ಕಾರಿನಲ್ಲಿದ್ದ ಮಾದಕ ದ್ರವ್ಯ (marijuana) ವಶಪಡಿಸಿ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ದೂರನ್ನು ಆಲಿಸಿದ ನ್ಯಾಯಮೂರ್ತಿ ಕುರಿಕಾಯುವವ ತನ್ನ ಮಂದೆಯೊಂದಿಗೆ ಒಂಟಿಯಾಗಿ ಗುಡ್ಡಗಾಡಿನಲ್ಲಿ ಅಲೆಯುವುದರಿಂದ ಮಾದಕ ದ್ರವ್ಯ ಆತನಿಗೆ ಸಂಗಾತಿ ಮತ್ತು ಇದು ಅಪರಾಧವಲ್ಲ” ಎಂದು ತೀರ್ಪಿತ್ತು ಪೋಲೀಸರನ್ನು ದಂಗುಪಡಿಸಿದರು. ಇನ್ನು ಮಾದಕ ದ್ರವ್ಯ ಸೇವಿಸಲು ಮನಸ್ಸಾದರೆ ತಾತ್ಕಾಲಿಕವಾಗಿ ಕುರುಬನಾದರೆ ಸಾಕು.    

twitter

picture-for-twitter-article 

twitter ಅಂದ್ರೆ ಚಿಲಿಪಿಲಿ ಆಲ್ವಾ? social networking ಸುದ್ದಿ ಮಾಡುತ್ತಿರುವ twitter ಒಂದು ಆಕರ್ಷಕ application. ಒಮ್ಮೆಗೆ ೧೪೦ ಅಕ್ಷರಗಳಲ್ಲಿ ಮಾತ್ರ ಬರೆಯಬಹುದಾದ ಈ ವ್ಯವಸ್ಥೆಯನ್ನು ಪರಿವಾರದವರೊಂದಿಗೆ ಮತ್ತು ಸಹೋದ್ಯೋಗಿಗಳೊಂದಿಗೆ ಚಿಕ್ಕ ಹರಟೆ ಹೊಡಯಲು ಉಪಯೋಗಿಸಬಹುದು. facebook ಮತ್ತು twitter ಇಂದಿನ ಯುವಪೀಳಿಗೆ ಮಾರು ಹೋದ ಅಂತರ್ಜಾಲ ತಾಣದ ಹೊಸ ಅನ್ವೇಷಣೆ. ಲೇಖನದೊಂದಿಗಿರುವ ಈ ಪುಟ್ಟ ಗುಬ್ಬಿ “ಬಡಪಾಯಿ ನನ್ನನ್ನೂ ವ್ಯಾಪಾರದ ವಸ್ತುವಾಗಿಸಿಬಿಟ್ಟಿರಾ” ಎಂದು ನಿಟ್ಟುಸಿರು ಬಿಡುತ್ತಿರುವಂತೆ ಕಾಣುತ್ತಿಲ್ಲವೇ

 

 

ಇರಾಕ್

ಇಂದು ಇರಾಕಿನ ಮೇಲಿನ ಅಮೆರಿಕೆಯ ಧಾಳಿ ಮತ್ತು ಆಕ್ರಮಣಕ್ಕೆ ಆರು ವರ್ಷ.  ಯಾವುದೇ ಕಾರಣವಿಲ್ಲದೆ ಸದ್ದಾಂ ಹುಸ್ಸೇನ್ ಮಾರಕ ಅಸ್ತ್ರಗಳನ್ನು ಶೇಖರಿಸಿದ್ದಾನೆ ಎಂದು ಸುಳ್ಳು ಪುರಾವೆಗಳೊಂದಿಗೆ ಅಮೇರಿಕ ಮತ್ತು ಇಂಗ್ಲೆಂಡ್ ಇರಾಕಿನ ಮೇಲೆ ಧಾಳಿ ಮಾಡಿದವು. weapons of mass destruction ಇದೆ ಎಂದು ಹೇಳಿದ ಅಮೇರಿಕ ವಿಶ್ವಸಂಸ್ಥೆಗೆ ಮತ್ತು ವಿಶ್ವಕ್ಕೆ ನೀಡಿದ ಸಬೂತು “words of mass deception”. ಸೆಪ್ಟೆಂಬರ್ ೧೧, ೨೦೦೧ರ ಅಮೆರಿಕೆಯ ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ಮೇಲಿನ ಧಾಳಿಯ ನಂತರ ಬೆಚ್ಚಿಬಿದ್ದು ಬುಧ್ಧಿಯ ಸ್ತಿಮಿತತೆ ಕಳೆದುಕೊಂಡ ಅಮೇರಿಕ ಬಿನ್ ಲಾಡೆನ್ ಆಫ್ಘಾನಿಸ್ತಾನದ ಗುಡ್ಡಗಳಲ್ಲಿ ಅವಿತಿರಬಹುದೆಂದು ಸಾರಾಸಗಟು ಬಾಂಬುಗಳನ್ನು ಸುರಿಸಿತು. ತೋರಬೋರ ಪರ್ವತ ಶ್ರೇಣಿಯ ಗುಹೆಗಳಲ್ಲಿ ಅಡಗಿರುವ ಲಾಡೆನ್ ನನ್ನು ಹೊಗೆ ಹಾಕಿ ಹೊರತೆಗೆದು ತರುತ್ತೇನೆ ಎಂದು ಅಮೆರಿಕನ್ನರನ್ನು ನಂಬಿಸಿದ ಬುಷ್ ಆ ಕಾರ್ಯದಲ್ಲಿ ಸಫಲನಾಗಲಿಲ್ಲ. ಬದಲಿಗೆ ಮದುವೆ ದಿಬ್ಬಣಗಳ ಮೇಲೆ, ಶಾಲೆಗಳ ಮೇಲೆ, ಆಸ್ಪತ್ರೆಗಳ ಮೇಲೆ ಹೀಗೆ ಸಿಕ್ಕ ಸಿಕ್ಕಲ್ಲಿ ಬಾಂಬು ಹಾಕಿ ಸಾವಿರಾರು ಜನರನ್ನು ಬಲಿತೆಗೆದುಕೊಂಡ.  ತನ್ನ ದ್ರಿಷ್ಟಿಯನ್ನು ಆಫ್ಘಾನಿಸ್ತಾನದಿಂದ ಇರಾಕಿನೆಡೆಗೆ ಹರಿಸಿದ ಬುಷ್ ತನ್ನ ತಂದೆ ಬುಷ್ ಸೀನಿಯರ್ ಗಾದ ಸೋಲಿನ ಸೇಡು ತೀರಿಸಲು ತೀರ್ಮಾನಿಸಿದ. ಬುಷ್ ಸೀನಿಯರ್ ಸೋಲು ಹೇಗಾಯಿತು?

 

ಇರಾಕಿನ ಅಧ್ಯಕ್ಷ ಸದ್ದಾಂ ಹುಸೇನ್ ತೈಲ ಸಂಪನ್ನ ಕುವೈತ್ ರಾಷ್ಟ್ರ ಇರಾಕಿನ ೧೯ ನೆ ಪ್ರಾಂತ್ಯ ಎಂದು ಘೋಷಿಸಿ  ೧೯೯೦ ಆಗಸ್ಟ್ ತಿಂಗಳಿನಲ್ಲಿ ತನ್ನ ಸೈನ್ಯವನ್ನು ಪುಟ್ಟ ರಾಷ್ಟ್ರ ಕುವೈತ್ ನೊಳಕ್ಕೆ ನುಗ್ಗಿಸಿ ರಂಪ ಎಬ್ಬಿಸಿದ. ಈ ಕ್ರಮದಿಂದ ದಿಗಿಲೆದ್ದ ಅರಬ್ ರಾಷ್ಟ್ರಗಳು ವಿಶೇಷವಾಗಿ ಸೌದಿ ಅರೇಬಿಯಾ ಅಮೆರಿಕನ್ನರ ಸಹಾಯ ಯಾಚಿಸಿದವು. ಸದ್ದಾಮನ ಆಕ್ರಮಣಕಾರಿ ಮನೋಭಾವ ಅರಿತಿದ್ದ ಅರಬರಿಗೆ ಸದ್ದಾಂ ಮುಂದುವರೆದು ಸೌದಿ ಮತ್ತು UAE ಗಳನ್ನೂ ಕಬಳಿಸಬಹುದು ಎಂದು ಭಯ ಉಂಟಾಯಿತು. ಅತ್ತ ಅಮೆರಿಕೆಗೂ ಹೇಗಾದರೂ ಮಧ್ಯ ಪ್ರಾಚ್ಯದಲ್ಲಿ ಒಂದು ಸಾಹಸಕ್ಕೆ ಕೈ ಹಾಕ್ಬೇಕು ಅನ್ನೋ ಕೈಕದಿತ ಶುರುವಾಗಿತ್ತು. ಇದಕ್ಕೆ ಸದ್ದಾಂ ಅನ್ನೋ ಐಲು ದೊರೆ ಅವಕಾಶ ಮಾಡಿ ಕೊಟ್ಟ.          

ಸಂಪತ್ತನ್ನರಸಿ….

ಆಸೆಯೇ ದುಃಖಕ್ಕೆ ಮೂಲ. ನಮ್ಮಲ್ಲಿರುವುದರಲ್ಲೇ ತೃಪ್ತಿ ಪಟ್ಟುಕೊಂಡು ಬದುಕು ಸಾಗಿಸಿದರೆ ನೆಮ್ಮದಿ, ಸಂತೋಷ. ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಶ್ರೀಮಂತರು ಎನ್ನುವುದನ್ನು ಮರೆಯಬಾರದು. ಶ್ರೀಮಂತಿಕೆಯನ್ನು ಹಣದ ಮಾನ ದಂಡದಿಂದಲೇ ಅಳೆಯಬೇಕಿಲ್ಲ. ಈಗಿನ ದೃಶ್ಯ ಮಾಧ್ಯಮಗಳಲ್ಲಿ ಶ್ರೀಮಂತಿಕೆಯನ್ನು ಬಿಂಬಿಸುವ ರೀತಿ ನೋಡಿದರೆ ಜನ ಮಾನ ಬಿಟ್ಟು ಸಂಪಾದನೆ ಮಾಡಿದರೆ, ಸಂಪತ್ತು ಮಾನವನ್ನು ತಂದು ಕೊಡುತ್ತದೆಅನ್ನೋ ಭಾವನೆ ಬೆಳೆಸಿಕೊಂಡಿದ್ದಾರೆ. ಈ ರೀತಿಯ ಸಂಪತ್ತಿನ ಹಿಂದೆ ಓಡುವ ಮನುಷ್ಯ ಬದುಕಿನ ಹತ್ತು ಹಲವು little pleasures ಗಳನ್ನು ಕಾಣಲು, ಅನುಭವಿಸಲು ವಿಫಲನಾಗುತ್ತಾನೆ.
One who wakes up with his whole attention directed towards the world is cut off from God, and God shall make four qualities to accompany him: endless sorrow, never ending occupation, a neediness which is never relieved, and a hope which is never achieved. – Prophet Muhammad
.

ಬ್ರಿಟಿಷ್ ಏಕಲವ್ಯ

brian31ಬ್ರಿಟಿಷ್ ರಾಜಧಾನಿ ಲಂಡನ್ನಿನಲ್ಲಿ ಒಬ್ಬ ಪ್ರತಿಭಟನಾಕಾರನ ಕತೆ ಕೇಳಿ. ಯಾರ ಸಹಾಯವೂ ಇಲ್ಲದೆ ಶಸ್ತ್ರಾಸ್ತ್ರ ವಿದ್ಯೆ ಕಲಿತ  ಏಕಲವ್ಯನಂತೆ ಈತ ಒಂಟಿಯಾಗಿ ಬ್ರಿಟಿಷ್ ಸರಕಾರದ ವಿದೇಶಾಂಗ ನೀತಿಯ ವಿರುದ್ಧ ಸಮರ ಸಾರಿದ್ದಾನೆ. ಸುಮಾರು ಎಂಟು ವರ್ಷಗಳಿಂದ ಬ್ರಿಟಿಷ್ ಸಂಸತ್ತಿನ ಎದುರು ಡೇರೆ ಹಾಕಿ ಕುಳಿತಿರುವ ಈತ ಮಾಜಿ ಪ್ರಧಾನಿ ಬ್ಲೇರ್ಗಿಂತ ಹೆಚ್ಚು ಜನಪ್ರಿಯ ವ್ಯಕ್ತಿ. ಈ ಆದುನಿಕ ಏಕಲವ್ಯನ ಹೆಸರು ಬ್ರಯನ್ ಹಾವ್,ಬಡಗಿ ಮತ್ತು ೭ ಮಕ್ಕಳ ತಂದೆ. ಅಮೇರಿಕೆಯಲ್ಲಿ ನಡೆದ ಸೆಪ್ಟೆಂಬರ್ ೧೧,೨೦೦೧ ಧಾಳಿಯ ೩ ತಿಂಗಳ ಮೊದಲೇ ಈತ ಇರಾಕಿನ ವಿರುದ್ಧದ ಆರ್ಥಿಕ ದಿಗ್ಬಂಧನದ ವಿರುದ್ಧ ಹೋರಾಟಕ್ಕಿಳಿದ. “Stop Killing Kids”, “Make Peace Not War”,“Let Iraqi Infants Live”,ಮುಂತಾದ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಜನರ ಗಮನ ತನ್ನೆಡೆ ಸೆಳೆದ. ವಿಶೇಷವಾಗಿ “Baby killers” and “Tony B Liar”ಎನ್ನೋ ಭಿತ್ತಿಚಿತ್ರ ಪ್ರದರ್ಶಿಸಿದ ಈತ ಇಷ್ಟು ವರ್ಷಗಳ ಕಾಲ ಈ ರೀತಿ ಪ್ರತಿಭಟನೆಗೆ ಇಳಿಯುತ್ತಾನೆಂದು ಯಾರೂ ಭಾವಿಸಿರಲಿಲ್ಲ. brian-hawe3

ಬ್ರಿಟಿಷ್ ಸಂಸತ್ತಿನ ಚೌಕದ ಮುಂದೆ ಮತ್ತು ಪ್ರಧಾನಿ ಅಧಿಕೃತ ನಿವಾಸ 10,Downing streetನ ಬಹು ಸಮೀಪ ಡೇರೆ ಹಾಕಿರುವ ಈತನನ್ನು ಒಮ್ಮೆ ಡಜನ್ಗಟ್ಟಲೆ ಪೊಲೀಸರು ಬಂದು ಓಡಿಸಲು ಪ್ರಯತ್ನ ಪಟ್ಟರೂ ಜುಮ್ಮೆನ್ನದೆ ಅಲ್ಲೇ ಬೀಡು ಬಿಟ್ಟಿದ್ದಾನೆ. ಈ ಪೋಲಿಸ್ ಕ್ರಮದ ಬಗ್ಗೆ ಅಲ್ಲಿನ ಪ್ರಸಿದ್ದ ಪತ್ರಿಕೆಗಳು ( The DailyTelegraph ran the story with a headline: “Police sent 78 to quell loneprotester.” )ವರದಿ ಮತ್ತು ಲೇವಡಿ ಮಾಡಿ ಬರೆದಾಗ ಸರಕಾರಕ್ಕೆ ಕಸಿವಿಸಿ ಆಗಿ ಆತನನ್ನು ಅವನ ಪಾಡಿಗೆ ಬಿಡಲು ನಿರ್ಧರಿಸಿತು.ಇಂಗ್ಲೆಂಡಿನ ಕ್ರೂರ ಚಳಿಗೂ ಸೊಪ್ಪು ಹಾಕದೆ ತನ್ನ ಡೇರೆಯಲ್ಲೇ  ಕಳೆಯುವ ಈತ ಚಳಿ ಬಗ್ಗೆ ಕೇಳಿದರೆ ಆಫ್ಘಾನಿಸ್ತಾನದಲ್ಲಿ ಭೂಕಂಪದ ನಂತರ ಬೆಟ್ಟ ಗುಡ್ಡ ಮೇಲಿರುವ ಎಲ್ಲವನ್ನೂ ಕಳೆದುಕೊಂಡ ಪುಟ್ಟ ಬಾಲಕಿಯರ ಬಗ್ಗೆ ಮಾತನಾಡಿ ಈ ಚಳಿ ಅದಕ್ಕೆ ಹೋಲಿಸಿದರೆ ದೊಡ್ಡದೇನೂ ಅಲ್ಲ ಎನ್ನುತ್ತಾನೆ. ಹೀಗೆ ನಿಷ್ಠುರವಾಗಿ ತನ್ನ ಮತ್ತು ಅಮೆರಿಕೆಯ ಸರಕಾರಗಳನ್ನು ತರಾಟೆಗೆ ತೆಗೆದುಕೊಳ್ಳುವ ಬ್ರಯನ್ ಹಾವ್ ಎಷ್ಟು ದಯಾಮಯಿ ಎಂದು ಅನ್ನಿಸದಿರದೆ?

ಲಂಡನ್ನಿನ ಆಕರ್ಷಣೆಗಳಲ್ಲಿ ಬ್ರಯನ್ ಹಾವ್ ಒಬ್ಬ ಎಂದರೂ ಸರಿಯೇ.

 

be my valentine

taj-for-valentinevalentines day ಆಗಲೀ mothers day, fathers day, sister-in-laws day, dogs day ಆಗಲೀ ಇವುಗಳನ್ನು ವಿದೇಶಿ ಸಂಸ್ಕೃತಿ ಎಂದು ಹೀಗಳೆಯುವುದು ಬೇಡ. ನಮ್ಮ ಸಂಸ್ಕೃತಿ ನಮಗೆ ಹಿರಿದು, ಅವರದು ಅವರಿಗೆ ಹಿರಿದು. ವರ್ಷದ ೩೬೫ ದಿನಗಳನ್ನೂ ಒಂದಲ್ಲ ಒಂದು ಹೆಸರನ್ನಿಟ್ಟುಕೊಂಡು ಆಚರಿಸಿ ಸಂಭ್ರಮ ಪಡುವ ಪಾಶ್ಚಾತ್ಯರು ವಾಣಿಜ್ಯ ಕಂಪೆನಿಗಳ ಹುನ್ನಾರಕ್ಕೆ ಬಿದ್ದು ಚಟ ಅಂಟಿಸಿ ಕೊಂಡಿರುವುದು ನಿಜ. ಗ್ರೀಟಿಂಗ್ ಕಾರ್ಡ್,ಮೇಣ ಮತ್ತು ಪುಷ್ಪ ಕಂಪೆನಿಗಳ ಮಾರ್ಕೆಟಿಂಗ್ ತಂತ್ರಕ್ಕೆ ತಮ್ಮನ್ನು ಮಾರಿಕೊಂಡು ಕುಣಿಯುವ ಯುವಜನತೆಗೆ ನಮ್ಮ ಸಂಸ್ಕೃತಿ ಪರಿಚಯ ಮಾಡಿ ಕೊಡಬೇಕಾದ್ದು ಮುಖ್ಯ. ಇಂಗ್ಲಿಷ್ ಕಲಿತು, ಮಮ್ಮಿ ಡ್ಯಾಡಿ ಎಂದು ಬಡಬಡಿಸುತ್ತಾ, ಆಂಗ್ಲ ಸಾಹಿತ್ಯದ ಗೀಳು ಅಂಟಿಸಿ ಕೊಂಡಿರುವ ನಮ್ಮ ಯುವಜನತೆ ಅಮೆರಿಕನ್ ಲೈಫ್ ಸ್ಟೈಲ್ ಗೆ ಮಾರು ಹೋಗಿದ್ದು ದುರಂತ. ಭಾಷೆ ಸಂಸ್ಕೃತಿಯನ್ನು ಬೆಸೆಯುವ ಸಂವಹನ. ಇಂಗ್ಲಿಷ್ ಭಾಷೆಯೇ ಬದುಕಾದಾಗ ಇಂಥ ಅನಿಷ್ಟಗಳು ಒಕ್ಕರಿಸಿಕೊಳ್ಳುವುದು ಸಹಜವೆ. ನಮ್ಮ ಮಕ್ಕಳಿಗೆ ಮೊದಲು ನಮ್ಮ ಮಾತೃ ಭಾಷೆಯನ್ನೂ, ನಮ್ಮ ಸಂಸ್ಕೃತಿಯ ಹಿರಿಮೆಯನ್ನೂ ಚಿಕ್ಕಂದಿನಿಂದಲೇ ಹೇಳಿಕೊಟ್ಟು ಬೆಳೆಸಿದರೆ ಈ ರೀತಿಯ ಚರ್ಚೆಗಳಲ್ಲಿ ಹಿರಿಯರು ಕಾಲ ವ್ಯಯಿಸುವ ಅವಸ್ಥೆ ಬರುವುದಿಲ್ಲ.
ಮಕ್ಕಳು ಎಲ್ಲಿಗೆ ಹೋಗುತ್ತಾರೆ, ಏನು ಮಾಡುತ್ತಾರೆ ಎಂದು ನಿಗಾ ಇಟ್ಟು ಇಂಥ ಕಾಲ, ಕಾಸು ಹರಣ ಮಾಡುವ ನಿರರ್ಥಕ ‘days’ ಗಳಿಗೆ ಅವರು ಮಾರುಹೋಗದಂತೆ ನೋಡಿಕೊಳ್ಳಬೇಕು. ತಂದೆ ತಾಯಂದಿರ ಒಪ್ಪಿಗೆಯಿಂದ ಯುವಜನರು ಹೋಗುವುದಾದರೆ ನಮ್ಮನೈತಿಕ ಪೋಲಿಸ್ತಮ್ಮ ಗಬ್ಬು ಮೂಗು ತೂರಿಸಿ ರಂಪ ಮಾಡುವುದು ಸಲ್ಲದು.
ಅತ್ಯುನ್ನತ ನೀತಿಗಳನ್ನು ಮೌಲ್ಯಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು ಸಾತ್ವಿಕನಾಗಿ ಸಂಭಾವಿತನಾಗಿ ಬದುಕಲು ಅನುವು ಮಾಡಿಕೊಟ್ಟಿದ್ದು ನನ್ನ ಮದರಸ ಶಿಕ್ಷಣ. (ಮದರಸ ಶಿಕ್ಷಣದ ಬಗ್ಗೆ ಹಿಂದೂ ಮತಾಂಧರ ಕಪೋಲಕಲ್ಪಿತ ವಿಚಾರಗಳು ನರಕ ಸೇರಲಿ) ನನ್ನ ಗೆಳೆಯರು ಹೆಂಡ ಹೆಣ್ಣು ಎಂದು ದಿಕ್ಕಿಲ್ಲದೆ ನಡೆದಾಗ ನನ್ನ ಕಾಲುಗಳು ನನ್ನನ್ನು ನಡೆಸಿದ್ದು ಶಿಷ್ಟಾಚಾರದ ಕಡೆಗೆ. ಇದೇ ರೀತಿಯ ಧಾರ್ಮಿಕ ಬೋಧನೆ ನೀಡುವ, ನಮ್ಮ ಸಂಸ್ಕೃತಿಯನ್ನು ಕೊಂಡಾಡುವ ಒಂದು ವ್ಯವಸ್ಥೆಯನ್ನು ಆದುನಿಕ (?) ಸಮಾಜ ಕಂಡುಕೊಳ್ಳದಿದ್ದರೆ valentines day ಮಾತ್ರ ಅಲ್ಲ, ಇನೂ ಹತ್ತು ಹಲವು ಅನಿಷ್ಟ ಚೇಷ್ಟೆಗಳು ನಮ್ಮನ್ನು ಬೆಂಬತ್ತಬಹುದು.

   

I love You, do You too?

valentine“ಬೆಂಗಳೂರಿಗರೆ ನಿಮ್ಮ ಕಚೇರಿ, ಕಾಲೇಜಿನಿಂದ ಹೊರಬನ್ನಿ, ನಿಮ್ಮ ಹಕ್ಕುಗಳಿಗೆ ಬದ್ಧರಾಗಿರಿ ಮತ್ತು ಮೂಲಭೂತವಾದಿಗಳನ್ನು ಕಿತ್ತು ಒಗೆಯಿರಿ.”

ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸುವುದು ಭಾರತೀಯ ಸಂಸ್ಕೃತಿಗೆ ವಿರುದ್ಧ, ಅಂಥ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು ಹಿಡಿದಿರುವಪಟ್ಟಿಗೆ ಪ್ರತಿಯಾಗಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಪ್ರೊಫೆಸರಾಗಿರುವ ರಾಜಕೀಯ ವಿಶ್ಲೇಷಕ ರಾಜೀವ್ ಗೌಡ ಅವರು ಬೆಂಗಳೂರಿನ ವಿದ್ಯಾವಂತರಿಗೆ ಕರೆ ನೀಡಿದ್ದಾರೆ.

this sort of confrontationist approach will not serve anyone. ಸಮಾಜದ ಬಗೆಗಿನ  ರಾಜೀವ್ ಗೌಡರ ಕಳಕಳಿ ಅರ್ಥವಾಗುವಂಥದ್ದೆ. ಆದರೆ ಪರಿಸ್ಥಿತಿ aggravate ಆಗಲು ಬಿಟ್ಟರೆ ಪುಂಡರಿಗೆ  ಲಾಭ ಹೊರತು ಶಾಂತಿಪ್ರಿಯರಿಗಲ್ಲ. ಹೊಡಿ ಬಡಿ ಕಡಿ ಎನ್ನೋ ಒಂದು ಸಂಸ್ಕೃತಿ ರಾಷ್ಟ್ರೀಯತೆಯ ಸೋಗು ಹಾಕಿಕೊಂಡು ಓಡಾಡುತ್ತಾ ನಮ್ಮೆಲ್ಲರ ಸಹನೆಯನ್ನು ಮತ್ತು ಒಳ್ಳೆಯತನವನ್ನೂ ಪರೀಕ್ಷಿಸುತ್ತಿರುವ ಈ ಕ್ಲಿಷ್ಟಕರ ಸನ್ನಿವೇಶದಲ್ಲಿ ನಾವು ದುಗುಡದಿಂದ ವರ್ತಿಸುವುದು ಕ್ಷೇಮವಲ್ಲ. ನಮ್ಮ ಸಂಸ್ಕೃತಿಯ ಹಿರಿಮೆ ಬಗ್ಗೆ ನಮ್ಮ ಯುವಜನರಿಗೆ ಹೇಳೋಣ. ನಮ್ಮ ಯುವಜನತೆ ವಿವೇಚನಾಶೀಲರು, ಯಾವುದನ್ನು ಆರಿಸಬೇಕು ಯಾವುದನ್ನು ತಿರಸ್ಕರಿಬೇಕೆನ್ನುವುದನ್ನು ಅವರ ವಿವೇಚನೆಗೆ ಬಿಡೋಣ. ಸಂವಾದದಿಂದ ಮಾತ್ರ ಶಾಂತಿ ಮತ್ತು ಮುನ್ನಡೆ ಸಾಧ್ಯ. valentines ಮತ್ತು ಇತರ ಕಾಸು ಕಾಲ ಹರಣ ಮಾಡುವ ನಿರರ್ಥಕ ಆಚರಣೆಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಹೇಳುವ ಅಭಿಯಾನ ಪ್ರಾರಂಭಿಸೋಣ. ವಿಚಾರಗಳನ್ನು ಯಾರ ಮೇಲೂ ಹೇರುವುದು ಬೇಡ. ಶಾಲಾ ಕಾಲೇಜು ಮಟ್ಟಗಳಲ್ಲಿ ಚರ್ಚೆಗಳು ನಡೆಯಲಿ. ಒಂದಲ್ಲ ಒಂದು ಕ್ಷುಲ್ಲಕ ಕಾರಣ ಇಟ್ಟುಕೊಂಡು ಬೀದಿಗಿಳಿಯುವ ಅಸಹ್ಯ, ಕನಿಕರ ಹುಟ್ಟಿಸುವ ಚಾಳಿಗಳನ್ನು ಚಿವುಟಿ ಹಾಕೋಣ.  ಈ ನಮ್ಮ ದೇಶವನ್ನು ವಿಶ್ವ ರಾಷ್ಟ್ರಗಳ ಸಮೂಹದಲ್ಲಿ ಧ್ರುವ ನಕ್ಷತ್ರದಂತೆ ಹೊಳೆಯುವಂತೆ ಮಾಡೋಣ.
ಕೇವಲ ೬೦ ವರ್ಷಗಳ ಹಿಂದೆ ನಮ್ಮಂತೆ ಅತಿ ಬಡ ರಾಷ್ಟ್ರವಾಗಿದ್ದ ದಕ್ಷಿಣ ಕೊರಿಯಾ ಇಂದು ಬಲಾಡ್ಯ ಶ್ರೀಮಂತ ರಾಷ್ಟ್ರಗಳ ಸಾಲಿಗೆ ಸೇರಿದ್ದು ಒಗ್ಗಟ್ಟಿನಿಂದ, ಸಂಯಮದಿಂದ ನಡೆದುಕೊಂಡಿದ್ದರಿಂದ.

ಅಮೆರಿಕೆಯ ಹೊಸ ಅಧ್ಯಕ್ಷ

obamaನಂಬಲು ಅಸಾಧ್ಯವಾದ ರಾಜಕೀಯ ಘಟನೆ ಅಮೇರಿಕೆಯಲ್ಲಿ. ಸರಪಳಿ ಬಿಗಿದು ಆಫ್ರಿಕಾ ದೇಶಗಳಿಂದ ಗುಲಾಮಗಿರಿಗಾಗಿ ಅಮೆರಿಕೆಯ ಕಡಲತೀರದ ಮೇಲೆ ಎಸೆಯಲ್ಪಟ್ಟ ಕರಿಯರ ಪೈಕಿಯವರಾದ ಬರಾಕ್ ಒಬಾಮ ಅಮೆರಿಕೆಯ ಅಧ್ಯಕ್ಷ. ಇದನ್ನು ನೋಡಿದವರಿಗೆ ತಿರುಕನ ಕನಸು ನೆನಪಾಗದಿರದು.

 

ಕೇವಲ ಕೆಲವೇ ದಶಕಗಳವರೆಗೆ ಮತ ಚಲಾಯಿಸಲೂ ಸಾಧ್ಯವಾಗದಿದ್ದ ನಾಡಿಗೆ ಕರಿಯ ಅಧ್ಯಕ್ಷ. ಕ್ರೈಸ್ತರಾಗಿದ್ದಾರೂ ಬಣ್ಣ ಕಪ್ಪು ಎಂಬ ಒಂದೇ ಕಾರಣಕ್ಕೆ ಚರ್ಚುಗಳಿಗೆ ಪ್ರವೇಶವಿಲ್ಲ. ಬಿಳಿಯರು ಹೋಗುವ ಶಾಲೆಗೆ ಕರಿಯರ ಮಕ್ಕಳು ಹೋಗುವಂತಿಲ್ಲ. ಕರಿಯ ಅಪ್ಪಿತಪ್ಪಿಯೂ ಬಿಳಿ ಹೆಣ್ಣನ್ನು ಮದುವೆಯಾಗುವುದಿರಲಿ, ಕಣ್ಣೆತ್ತಿಯೂ ನೋಡುವಂತಿಲ್ಲ. ಸಾರ್ವಜನಿಕ ಬಸ್ಸುಗಳಲ್ಲಿ ಮುಂದಿನ ಬಾಗಿಲಿನಿಂದ ಹತ್ತುವಂತಿಲ್ಲ. ಒಂದೇ ಎರಡೆ ಅವರ ಮೇಲೆ ನಡೆದ ಅತಿರೇಕಗಳು. ಆ ದೇವರು ಬಿಳಿಯರ ಅಹಂಕಾರಕ್ಕೆ ಸರಿಯಾದ ಮದ್ದನ್ನೇ ಅರೆದ.

 

ತಮ್ಮ ಉದ್ಘಾಟನಾ ಭಾಷಣದಲ್ಲಿ, ಅರವತ್ತು ವರ್ಷಗಳ ಹಿಂದೆ ತನ್ನ ತಂದೆಗೆ ಹೋಟೆಲಿನಲ್ಲಿ ಊಟ ನಿರಾಕರಿಸಿರಬಹುದಾದ ಅಮೇರಿಕೆಯಲ್ಲಿ ಇಂದು ನಿಮ್ಮೆಲ್ಲರೆದುರಿಗೆ ಸತ್ಯಪ್ರತಿಜ್ಞೆ ಸ್ವೀಕರಿಸಲು ನಿಂತಿದ್ದೇನೆ ಎಂದು ಭಾವುಕರಾದ ಒಬಾಮ ನುಡಿದರು.

ಕಸಬ್ ನಮ್ಮವನಲ್ಲ ಎಂದ ಪಾಕ್

ಕಸಬ ಪಾಕಿ ಅಂತ ಇಮ್ರಾನ್ ಖಾನ್ಗೂ ಗೊತ್ತು, ಜ್ಯರ್ದಾರಿಗೂ ಗೊತ್ತು, ಗೀಲಾನೀಗೂ ಗೊತ್ತು ಮತ್ತು ಇವರ ತಾತ ಮುತ್ತಾತಂದಿರಿಗೂ ಗೊತ್ತು. ಕಸಬ ಯಾರೂಂತ ನಮಗೆ ಗೊತ್ತಿಲ್ಲ ಎಂದು ಪಾಕ್ ಹೇಳಿದ್ದು time buying tactics. ಇದಕ್ಕೆ ನಮ್ಮ ರಾಜಕಾರಣಿಗಳು ಗೋಣು ಹಾಕಿದ್ದು ನಮ್ಮ ದೌರ್ಭಾಗ್ಯ.

 

ಮುಂಬೈ ನರಹತ್ಯೆ ನಡೆದ ಮಾರನೆ ದಿನವೇ ನಮ್ಮ ವೈಮಾನಿಕ ದಳಕ್ಕೆ ಆಜ್ಞೆ ಕೊಟ್ಟಿದ್ದರೆ ಪಾಕ್ ಆಕ್ರಮಿತ ಕಾಶ್ಮೀರದ ಎಲ್ಲಾ ಭಯೋತ್ಪಾದಕ ಕೇಂದ್ರಗಳನ್ನು ಪಾಕಿಗಳಿಗೆ ಗೊತ್ತಾಗುವ ಮೊದಲೇ ಚಿಟಿಕೆ ಹೊಡೆಯುವಷ್ಟರಲ್ಲಿ ಭಸ್ಮ  ಮಾಡಬಹುದಿತ್ತು. ಆದರೆ ಅದಕ್ಕೆ ಬೇಕಾದ ಎದೆಗಾರಿಕೆ ಎಲ್ಲಿಂದ ತರೋದು? pok ಮರಳಿ ಪಡೆಯುವ ಸುವರ್ಣಾವಕಾಶವನ್ನು ನಾವು ಬಿಟ್ಟೆವು. ಈಗ ಹಲುಬಿ ಪ್ರಯೋಜನವಿಲ್ಲ.

 

ಇನ್ನು ಮುಂಬೈ ಸಾಕ್ಷ್ಯಗಳನ್ನು ಪಾಕಿಗೆ ಹಸ್ತಾಂತರಿಸುವ ಬದಲು ಲುಚ್ಚಾ ಅಮೇರಿಕೆಗೆ ಕೊಟ್ಟಿದ್ದು ನನಗೆ ಕಗ್ಗಂಟು.  ಅಮೇರಿಕಾ ನಮ್ಮ ಮಿತ್ರನಲ್ಲ. ಎಂದೂ ನಮ್ಮ ಮಿತ್ರನಾಗಿರಲಿಲ್ಲ. ಸಾಕ್ಷ್ಯಾಧಾರಗಳನ್ನು ಪಾಕಿಗೆ ಕೊಟ್ಟು ಕೂಡಲೇ ಅಪರಾಧಿಗಳನ್ನು ನಮಗೆ ಒಪ್ಪಿಸಲು ಕಾಲದ ಗಡುವು ಕೊಡೊ ಬದಲು ವಾಷಿಂಗ್ಟನ್ ಯಾತ್ರೆಗೆ ಚಿದಂಬರಂ ಆಗಲೀ ಮುಖರ್ಜೀ ಹೋಗುವ ಮರ್ಮ ಏನು ಅನ್ನುವುದೇ ರಹಸ್ಯ.

 

ಯಾವುದಕ್ಕೂ ಪಡೆದುಕೊಂಡು ಬರಬೇಕು ಅಂತಾರಲ್ಲ ಹಾಗೆ ನಮಗೆ ಸಿಕ್ಕ ನಾಯಕರಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ಸರಿಯಲ್ಲವೇನೋ.  

 

Exit 2008

israa-mob-screenಬೈ ಬೈ ೨೦೦೮, ಹಾಯ್ ಹಾಯ್ ೨೦೦೯

ಹೊಸ ವರುಷದ ಹಮ್ಮು ಬಿಮ್ಮಿಗೆ ನಾವು ನಮ್ಮನ್ನೊಡ್ಡಿಕೊಳ್ಳುವ ಮೊದಲು ಸಂದು ಹೋದ ವರುಷದ ಆಗು ಹೋಗುಗಳನ್ನು ನೋಡೋಣ.

 ವೈಯಕ್ತಿವಾಗಿ ೨೦೦೮ರ ಆರಂಭ excitement ಮೂಲಕ ಆಯಿತು. ನಮ್ಮ ಮನೆ ಹಾಗೂ ಮನವನ್ನು  ಬೆಳಗಲು ಮಗಳ ಹುಟ್ಟು. ಅವಳಿಗಿಟ್ಟ ಹೆಸರು “ಇಸ್ರಾ ಮರ್ಯಮ್” ಎಂದು. ಇಸ್ರಾ ಅಂದರೆ “ದಿವ್ಯ ನಿಶಾ ಪಯಣ” ಹಾಗೂ ಮರ್ಯಮ್, “ಯೇಸು ಕ್ರಿಸ್ತರ ( ಈಸಾ ) ಮಾತೆ”.

 

ಬೀಜಿಂಗ್ ಒಲಂಪಿಕ್ಸ್, ಮೀನನ್ನು ನಾಚಿಸಿದ ಅಮೆರಿಕೆಯ ಮೈಕೆಲ್ ಪ್ಹೆಲ್ಪ್ಸ್, ಚಂದ್ರಯಾನ, ಮುಂಬೈ ನರಹತ್ಯೆ, ಒಬಾಮ, ಆರ್ಥಿಕ ಹಿಂಜರಿತ ( recession ), ಸೊಮಾಲಿಯಾದ ಕಡಲ್ಗಳ್ಳರು, ಅರವಿಂದ್ ಅಡಿಗರ ಬಿಳಿ ಹುಲಿ, ಮಧ್ಯಪೂರ್ವದಲ್ಲಿ ಇಸ್ರೇಲಿಗಳ ನರಸಂಹಾರ.. ಇವು ವಿಶ್ವಕ್ಕೆ ೨೦೦೮ರ ಕೊಡುಗೆಗಳು.