ಹಡಗನ್ನು ಮುಳುಗಿಸಿದ ಶಾಂಪೇನ್

ನಮ್ಮ ಪಕ್ಕದ ಮನೆಯ ರಂಗಣ್ಣ ಹೊಸ “ಸುವೇಗ” ಮೊಪೆಡ್ ಕೊಂಡಾಗ ಮಾಡಿದ್ದು ಹೀಗೆ. ಒಂದು ಜಮಾನಾದಲ್ಲಿ ಸುವೇಗ ಕೊಳ್ಳೋದು ಒಂದು ಸಾಧನೆಯೇ. ಬಹಳ ಉತ್ಸಾಹ, ಹೆಮ್ಮೆಯಿಂದ ಮನೆಗೆ ತಂದಾಗ ಅವನ ಹೆಂಡತಿ ಆರತಿ ಎತ್ತಿ, ಕಾಯಿ ಒಡೆದು, ಹೂವಿನ ಹಾರ ಹಾಕಿದ ನಂತರ ಒಂದು ನಿಂಬೆ ಹಣ್ಣನ್ನು ಚಕ್ರದಡಿ ಇಟ್ಟು ಸುವೇಗ ಅದರ ಮೇಲೆ ಓಡಿಸಲು ಆದೇಶಿಸಿದಳು. ನನ್ನ ಸೋದರ ಮಾವ ಕಾರು ಕೊಂಡಾಗ ನಿಂಬೆ ಹಣ್ಣಿನ ಮೇಲೆ ಕಾರನ್ನು ಚಲಾಯಿಸಿ ‘ದರ್ಗಾ’ ದರ್ಶನ ಮಾಡಿಸಲು ಕಾರನ್ನು ಓಡಿಸಿ ಕೊಂಡು ಹೋಗಿದ್ದು ನೆನಪಿದೆ. ನಿಂಬೆ ಹಣ್ಣು ಸುವೇಗ ಭಾರಕ್ಕೆ burst ಆಗಿ ಅಪ್ಪಚ್ಚಿಯಾದರೆ ಒಳ್ಳೆಯದು, ಇಲ್ಲದಿದ್ದರೆ unlucky ಎಂದು ಅವಕೃಪೆ ಸುವೆಗಾದ ಮೇಲೂ, ಹೊಸ ಕಾರಿನ ಮೇಲೂ ಬೀಳಬಹುದೇನೋ? ಹೇಗೇ ಇರಲಿ, ಸಂಪ್ರದಾಯ ಎಂದ ಮೇಲೆ ಜನ ನಿಷ್ಠೆಯಿಂದ ಪರಿಪಾಲನೆ ಮಾಡುತ್ತಾರೆ, ಅದೆಷ್ಟೇ ನಗೆಪಾಟಲಾದರೂ ಕೂಡಾ. ಹಡಗಿನ ಶೀರ್ಷಿಕೆ ಕೊಟ್ಟು ಹಳೇ ಕಾಲದ ಬೆಡಗಿನ ಮೊಪೆಡ್ ಬಗ್ಗೆ ಏಕೆ ಪಂಚಾಯತಿ ಎಂದಿರೋ? ಇಲ್ಲಿದೆ ನೋಡಿ ಕಥೆ.

ಪ್ರತೀದಿನ ಮನೆಯಿಂದ, ಆಫೀಸು, ಆಫಿಸಿನಿಂದ ಮನೆ, ಅದರ ಮಧ್ಯೆ ಕೆಲಸದ ನಿಮಿತ್ತ ಓಡಾಟ, ಸರಾಸರಿ ದಿನಕ್ಕೆ ೨೦೦ ಕಿಲೋ ಮೀಟರ್ ಗಳಷ್ಟು. ಈ errand ಗಳಿಗೆ ಸಂಗಾತಿಯಾಗಿ ಕಾರಿನ ರೇಡಿಯೋ. ಸಂಗೀತ ಕೇಳಲು ಅಮೇರಿಕನ್ ಆರ್ಮ್ಡ್ ಫೋರ್ಸಸ್ ಚಾನಲ್, ಮತ್ತು ವಿಶ್ವದ ಆಗುಹೋಗುಗಳ ಬಗ್ಗೆ tuned ಆಗಿರಲು NPR. ಅಮೆರಿಕೆಯ NPR ತೆರನಾದ ರೇಡಿಯೋ ಭಾರತದಲ್ಲಿ ಇರಲು ಸಾಧ್ಯವಿಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ. ಅಷ್ಟೊಂದು ವೃತ್ತಿಪರತೆ ಮತ್ತು ಅಮೋಘ ಕಾರ್ಯಕ್ರಮಗಳು. ಇಟಲಿಯ (ನಮ್ಮ ಬೀಗರ ದೇಶ) ತೀರದಲ್ಲಿ ಲಕ್ಷುರಿ ಲೈನರ್ ಹಡಗು ತೀರಕ್ಕೆ ಅಪ್ಪಳಿಸಿ ಮೂರು ಜನ ಸತ್ತರು ಎನ್ನುವ ಸುದ್ದಿ ಬಂತು. ಒಂದೂವರೆ ಲಕ್ಷ ಟನ್ನು ಭಾರದ ಸರಕುಗಳನ್ನೂ, ನಾಲ್ಕು ಸಾವಿರ ಜನರನ್ನೂ ಹೊತ್ತು ಸಾಗಬಲ್ಲ ಈ floating village ಅತ್ಯಾಧುನಿಕ NAVIGATION ತಂತ್ರಜ್ಞಾನ ಹೊಂದಿತ್ತು. ಆಕಸ್ಮಾತ್ ಆಗಿ ಹಡಗಿಗೆ ಅಪಾಯಕಾರಿಯಾಗುವ ಯಾವುದೇ ಸನ್ನಿವೇಶವನ್ನೂ ಎದುರಿಸುವ ತಂತ್ರಜ್ಞಾನ ಇದ್ದೂ ಎಡವಿದ್ದು ಎಲ್ಲಿ ಎಂದು ತಜ್ಞರ ತಲೆಕೆರೆತ.

“ಕೋಸ್ಟ ಕಾನ್ಕೊರ್ಡಿಯಾ” ಹೆಸರಿನ ಹಡಗು ಮುಳುಗಲು ಆರಂಭವಾದ ಕೂಡಲೇ ಪ್ರಯಾಣಿಕರನ್ನು ರಕ್ಷಿಸುವ ಬದಲು ಎಲ್ಲರಿಗಿಂತ ಮುಂಚೆ ತೀರಕ್ಕೆ ಹಾರಿ ಬಚಾವ್ ಆದ ಶೂರ ೫೨ ರ ಪ್ರಾಯದ ಕ್ಯಾಪ್ಟನ್ ನನ್ನು ಬಂಧನದಲ್ಲಿರಿಸಿ ವಿಚಾರಣೆ ನಡೆಯುತ್ತಿದೆ. ಈ ಅತ್ಯಾಧುನಿಕ ಹಡಗು ಹೊಸತೂ ಹೌದು. ಇದರ ಚೊಚ್ಚಲ ಪ್ರಯಾಣದ ವೇಳೆ, ನಮ್ಮ ಸುವೇಗಾ ಥರ, ಹಡಗಿನ ಮೇಲ್ಮೆ ಮೇಲೆ ಶಾಂಪೇನ್ ಬಾಟಲಿ ಎಸೆಯುತ್ತಾರಂತೆ. ಇದು ಸಂಪ್ರದಾಯ. ನಮ್ಮ ನಿಂಬೆ ಹಣ್ಣಿನ ರೀತಿ. ಶಾಂಪೇನ್ ಬಾಟಲಿ ಒಡೆದು ಚೂರಾದರೆ ಶಕುನ. ಬಾಟಲಿ ಒಡೆಯದಿದ್ದರೆ unlucky. ಕೋಸ್ಟ ಕಾನ್ಕೊರ್ಡಿಯಾ ದ ಮೇಲೆ ಬಿದ್ದ ಶಾಂಪೇನ್ ಬಾಟಲಿ ಒಡೆಯಲಿಲ್ಲ. ಬಾಟಲಿ ಒಡೆಯದೆ ಹಡಗು ದುರಾದೃಷ್ಟ ದ ಹಣೆ ಪಟ್ಟಿ ಅಂಟಿಸಿಕೊಂಡಿತು. ಪ್ರಶಾಂತ “ಟಸ್ಕನ್” ದ್ವೀಪದ ಸನಿಹ ಮುಳುಗು ಹಾಕಿತು. ಈ ಹಡಗು ಸ್ಥಿಮಿತ ತಪ್ಪಿ ವಾಲುತ್ತಿದ್ದಂತೆ ಸುತ್ತಲೂ rescue boat ಗಳು, ಹೆಲಿಕಾಪ್ಟರ್ ಗಳು ಬಂದು ಅಪಾರ ಜೀವಹಾನಿಯನ್ನು ತಡೆದವು. ಕೆಲ ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಪ್ರವಾಹಕ್ಕೆ ಸಿಕ್ಕಿಹಾಕಿಕೊಂಡ ಏಳೆಂಟು ಜನರನ್ನು ಭಾರ್ತಿ ೪೮ ಘಂಟೆಗಳ ಸಮಯವಿದ್ದೂ ರಕ್ಷಿಸಲಾಗದೆ ಜಲಸಮಾಧಿ ಆಗಿದ್ದು ನೆನಪಿದೆ. ಇವರು ಜಲಸಮಾಧಿ ಆದಾಗ ಅಲ್ಲಿ ಮಂತ್ರಿ ಮಹೋದಯರೂ ಇದ್ದರು, ಇದರ ಬಗ್ಗೆ ಟೀಕೆ ಬಂದಾಗ ಮುಖ್ಯಮಂತ್ರಿ ವಸುಂಧರಾ ರಾಜೆ ಕೆರಳಿ ಮಂತ್ರಿ ಯೂ ಅವರ ಜೊತೆ ಮುಳುಗಿ ಸಾಯಬೇಕಿತ್ತೇನೋ ಎಂದು ಕೆರಳಿ ಕೇಳಿದ್ದೂ ನೆನಪಿದೆ. ನಮ್ಮಲ್ಲಿ ಮನುಷ್ಯನ ಜೀವಕ್ಕೆ ಬೆಲೆಯಿಲ್ಲ. ಮುಖ್ಯಮಂತ್ರಿಯ ಹೇಳಿ ಕಾಪ್ಟರ್ ಲ್ಯಾಂಡ್ ಆಗಲು ಒಂದೆರಡು ಘಂಟೆ ತಡವಾದರೆ ವಾಯುಪಡೆ, ಭೂಪಡೆ ಸೇರಿ ಇಡೀ ದೇಶದ ವ್ಯವಸ್ಥೆಯೇ ಸನ್ನದ್ಧ. ನಮ್ಮ ಪಕ್ಕದ ಮನೆಯ ರಂಗಣ್ಣ ಹೊಸ “ಸುವೇಗ” ಮೊಪೆಡ್ ಕೊಂಡಾಗ ಮಾಡಿದ್ದು ಹೀಗೆ. ಒಂದು ಜಮಾನಾದಲ್ಲಿ ಸುವೇಗ ಕೊಳ್ಳೋದು ಒಂದು ಸಾಧನೆಯೇ. ಬಹಳ ಉತ್ಸಾಹ, ಹೆಮ್ಮೆಯಿಂದ ಮನೆಗೆ ತಂದಾಗ ಅವನ ಹೆಂಡತಿ ಆರತಿ ಎತ್ತಿ, ಕಾಯಿ ಒಡೆದು, ಹೂವಿನ ಹಾರ ಹಾಕಿದ ನಂತರ ಒಂದು ನಿಂಬೆ ಹಣ್ಣನ್ನು ಚಕ್ರದಡಿ ಇಟ್ಟು ಸುವೇಗ ಅದರ ಮೇಲೆ ಓಡಿಸಲು ಆದೇಶಿಸಿದಳು. ನನ್ನ ಸೋದರ ಮಾವ ಕಾರು ಕೊಂಡಾಗ ನಿಂಬೆ ಹಣ್ಣಿನ ಮೇಲೆ ಕಾರನ್ನು ಚಲಾಯಿಸಿ ದರ್ಗಾ ದರ್ಶನ ಮಾಡಿಸಲು ಕಾರನ್ನು ಓಡಿಸಿ ಕೊಂಡು ಹೋಗಿದ್ದು ನೆನಪಿದೆ. ನಿಂಬೆ ಹಣ್ಣು ಸುವೇಗ ಭಾರಕ್ಕೆ burst ಆಗಿ ಅಪ್ಪಚ್ಚಿಯಾದರೆ ಒಳ್ಳೆಯದು, ಇಲ್ಲದಿದ್ದರೆ unlucky ಎಂದು ಅವಕೃಪೆ ಸುವೆಗಾದ ಮೇಲೂ, ಹೊಸ ಕಾರಿನ ಮೇಲೂ ಬೀಳಬಹುದೇನೋ? ಹೇಗೇ ಇರಲಿ, ಸಂಪ್ರದಾಯ ಎಂದ ಮೇಲೆ ಜನ ನಿಷ್ಠೆಯಿಂದ ಪರಿಪಾಲನೆ ಮಾಡುತ್ತಾರೆ, ಅದೆಷ್ಟೇ ನಗೆಪಾಟಲಾದರೂ ಕೂಡಾ. ಹಡಗಿನ ಶೀರ್ಷಿಕೆ ಕೊಟ್ಟು ಹಳೇ ಕಾಲದ ಬೆಡಗಿನ ಮೊಪೆಡ್ ಬಗ್ಗೆ ಏಕೆ ಪಂಚಾಯತಿ ಎಂದಿರೋ? ಇಲ್ಲಿದೆ ನೋಡಿ ಕಥೆ.

ಪ್ರತೀದಿನ ಮನೆಯಿಂದ, ಆಫೀಸು, ಆಫಿಸಿನಿಂದ ಮನೆ, ಅದರ ಮಧ್ಯೆ ಕೆಲಸದ ನಿಮಿತ್ತ ಓಡಾಟ, ಸರಾಸರಿ ದಿನಕ್ಕೆ ೨೦೦ ಕಿಲೋ ಮೀಟರ್ ಗಳಷ್ಟು. ಈ errand ಗಳಿಗೆ ಸಂಗಾತಿಯಾಗಿ ಕಾರಿನ ರೇಡಿಯೋ. ಸಂಗೀತ ಕೇಳಲು ಅಮೇರಿಕನ್ ಆರ್ಮ್ಡ್ ಫೋರ್ಸಸ್ ಚಾನಲ್, ಮತ್ತು ವಿಶ್ವದ ಆಗುಹೋಗುಗಳ ಬಗ್ಗೆ tuned ಆಗಿರಲು NPR. ಅಮೆರಿಕೆಯ NPR ತೆರನಾದ ರೇಡಿಯೋ ಭಾರತದಲ್ಲಿ ಇರಲು ಸಾಧ್ಯವಿಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ. ಅಷ್ಟೊಂದು ವೃತ್ತಿಪರತೆ ಮತ್ತು ಅಮೋಘ ಕಾರ್ಯಕ್ರಮಗಳು. ಇಟಲಿಯ (ನಮ್ಮ ಬೀಗರ ದೇಶ) ತೀರದಲ್ಲಿ ಲಕ್ಷುರಿ ಲೈನರ್ ಹಡಗು ತೀರಕ್ಕೆ ಅಪ್ಪಳಿಸಿ ಮೂರು ಜನ ಸತ್ತರು ಎನ್ನುವ ಸುದ್ದಿ ಬಂತು. ಒಂದೂವರೆ ಲಕ್ಷ ಟನ್ನು ಭಾರದ ಸರಕುಗಳನ್ನೂ, ನಾಲ್ಕು ಸಾವಿರ ಜನರನ್ನೂ ಹೊತ್ತು ಸಾಗಬಲ್ಲ ಈ floating village ಅತ್ಯಾಧುನಿಕ NAVIGATION ತಂತ್ರಜ್ಞಾನ ಹೊಂದಿತ್ತು. ಆಕಸ್ಮಾತ್ ಆಗಿ ಹಡಗಿಗೆ ಅಪಾಯಕಾರಿಯಾಗುವ ಯಾವುದೇ ಸನ್ನಿವೇಶವನ್ನೂ ಎದುರಿಸುವ ತಂತ್ರಜ್ಞಾನ ಇದ್ದೂ ಎಡವಿದ್ದು ಎಲ್ಲಿ ಎಂದು ತಜ್ಞರ ತಲೆಕೆರೆತ. “ಕೋಸ್ಟ ಕಾನ್ಕೊರ್ಡಿಯಾ” ಹೆಸರಿನ ಹಡಗು ಮುಳುಗಲು ಆರಂಭವಾದ ಕೂಡಲೇ ಪ್ರಯಾಣಿಕರನ್ನು ರಕ್ಷಿಸುವ ಬದಲು ಎಲ್ಲರಿಗಿಂತ ಮುಂಚೆ ತೀರಕ್ಕೆ ಹಾರಿ ಬಚಾವ್ ಆದ ಶೂರ ೫೨ ರ ಪ್ರಾಯದ ಕ್ಯಾಪ್ಟನ್ ನನ್ನು ಬಂಧನದಲ್ಲಿರಿಸಿ ವಿಚಾರಣೆ ನಡೆಯುತ್ತಿದೆ. ಈ ಅತ್ಯಾಧುನಿಕ ಹಡಗು ಹೊಸತೂ ಹೌದು. ಇದರ ಚೊಚ್ಚಲ ಪ್ರಯಾಣದ ವೇಳೆ, ನಮ್ಮ ಸುವೇಗಾ ಥರ, ಹಡಗಿನ ಮೇಲ್ಮೆ ಮೇಲೆ ಶಾಂಪೇನ್ ಬಾಟಲಿ ಎಸೆಯುತ್ತಾರಂತೆ. ಇದು ಸಂಪ್ರದಾಯ. ನಮ್ಮ ನಿಂಬೆ ಹಣ್ಣಿನ ರೀತಿ. ಶಾಂಪೇನ್ ಬಾಟಲಿ ಒಡೆದು ಚೂರಾದರೆ ಶಕುನ. ಬಾಟಲಿ ಒಡೆಯದಿದ್ದರೆ unlucky. ಕೋಸ್ಟ ಕಾನ್ಕೊರ್ಡಿಯಾ ದ ಮೇಲೆ ಬಿದ್ದ ಶಾಂಪೇನ್ ಬಾಟಲಿ ಒಡೆಯಲಿಲ್ಲ. ಬಾಟಲಿ ಒಡೆಯದೆ ಹಡಗು ದುರಾದೃಷ್ಟ ದ ಹಣೆ ಪಟ್ಟಿ ಅಂಟಿಸಿಕೊಂಡಿತು. ಪ್ರಶಾಂತ “ಟಸ್ಕನ್” ದ್ವೀಪದ ಸನಿಹ ಮುಳುಗು ಹಾಕಿತು. ಈ ಹಡಗು ಸ್ಥಿಮಿತ ತಪ್ಪಿ ವಾಲುತ್ತಿದ್ದಂತೆ ಸುತ್ತಲೂ rescue boat ಗಳು, ಹೆಲಿಕಾಪ್ಟರ್ ಗಳು ಬಂದು ಅಪಾರ ಜೀವಹಾನಿಯನ್ನು ತಡೆದವು.

ಕೆಲ ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಪ್ರವಾಹಕ್ಕೆ ಸಿಕ್ಕಿಹಾಕಿಕೊಂಡ ಏಳೆಂಟು ಜನರನ್ನು ಭಾರ್ತಿ ೪೮ ಘಂಟೆಗಳ ಸಮಯವಿದ್ದೂ ರಕ್ಷಿಸಲಾಗದೆ ಜಲಸಮಾಧಿ ಆಗಿದ್ದು ನೆನಪಿದೆ. ಇವರು ಜಲಸಮಾಧಿ ಆದಾಗ ಅಲ್ಲಿ ಮಂತ್ರಿ ಮಹೋದಯರೂ ಇದ್ದರು, ಇದರ ಬಗ್ಗೆ ಟೀಕೆ ಬಂದಾಗ ಮುಖ್ಯಮಂತ್ರಿ ವಸುಂಧರಾ ರಾಜೆ ಕೆರಳಿ ಮಂತ್ರಿ ಯೂ ಅವರ ಜೊತೆ ಮುಳುಗಿ ಸಾಯಬೇಕಿತ್ತೇನೋ ಎಂದು ಕೆರಳಿ ಕೇಳಿದ್ದೂ ನೆನಪಿದೆ. ನಮ್ಮಲ್ಲಿ ಮನುಷ್ಯನ ಜೀವಕ್ಕೆ ಬೆಲೆಯಿಲ್ಲ. ಮುಖ್ಯಮಂತ್ರಿಯ ಹೇಳಿ ಕಾಪ್ಟರ್ ಲ್ಯಾಂಡ್ ಆಗಲು ಒಂದೆರಡು ಘಂಟೆ ತಡವಾದರೆ ವಾಯುಪಡೆ, ಭೂಪಡೆ ಸೇರಿ ಇಡೀ ದೇಶದ ವ್ಯವಸ್ಥೆಯೇ ಸನ್ನದ್ಧ.

ಗೋ ಹತ್ಯೆ ನಿಷೇಧಿಸಿ

ದೇಶದ ಸಮಯ, ಸಂಪನ್ಮೂಲಗಳನ್ನು ನುಂಗುತ್ತಿರುವ ಹಲವು ತಗಾದೆಗಳಲ್ಲಿ ಗೋ ಹತ್ಯೆ ಒಂದು. ಹಿಂದೂಗಳು ಪವಿತ್ರ, ಮಾತೆ ಎಂದು ಆದರಿಸಲ್ಪಡುವ, ಗೌರವಿಸಲ್ಪಡುವ ಗೋವಿನ ಮತ್ತು ಅದನ್ನು ಸಂರಕ್ಷಿಸಬೇಕಾದ ವಿಧಾನಗಳ ಬಗ್ಗೆ ಚರ್ಚೆಗೆ ಶತಮಾನಗಳ ಇತಿಹಾಸ ಇದೆ. ಸಾಕಷ್ಟು ನೆತ್ತರೂ ಹರಿದಿದೆ. ದೇಶವನ್ನು ಕಿತ್ತು ತಿನ್ನುವ ಸಮಸ್ಯೆಗಳಿಗೆ ರಾಜಕಾರಣದ ಲೇಪನ ಇಲ್ಲದಿದ್ದರೆ ಅದಕ್ಕೆ ಮಹತ್ವವಾಗಲೀ, ಮೋಜಾಗಲೀ ಇರುವುದಿಲ್ಲ. ಗೋ ವಿನ ವಿಷಯದಲ್ಲೂ ಆಗಿದ್ದೂ ಇದೇ.  ಗೋ ಮಾಂಸ ಭಕ್ಷಕರೆಂದು ಪರಿಗಣಿಸಲ್ಪಡುವ, ಮುಖ್ಯವಾಗಿ ಕ್ರೈಸ್ತರು ಮತ್ತು ಮುಸ್ಲಿಮರಿಗೆ, ಗೋ ಮಾಂಸವನ್ನು ಅವರ ಮೆನ್ಯು (menu) ಪಟ್ಟಿಯಿಂದ ತೆಗೆದುಬಿಟ್ಟರೆ ಆಕಾಶ ಕಳಚಿ ಬೀಳೋಲ್ಲ. ಹೃದಯದ  clogged arteries ಗಳಿಗೆ ಮಾತ್ರ ದೊಡ್ಡ ಪ್ರಯೋಜನವಾಗುತ್ತದೆ ಈ ಮಾಂಸ ಮೆನ್ಯು ವಿನಿಂದ ಹೊರಗುಳಿದರೆ.

ಈಗ ಪ್ರವೇಶ ರಾಜಕಾರಣ. ಎಂಟರ್ ದಿ ಡ್ರಾಗನ್ ಥರ. ಅಪಾಯಕಾರಿ ಆದರೂ ಒಂದಿಷ್ಟು ಸೀಟುಗಳನ್ನು ಅಥವಾ ಅಧಿಕಾರದ ಗದ್ದುಗೆಯನ್ನು ತರಲು ಸಹಕಾರಿಯಾದರೆ ಗೋವನ್ನು ಮಾತ್ರವಲ್ಲ ಯಾರನ್ನು ಬೇಕಾದರೂ ಬಲಿ ಕೊಡಲು ಸಿದ್ಧ. ಗೋಮಾಂಸ ನಿಷೇಧಿಸಿದರೆ ಅಲ್ಪಸಂಖ್ಯಾತರ ಆಹಾರ ಪದ್ಧತಿ ಯಲ್ಲಿ ಹಸ್ತಕ್ಷೇಪ ನಡೆಸಿದಂತೆ ಎಂದು ರಗಳೆ ಇವರದು. ಗೋ ಮಾಂಸ ತಿಂದೇ ಸಿದ್ಧ ಎಂದು ಪಟ್ಟು ಹಿಡಿಯುವ ಅಲ್ಪತನ ಅಲ್ಪ ಸಂಖ್ಯಾತರು ತೋರಿಸರು ಎನ್ನುವ ಪ್ರಜ್ಞೆ ಇವರಿಗಿಲ್ಲ, ಆಳುವ ಮಂದಿಗೆ. ಗೋ ಮಾಂಸ ನಿಷೇಧಿಸಿ ಬಿಟ್ಟರೆ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದೀತು ಎನ್ನುವ ಅತಂತ್ರ, ಅಭದ್ರ ಮನಸ್ಥಿತಿಯವರೂ ಅಲ್ಲ ಮುಸ್ಲಿಮರು ಅಥವಾ ಕ್ರೈಸ್ತರು. ಮತ್ತೇಕೆ ಈ ಸಮಸ್ಯೆ ಆಗಾಗ ತಲೆ ಎತ್ತುತ್ತಾ ಇರುತ್ತದೆ ಎನ್ನುವುದು ಯಕ್ಷ ಪ್ರಶ್ನೆ.

ಗೋ ಹತ್ಯೆ ಬಹುಸಂಖ್ಯಾತ ವರ್ಗದವರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದಾದರೆ ಖಂಡಿತಾ ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೆ ತಂದೇ ತೀರಬೇಕು. ಗೋ ಹತ್ಯಾ ನಿಷೇಧ ಕೂಡದು ಎನ್ನುವ ಕಾಂಗ್ರೆಸ್ಸಿಗರು ಮುಸ್ಲಿಮರ ಓಟಿಗಾಗಿ ದೊಂಬರಾಟ ನಡೆಸೋದು ನಿಲ್ಲಿಸಬೇಕು. ಮುಸ್ಲಿಮರಿಗೆ ಗೋ ಮಾಂಸ ತಿನ್ನಲೇ ಬೇಕೆನ್ನುವ ನಿಯಮವೇನಿಲ್ಲ. ದಿನ ಪೂರ್ತಿ ಇದರ ಜಪ ಮಾಡುತ್ತಾ ಕೂರುವ ವ್ಯವಧಾನವೂ ಇಲ್ಲ ಅವರಲ್ಲಿ. ಅವರಿಗೆ (ಮುಸ್ಲಿಮರಿಗೆ) ತಲೆಕೆಡಿಸಿ ಕೊಳ್ಳಬೇಕಾದ ನೂರೊಂದು ವಿಷಯಗಳಿವೆ. ಮುಸ್ಲಿಂ ಧರ್ಮೀಯ ಸಸ್ಯಾಹಾರಿಯಾಗಲು ಧರ್ಮದ ಅಡ್ಡಿಯಿಲ್ಲ. ನಿಷೇಧ ಬೇಡ ಎನ್ನುವ ಕಾಂಗ್ರೆಸ್ಸಿಗರಿಗೆ ಏಕೆ ಗೋವು ಪವಿತ್ರ ಅಲ್ಲ ಅನ್ನೋದು ಒಂದು ಒಗಟು. ಹಾಗೆಯೇ ಗೋವು ಪಾವಿತ್ರ್ಯತೆಯನ್ನು ಪಡೆದು ಕೊಂಡಿದ್ದು ಯಾವಾಗಿನಿಂದ ಎಂದು ಯಾರಾದರೂ ಬೆಳಕು ಚೆಲ್ಲಿದರೆ ಉಪಕಾರ. ಈ ಸಂಬಂಧ ಪ್ರೊಫೆಸರ್ D.N. Jha ರವರು ಬರೆದ the myth of holy cow ಪುಸ್ತಕದಲ್ಲಿ ಗೋಮೇಧ, ಅಶ್ವಮೇಧ ಯಾಗಗಳು, ಗೋಮಾಂಸ ಭಕ್ಷಿಸಿದ ಉದಾಹರಣೆಗಳೊಂದಿಗೆ ವಿಸ್ತೃತವಾದ ಮಾಹಿತಿಗಳಿವೆ.

ಗೋ ಹತ್ಯೆಯ ಬಗ್ಗೆ ಮುಸ್ಲಿಮರಿಗೆ ಇರುವ ತಕರಾರಿಗಿಂತ ಬಹುಸಂಖ್ಯಾತರಿಗೆ ಹೆಚ್ಚು ಆಸಕ್ತಿಕರ ಎನ್ನುವುದು ಕಾಂಗ್ರೆಸ್ಸಿಗರ ಮತ್ತು ಇತರೆ ಪಕ್ಷಗಳವರ ಪ್ರತಿಭಟನೆಗಳಿಂದ ವ್ಯಕ್ತವಾಗುತ್ತದೆ. ಈ ತಗಾದೆಯಿಂದ ಶಾಂತಿ ಪ್ರಿಯ ಭಾರತೀಯರು ಹೊರಗುಳಿದರೆ ದೇಶಕ್ಕೆ ಒಳ್ಳೆಯದು. ಏಕೆಂದರೆ ಇಲ್ಲಿ ನಡೆಯುತ್ತಿರುವುದು ಚರ್ಚೆಗಿಂತ ಸಮುದಾಯಗಳ ನಡುವಿನ ಕಂದಕದ ನಿರ್ಮಾಣದ ಬಗ್ಗೆ ಹೆಚ್ಚಿನ ಆಸಕ್ತಿ ಕಾಣುತ್ತದೆ.     

  

 

ಭೌತ ಶಾಸ್ತ್ರದಷ್ಟೇ ಕಠಿಣ, ಹೆಣ್ಣು

ವಿಶ್ವವಿಖ್ಯಾತ ಭೌತಶಾಸ್ತ್ರಜ್ಞ, ಮತ್ತು cosmologist ಸ್ಟೀಫನ್ ಹಾಕಿಂಗ್, ಮೊನ್ನೆಯ ಭಾನುವಾರ ೭೦ನೆ ಜನ್ಮ ದಿನಾಚರಣೆ ಆಚರಿಸಿದರು. ಸರ್ ಐಸಾಕ್ ನ್ಯೂಟನ್ ನಂತರದ ಅತ್ಯಂತ ಪ್ರತಿಭಾವಂತ ವಿಜಾನಿ ಎಂದು ಪರಿಗಣಿಸಲ್ಪಡುವ ಸ್ಟೀಫನ್ ಹಾಕಿಂಗ್ ಬ್ರಿಟಿಶ್ ಪ್ರಜೆ.

ಭೌತಶಾಸ್ತ್ರ ಅಥವಾ ಬ್ರಹ್ಮಾಂಡ ಶಾಸ್ತ್ರ ನನ್ನ ಕೈಗೆಟುಕುವ ಮಾತಲ್ಲ. ಇವೆರಡೂ ಇಮಾಂ ಸಾಹೇಬರಿಗೂ, ಜನ್ಮಾಷ್ಠಮಿ ಗೂ ಇರುವ ಸಂಬಂಧ ಹೇಗೋ ಹಾಗೆ. ೧೯೮೮ ರಲ್ಲಿ ಪ್ರಕಟವಾದ ಸ್ಟೀಫನ್ ಹಾಕಿಂಗ್ ರ brief history of time ಪುಸ್ತಕ ಒಂದು ಕೋಟಿಗೂ ಹೆಚ್ಚು ಪ್ರತಿಗಳ ಮುದ್ರಣ ಕಂಡಿತು. ಇಷ್ಟು ಜನಪ್ರಿಯವಾದ ಪುಸ್ತಕದಲ್ಲಿ ಏನಿರಬಹುದು ಎಂದು ಆಸಕ್ತಿ ಕುದುರಿದ್ದರಿಂದಲೂ, ಮತ್ತು  ಈ ಪುಸ್ತಕದಲ್ಲಿ ಹಾಕಿಂಗ್ ದೇವರ ಅಸ್ತಿತ್ವದ ಸಾಧ್ಯತೆ ಬಗ್ಗೆ ಬರೆದಿದ್ದರು ಎಂದು ಕೇಳಿದ್ದರಿಂದಲೂ ಪುಸ್ತಕ ಕೊಂಡೆ. ಓದಿದ ನಂತರ ಅರ್ಥವಾಗಿದ್ದು ಅಷ್ಟಕ್ಕಷ್ಟೇ, ಆದರೆ ಈ ವಿಜ್ಞಾನಿಯ ಬಗ್ಗೆ ಆಸಕ್ತಿ ಮಾತ್ರ ನನ್ನಲ್ಲಿ ಉಳಿದುಕೊಂಡಿತು.

೧೯೪೨ ರಲ್ಲಿ ಜನಿಸಿದ ಸ್ಟೀಫನ್ ಹಾಕಿಂಗ್ ಗೆ ೨೧ ನೇ ವಯಸ್ಸಿನಲ್ಲಿ ALS (Amyotrophic lateral sclerosis) ಅಥವಾ ಲೂ ಗೆಹ್ರಿಗ್ ಎಂದೂ ಕರೆಯಲ್ಪಡುವ, ಮೆದುಳನ್ನು ಮತ್ತು ಬೆನ್ನ ಹುರಿಯನ್ನು ಬಾಧಿಸುವ ವಾಸಿಯಾಗದ ನರರೋಗ ಇದೆ ದೃಢ ಪಟ್ಟ ನಂತರ ವೈದ್ಯರು ಇವರ ಬದುಕುವ ಕಾಲ ಕೇವಲ ಇನ್ನೆರಡು ವರ್ಷ ಎಂದಿದ್ದರು. ೨೩ ನೇ ವಯಸ್ಸಿನಲ್ಲಿ ಅಂತ್ಯ ಕಾಣಬೇಕಿದ್ದ ಈ ವಿಜ್ಞಾನಿ ಕಾಯಿಲೆ ವಾಸಿಯಾಗದಿದ್ದರೂ ೭೦ ನೇ ಜನ್ಮ ದಿನ ಆಚರಿಸುತ್ತಿದ್ದಾರೆ. ಉಲ್ಬಣಗೊಳ್ಳುತ್ತಾ (debilitating and degenerative disease) ಹೋಗುವ ಈ ಕಾಯಿಲೆ ಸ್ಟೀಫನ್ ರನ್ನು ಮಾತನಾಡಲೂ, ಬರೆಯಲೂ ಸಾಧ್ಯವಾಗದಂತೆ ಮಾಡಿತು. ಜನರೊಂದಿಗೆ ಸಂವಾದಿಸಲು ಅವರಿಗಾಗಿ ಪ್ರತ್ಯೇಕ ಯಂತ್ರವನ್ನ ಕಂಡು ಹಿಡಿಯಲಾಯಿತು. ಶರೀರದ ಕೆಲವೇ ಕೆಲವು ಸ್ನಾಯುಗಳನ್ನು ಉಪಯೋಗಿಸಿ ಗಣಕ ಯಂತ್ರದ ಕೀಲಿಮಣೆ ಮೂಲಕ ಸಂವಾದ ನಡೆಸುತ್ತಿದ್ದರು ಹಾಕಿಂಗ್. ಈಗ ಅದೂ ಕಷ್ಟವಾಗಿ ಕೇವಲ ಕೆನ್ನೆಗಳ ಸ್ನಾಯುಗಳ ಸಹಾಯದಿಂದ ಸಂವಾದ ನಡೆಸುತ್ತಿದ್ದಾರೆ.

ಮೆದುಳು ಮತ್ತು ಶರೀರ tandem ಆಗಿ ಕೆಲಸ ಮಾಡುತ್ತವೆ. ಶರೀರದ ಸ್ನಾಯುಗಳು ಕೆಲಸ ಮಾಡಲು ಸಹಾಯ ಮಾಡುವುದು ಮೆದುಳಿನಿಂದ ಹೊರಡುವ ಆಜ್ಞೆಗಳು. ಆದರೆ ALS ಖಾಯಿಲೆಯಲ್ಲಿ ಸ್ನಾಯುಗಳು ಕೆಲಸ ಮಾಡದಿದ್ದರೂ ಮೆದುಳು ಮಾತ್ರ pristine ಆಗಿಯೇ ಉಳಿಯುತ್ತದೆ. ಈ ಬೆಳವಣಿಗೆ ALS ಖಾಯಿಲೆಗೆ ಸೀಮಿತವಲ್ಲದಿದ್ದರೂ ಹಾಕಿಂಗ್ ವಿಷಯದಲ್ಲಿ ಮಾತ್ರ ಅನ್ವಯವಾಗುತ್ತಿದೆ. ಹಾಕಿನ್ ರ ಮೆದುಳು ಬುದ್ದಿ ಮತ್ತೆಯಲ್ಲಿ ಇಷ್ಟೊಂದು ಪ್ರಖರವಾಗಿದ್ದರೂ ಯಾವುದೇ ಶಾರೀರಿಕ ನ್ಯೂನತೆಯಿಲ್ಲದ ಹಾಕಿಂಗ್ ಶರೀರ ಮಾತ್ರ ಏಕೆ ಈ ರೀತಿ ವರ್ತಿಸುತ್ತಿರಬಹುದು? ಒಂದು ಲೋಟ ನೀರು ಬೇಕು ಎಂದು ಕೇಳಲೂ ಸಾಧ್ಯವಾಗದ ರೀತಿಯಲ್ಲಿ ಅವರ ಶಾರೀರಿಕ ಸಾಮರ್ಥ್ಯ ಕುಗ್ಗಲು ದೇವರಿಲ್ಲ ಎಂದು ಶತಸ್ಸಿದ್ಧ ಸಾಧಿಸಲು ಹೊರಟ ಅವರಿಗೆ ಪರಮಾತ್ಮ ಕೊಡಮಾಡಿದ ಶಿಕ್ಷೆ ಇರಬಹುದೋ ಎಂದು ಕೆಲವು ಸಂದೇಹ ವ್ಯಕ್ತಪಡಿಸುತ್ತಾರೆ.  

ಭೌತ ಶಾಸ್ತ್ರಕ್ಕಿಂತಲೂ ಇವರ ಅಧ್ಯಯನ ಮತ್ತು ಸಂಶೋಧನೆ ನಭೋ ಮಂಡಲದ ಬಗ್ಗೆ. expanding universe, black hole ಹೀಗೆ ಮಾನವನ ಕುತೂಹಲ ಮತ್ತು ಅಚ್ಚರಿಯನ್ನು ಹಿಡಿದಿಟ್ಟ,  ನಮ್ಮ ಭೂಮಿ ಮತ್ತು ಬ್ರಹ್ಮಾಂಡ ಹೇಗೆ ಅಸ್ತಿತ್ವಕ್ಕೆ ಬಂದಿರಬಹುದು ಎನ್ನುವ ಶಂಶೋಧನೆಯಲ್ಲಿ ಇವರ ಆಸಕ್ತಿ. ಒಂದೊಮ್ಮೆ ದೇವರ ಅಸ್ತಿತ್ವದ ಬಗ್ಗೆ ಸಕಾರಾತ್ಮಕ ವಾಗಿದ್ದ ಅವರ ನಿಲುವು ನಂತರ ಬದಲಾಯಿತು. ಸ್ವರ್ಗ ಎನ್ನುವುದು ಒಂದು fairy story ಮಾತ್ರ ಎಂದು ಹಾಕಿಂಗ್ ರ ಅಭಿಪ್ರಾಯ.

 

ವಿಸ್ತಾರ ಗೊಳ್ಳುತ್ತಿರುವ ಬ್ರಹ್ಮಾಂಡದ ಬಗ್ಗೆ ಚಿಂತಿಸುವ, black hole ಗಳ ನಿಗೂಢತೆ ಬಗ್ಗೆ ಬಗ್ಗೆ ಅಭ್ಯಸಿಸುವ, ಈ ವಿಜ್ಞಾನಿಗೆ ಭೌತಶಾಸ್ತ್ರದಷ್ಟೇ ಕಠಿಣ ಎಂದು ತೋರಿದ ಮತ್ತೊಂದು ವಿಷಯ ಹೆಣ್ಣು. women. they are a complete mystery. ದಾರ್ಶನಿಕರು, ಕವಿಗಳು, ಭಗ್ನ ಹೃದಯೀ ಪುರುಷರು ಹಳಿದ, ಹಲುಬಿದ, ಹೆಣ್ಣು ಸ್ಟೀಫನ್ ರಿಗೂ enigma ಆದಳು. black hole ಥರ.

ಸ್ಟೀಫನ್ ಹಾಕಿಂಗ್ ರಿಗೆ ಹುಟ್ಟು ಹಬ್ಬದ ಶುಭಾಶಯಗಳೊಂದಿಗೆ……

ಸಚಿನ್ ಮತ್ತೊಬ್ಬ ಬ್ಯಾಟ್ಸ್ಮನ್, ಅಷ್ಟೇಯ

ಸಚಿನ್ ಮತ್ತೊಬ್ಬ ಬ್ಯಾಟ್ಸ್ ಮ್ಯಾನ್ ಅಷ್ಟೇ, ಎಂದ ಆಸ್ಟ್ರೇಲಿಯದ ಪೋರ. sachin is just another batsman. ಸತ್ಯವನ್ನೇ ನುಡಿದ ಆಸೀ ಬೌಲರ್ ‘ಪೀಟರ್ ಸಿಡ್ಲ್’. ಸಿಡಿಲಿನಂಥ ಮಾತು ಸಿಡ್ಲ್ ನಿಂದ. “ಸಚಿನ್ ಒಬ್ಬ ದೊಡ್ಡ ಮಿಕ. ಆತನನ್ನು ಔಟ್ ಮಾಡೋದೆಂದರೆ ಖುಷಿಯೇ. ಆದರೆ ನನಗೆ ಆತ ಮತ್ತೊಬ್ಬ ಬ್ಯಾಟ್ಸ್ಮನ್” ಎಂದು ಹೇಳಿದ ಸಿಡ್ಲ್ ಮಾತುಗಳಲ್ಲಿ ಸಚಿನ್ ಬಗ್ಗೆ ಅಭಿಮಾನವೂ, ಅದರೊಂದಿಗೇ ಸ್ಪರ್ದಾತ್ಮಕ ಕ್ರೀಡೆಯ ವಾಸ್ತವದ ಬಗೆಗಿನ ಸ್ಪಷ್ಟ ಕಲ್ಪನೆಯೂ ಕಾಣಬಹುದಿತ್ತು. ನಿಸ್ಸಂಶಯವಾಗಿಯೂ ಸಚಿನ್ ಒಬ್ಬ ಮಾಂತ್ರಿಕ, ಚಮತ್ಕಾರಿಕ ಬ್ಯಾಟ್ಸ್ಮನ್. ಆತನ ಹಲಗೆಯಿಂದ ಬಂದ ಓಟಗಳು ಶತ್ರು ಎನ್ನುವ ಭೂತದ ಬೆನ್ನು ಹತ್ತುತ್ತಿತ್ತು. ಬೌಂಡರಿಗಳ, ಸಿಕ್ಸರಗಳ ಸುರಿಮಳೆ. ಎಲ್ಲವೂ ಸರಿ. ಆತ ಅಪ್ಪಟ ಚಿನ್ನ, ಸ್ವಭಾವದಲ್ಲಿ. ಕೀರುತಿ, ಕಾಂಚಾಣ ತನ್ನ ಕಾಲ ಬುಡದಲ್ಲಿ ಬಿದ್ದಿದ್ದರೂ ಅಹಂ ಎನ್ನುವ ನೆರಳೂ ಸಹ ಅವನ ಬಳಿ ಸುಳಿಯಲಿಲ್ಲ. ಸಾಮಾನ್ಯವಾಗಿ ಜನರಿಗೆ ಯಶಸ್ಸು ಬಹು ಬೇಗ ತಲೆಗೆ ಏರಿ ಬಿಡುತ್ತದೆ. ಆದರೆ ಸಚಿನ್ ವಿಷಯದಲ್ಲಿ ಹಾಗಾಗಲಿಲ್ಲ. ತಾನು ಸೀದಾ ಸಾದಾ ಆಗಿರಲು ಬಯಸಿದ, ಹಾಗೆಯೇ ಪ್ರಪಂಚಕ್ಕೆ ತೋರಿಸಿದ ಕೂಡಾ. ಆದರೆ ಆದದ್ದೇನೆಂದರೆ ಯಶಸ್ಸು ಅವನ ತಲೆಗೆ ಹತ್ತದಿದ್ದರೂ ನಮ್ಮ ತಲೆಗಂತೂ ಖಂಡಿತಾ ಏರಿತು, ಯಶಸ್ಸಿನ ಮದ. ಸಚಿನ್ ನಂಥವನು ಹುಟ್ಟೇ ಇಲ್ಲ ಎಂದು ಒಬ್ಬ ಹೇಳಿದರೆ, ಮತ್ತೊಬ್ಬ ಹೇಳಿದ ಸಚಿನ್ ನಂಥವರು ಹುಟ್ಟೋದಿಲ್ಲ ಎಂದು. ಸಚಿನ್ ನನ್ನು ಸೃಷ್ಟಿಸಿದ ದೇವರಿಗೆ ನೇರವಾದ ಸವಾಲು. ಸಚಿನ್ ಡೋನಾಲ್ಡ್ ಬ್ರಾಡ್ಮನ್ ಎಂದು ಒಬ್ಬ ಉಲಿದರೆ, ಮತ್ತೊಬ್ಬನಿಗೆ ಬ್ರಾಡ್ಮನ್ ಗಿಂತ ಆತ ಮಿಗಿಲು. ಕೊನೆಗೆ ಒಬ್ಬ ಹೇಳಿಯೇ ಬಿಟ್ಟ. ಹೇಳಬಾರದ್ದನ್ನ. ಏನಂತ……..? ಸಚಿನ್ ಈಸ್ ಗಾಡ್………ಒಹ್ ಮೈ ಗ್ಗಾಡ್ !  ವಿವೇಚನೆಯ ಶವಪೆಟ್ಟಿಗೆಗೆ ಕಟ್ಟ ಕಡೆಯ ಮೊಳೆ. ಜನರನ್ನು ಅಟ್ಟಕ್ಕೆ ಏರಿಸುವುದು ಅಥವಾ ಚಟ್ಟಕ್ಕೆ ಏರಿಸುವುದು ಹಳೆಯ ಚಾಳಿ. ಪ್ರದರ್ಶನ ಉತ್ತಮ, ಅಮೊಘವಾದರೆ ಹೊಗಳಿಕೆ ಕಿವಿ ಗಡಚ್ಚಿಕ್ಕುವ ಹಾಗೆ. ಯಾವುದಾದರೂ ಕಾರಣಕ್ಕೆ ಸ್ವಲ್ಪ ಎಡವಟ್ಟಾಯಿತೋ ಅಂತ್ಯ ಸಂಸ್ಕಾರ ಶುರು.

ಸಚಿನ್ ಶತಕದಿಂದ ಭಾರತಕ್ಕೆ ಆದ ಲಾಭ ನಷ್ಟಗಳನ್ನು ನೋಡಿದರೆ ಬ್ಯಾಲನ್ಸ್ ಡೆಬಿಟ್ ಆಗಿ ಕಾಣುತ್ತದೆ. hasty eighties, nervous nineties ದಾಟಿಕೊಂಡು ಮುಟ್ಟುವ ಯಾವುದೇ ಶತಕ ತಂಡದ ನೆರವಿಗೆ ಬರುವುದು ಸ್ವಲ್ಪ ಕಡಿಮೆಯೇ ಎನ್ನಬಹುದು. ಸ್ಕೋರ್ ಬೋರ್ಡ್ ಕಡೆ ಕಣ್ಣು ನೆಡದೆ ಕೈ ಹೊಸಕಿಕೊಳ್ಳುತ್ತಾ ಕಾತುರದಿಂದ ವಿಜಯದ ನಿರೀಕ್ಷೆ ಅಥವಾ ಸೋಲಿನ ದವಡೆಯಿಂದ ಪಾರಾಗಲು ಪ್ರಾರ್ಥಿಸುವವರನ್ನು ಗಮನದಲ್ಲಿಟ್ಟು ಕೊಂಡು ಆಡುವ ಆಟವೇ ಬೇರೆ. ಸಚಿನ್ ಎಲ್ಲಾ ಸಮಯವೂ ಸ್ವಾರ್ಥದಿಂದ ಆಡಿದ ಎಂದಲ್ಲ ನನ್ನ ಅಭಿಪ್ರಾಯ. ಸೋಲು ಗೆಲುವಿನ ದಾಖಲೆಗಳನ್ನು ನೋಡಿದಾಗ ಕಂಪೆನಿಗೆ ನಷ್ಟ, ನೌಕರನಿಗೆ ಲಾಭದ ರೀತಿಯ ಲೆಕ್ಕಾಚಾರ ಗೋಚರಿಸುತ್ತದೆ.

ಸಚಿನ್ ನ ನೂರನೇ ಶತಕಕ್ಕಾಗಿ ದೇಶ ಚಾತಕ ಪಕ್ಷಿ. ಆಸ್ಟ್ರೇಲಿಯಾದ ವಿರುದ್ಧದ ಮೊದಲ ಟೆಸ್ಟಿನಲ್ಲಿ ಭಾರತದ ಸೋಲು. ಬೆನ್ನಟ್ಟಲು ಇದ್ದಿದ್ದು ಮುನ್ನೂರಕ್ಕೂ ಕಡಿಮೆ ರನ್ನುಗಳು. ಬ್ಯಾಟಿಂಗ್ ಆಳ ನೋಡಿದರೆ ಅಟ್ಲಾಂಟಿಕ್ ಸಾಗರದ ಥರ. ಅಗಾಧ, ಆಳ. ಈ ಅಗಾಧ, ಆಳ, ಕಾಗದದ ಮೇಲೆ ಮಾತ್ರ ಎಂದು ನಮಗೆ ಅರಿವಾಗೋದು ತಂಡ ಮೈದಾನ ಪ್ರವೇಶಿಸಿದಾಗಲೇ. ಪೇಪರ್ ಟೈಗರ್ ಗಳು ಪೇಪರ್ ಮೇಲೆ ಆಡಬೇಕು ಕ್ರಿಕೆಟನ್ನ. ‘ಸುಡೋಕೋ’ ರೀತಿ. ಅದು ಬಿಟ್ಟು ನಮ್ಮಲ್ಲಿ ದಾಖಲೆಗಳ ಮೇಲೆ ದಾಖಲೆ ಇದೆ ಎಂದು ಮೈದಾನಕ್ಕೆ ಇಳಿದರೆ, ಅದೂ ಆಸ್ಟ್ರೇಲಿಯಾದ ರೀತಿಯ ಅತ್ಯಂತ ವೃತ್ತಿಪರ ತಂಡದ ಎದುರು ನಿಂತರೆ, ಸೋತು ಸುಣ್ಣವಾಗದೆ ಬೇರೆ ದಾರಿಯಿಲ್ಲ. ಆಸೀ ಗಳು ಮೈದಾನದ ಮೇಲೆ hungry wolves. ಹರಿದು ತಿನ್ನೋ ತೋಳಗಳು. ಒಂದಿಂಚು ಸ್ಥಳಾವಕಾಶ ನೀಡಿದಿರೋ, ಮೈಲುಗಟ್ಟಲೆ ಎಳೆದು ಬಿಡುತ್ತಾರೆ. ತಂಡ ಬಿಡಿಯಾಗಿ ಆಡೋದಿಲ್ಲ. ಹನ್ನೊಂದೂ ಜನ “ಏಕಲವ್ಯ” ರಾಗಿ ಆಡುತ್ತಾರೆ, ಛಲದಿಂದ. ಆದರೆ ನಮ್ಮ ಗಮನ? ಸಚಿನ್ ಈ ಸಲ ಹೊಡೀಬಹುದಾ ಸೆಂಚುರಿ? ಇಲ್ಲಿಗೆ ಸೀಮಿತ ನಮ್ಮ ಆಶಯ, ಆಕಾಂಕ್ಷೆ. ದೇಶದ ಈ ಒತ್ತಡ ಪಾಪ ಗಿಡ್ಡ ಸಚಿನ್ ಮೇಲೆ ಅಗಾಧವಾಯಿತು. ನೂರನೇ ಶತಕ ಮರೀಚಿಕೆಯಾಗಿಯೇ ಕಾಡಲು ತೊಡಗಿತು. ಒಂದು ಉಪಾಯ ನಮ್ಮ BCCI ಗೆ ಹೊಳೆಯಲಿಲ್ಲ. ಸಚಿನ್ ನಿಂದ ಆ elusive century ಸಾಕಾರಗೊಳಿಸಲೇ ಬೇಕು ಎಂದಾಗಿದ್ದರೆ, ತಂಡವನ್ನು ಆಸ್ಟ್ರೇಲಿಯಾಗೆ ಕಳಿಸೋ ಬದಲು ಕೆನಡಾ ದೇಶಕ್ಕೋ ಅಥವಾ ಮತ್ಯಾವುದಾದರೂ mediocre ತಂಡ ಇರೋ ದೇಶಕ್ಕೋ (ಪಾಕಿಸ್ತಾನ?) ಕಳಿಸಿ ಅಲ್ಲಿ ತಮ್ಮ ಅಜೆಂಡಾ ಕಾರ್ಯಗತವಾದ ಕೂಡಲೇ ಟಿಕೆಟ್ ಬುಕ್ ಮಾಡಿಸಬಹುದಿತ್ತು ಕಾಂಗರೂ ನಾಡಿಗೆ. ಹಾಗೆ ಆಗಲಿಲ್ಲ, ಸಚಿನ ಶತಕ ಬಾರಿಸಲಿಲ್ಲ.

ಎರಡನೇ ಟೆಸ್ಟ್ ಶೀಘ್ರದಲ್ಲೇ ಶುರುವಾಗುತ್ತದೆ. ಮತ್ತೊಮೆ ಸೊಪ್ಪು ಮಾರುವ ಮಲ್ಲಮ್ಮ ನಿಂದ ಹಿಡಿದು ದೊಡ್ಡ ದೊಡ್ಡ ಕಂಪೆನಿಗಳ CEO ಗಳ ತನಕ, ಎಲ್ಲರ ಗಮನ ಮತ್ತದೇ ಗುರಿಯ ಕಡೆ. ಮರೀಚಿಕೆಗೆ ಈ ಬಾರಿ ಬಾಣ ನಾಟುತ್ತದೋ, ಇಲ್ಲಾ ಆ ಬಾಣ ನಿಟ್ಟುಸಿರಾಗಿ ನಮ್ಮ ಕಡೆಯೇ ಮರಳುತ್ತದೋ, ಕಾದು ನೋಡೋಣ.

ಹೊಸ ವರ್ಷ, ಹೊಸ ಹರ್ಷ

ಮತ್ತೊಂದು ವರ್ಷ ನಮ್ಮೆಡೆಯಿಂದ ಮರೆಯಾಯಿತು. ಕಳೆದ ವರ್ಷದ ಸಾವು ನೋವುಗಳು ಅಸಂಖ್ಯ. ಅದರಲ್ಲಿ ಜಪಾನಿನ ಸುನಾಮಿಯ ಪಾತ್ರ ಹಿರಿದು. ತದನಂತರ ಬಿನ್ ಲಾದೆನ್ ನ ಹತ್ಯೆ ಮತ್ತು ಹಲವಾರು ಗಣ್ಯರ ಸಾವು. ಇವೆಲ್ಲದರ ಮಧ್ಯೆ ನಾವು ನಮಗೆ ಮೋಸಮಾಡಿ ಕೊಳ್ಳಲೆಂದೇ ಮಾಡಿಕೊಳ್ಳುವ “ರೆಸಲ್ಯೂಶನ್” ಗಳು ‘ಲೂಸ್ ಮೋಶನ್’ ಗಳಾಗಿ ಜನವರಿ ಮೂರನೇ ವಾರದಲ್ಲೇ ವಿಸರ್ಜಿತ. ಆದರೂ ನಾವು ಸೋಲನ್ನು ಒಪ್ಪಿಕೊಳ್ಳೊಲ್ಲ. ಆದರೆ ಒಂದು ಮಾತು ನೆನಪಿರಲಿ, ಚಿಕ್ಕ ಪುಟ್ಟ resolution ಗಳು ಇರಲಿ, ಅದರಲ್ಲೂ ಕೈಗೆಟುಕುವಂಥದ್ದಾದರೆ ಇನ್ನೂ ಚೆನ್ನು. ಮಕ್ಕಳು ಕೇಕ್ ಮೇಲಿನ icing ಮಾತ್ರ ಕೆರೆದು ತಿನ್ನುವಂತೆ. ೨೦೧೨ ಕ್ಕೆ ಹೊಸ ಭರವಸೆಯೊಂದಿಗೆ ಸುಸ್ವಾಗತ ಬಯಸೋಣ, “ಅವರೆಲ್ಲಾ ಭಿನ್ನ ಭಿನ್ನ ರಾಗಿರುತ್ತ್ತಾರೆ, ಒಬ್ಬರಾದ ಮೇಲೆ ಒಬ್ಬರಂತೆ ಬರುತ್ತಾರೆ. ನಮ್ಮ ಜೊತೆ ಜೊತೆಗೇ ಸಾಗುತ್ತಾ ಇರುತಾರೆ ಮತ್ತೆ ತಮ್ಮ ಕರ್ತವ್ಯ ಮುಗಿಸಿ ಮರೆಯಾಗುತ್ತಾರೆ” ಈ ಮಾತುಗಳು ನಮ್ಮ ಪ್ರೀತಿಯ ಸಂಪದ ವೆಬ್ ತಾಣಕ್ಕೆ ಬರೆಯುವ ಹಿರಿಯ ಲೇಖಕರದು. ಡಿಸೆಂಬರ್ ೩೧ ರ ಸೂರ್ಯಾಸ್ತದೊಂದಿಗೆ ಗಂಟು ಮೂಟೆ ಕಟ್ಟುವ “ವರುಷ” ಎನ್ನುವ ಅತಿಥಿಯ ‘ಬರು – ಹೋಗು’ವಿಕೆ ಗೆ ಹೋಲಿಸಿ ಬರೆದ ಸುಂದರ ಕವನದಿಂದ ಹೆಕ್ಕಿದ ಸಾಲುಗಳು. ೨೦೧೨ ಸಮಸ್ತ ಕನ್ನಡಿಗರಿಗೂ, ಭಾರತೀಯರಿಗೂ ಶುಭಕರವಾಗಲೀ, “ಕನ್ನಡ ನಾಡು ಗಂಧದ ಬೀಡು” ಎನ್ನುವ ಹೆಸರಿಗೆ ತಕ್ಕುದಾಗಿ ನಡೆದು ಕೊಳ್ಳುವ ಔದಾರ್ಯ, ಸನ್ಮನಸ್ಸು ನಮ್ಮೆಲ್ಲರದಾಗಲಿ, ಭಾರತವೆಂಬ ವೈಭವ ಮತ್ತಷ್ಟು ವೈಭವೀಕೃತಗೊಳಿಸುವತ್ತ ನಮ್ಮ ಪ್ರಯತ್ನ, ಶ್ರಮ ನಿರಂತರವಾಗಿರಲಿ ಎನ್ನುವ ಹಾರೈಕೆಯೊಂದಿಗೆ 2012 ಕ್ಕೆ ತಳಿರು ತೋರಣ ಕಟ್ಟೋಣ.

ಕನಿಷ್ಠ ಉಡುಗೆ, ಗರಿಷ್ಠ ಅಪಾಯ

ನಮ್ಮ ದೇಶದಲ್ಲಿ ಅತ್ಯಾಚಾರ ಹೆಚ್ಚುತ್ತಿರುವುದಕ್ಕೆ ಕಾರಣ ಮಹಿಳೆಯರು ಪ್ರಚೋದನಕಾರಿ ಉಡುಗೆ ತೊಡುತ್ತಿರುವುದು ಎಂದು ಆಂಧ್ರ ಪ್ರದೇಶದ ಪೊಲೀಸ್ ಮುಖ್ಯಸ್ಥ ದಿನೇಶ್ ರೆಡ್ಡಿ ಹೇಳಿಕೆ ನೀಡುವುದರ ಮೂಲಕ ಜೇನುಗೂಡಿಗೆ ಕಲ್ಲು ಬೀಸಿದ್ದಾರೆ. ಈ ಮಾತಿಗೆ ವಿರೋಧ ವ್ಯಕ್ತಪಡಿಸಿದರು ನಮ್ಮ ಸನ್ಮಾನ್ಯ ಗೃಹ ಮಂತ್ರಿಗಳು. ಈ ಹೇಳಿಕೆ ಸರಿಯಲ್ಲ, ಕಾಕ್ಟೇಲ್ ಪಾರ್ಟಿ ಗೆ ಹೋಗುವ ಮಹಿಳೆ ಬಿಕಿನಿಯಲ್ಲಿ ಹೋಗಲಾರಳು, ಸಂದರ್ಭಕ್ಕೆ ಅನುಸಾರವಾಗಿ ಆಕೆ ಬಟ್ಟೆ ತೊಡುವಳು ಎಂದು ಬಡಬಡಿಸಿದರು.

ಗೃಹ ಮಂತ್ರಿಗಳಿಗಿಂತ ಚೆನ್ನಾಗಿ ಸಮಾಜ ಕಾಯುವ ಪೊಲೀಸರಿಗೆ ತಾನೇ ಗೊತ್ತಿರೋದು ಸಮಾಜದ ಆಗುಹೋಗುಗಳು? ಕನಿಷ್ಠ ಬಟ್ಟೆ ತೊಟ್ಟ ಹುಡುಗಿ ಅಥವಾ ಮಹಿಳೆ ಯಾವುದೇ ಕಾರಣದಿಂದಲೂ ಒಳ್ಳೆಯ ಭಾವನೆ ತರಲಾರರು. ನಮ್ಮಲ್ಲಿ ಬರುವ ವಿದೇಶೀ ಮಹಿಳೆಯರನ್ನು ಗಂಡಸರು ನೋಡುವ ರೀತಿ ನೀವು ಗಮನಿಸಿರಲೇಬೇಕಲ್ಲ, ಅದಕ್ಕೆ ಕಾರಣ ಏನು, ಆಕೆಯ ಅಂಗ ಸೌಷ್ಠವದ ಪ್ರದರ್ಶನ. ಮೈ ಪ್ರದರ್ಶನ ನಡೆಸೋ ಮಹಿಳೆಯರು loose character ನವರು ಎಂದು ಬಹಳ ಜನ ತಪ್ಪಾಗಿ ತಿಳಿಯುತ್ತಾರೆ. ನಮಗೇಕೆ ವಿದೇಶೀ  ಜನರ ಉಡುಗೆ ತೊಡುಗೆ ಮೇಲೆ ವ್ಯಾಮೋಹ? ಅವರು ಕನಿಷ್ಠ ಉಡುಗೆ ತೊದಲು ಕಾರಣ ಯಾವಾಗಲೂ ಗಡಿ ಬಿಡಿ ಯಾಗಿರುವ ಅವರ ಚಟುವಟಿಕೆ ಯಾಗಿರಬಹುದು. ನಮ್ಮ ಮಹಿಳೆಯರ ಥರ ಉದ್ದದ ಕೂದಲನ್ನೂ ಸಹ ಬೆಳೆಸೋಲ್ಲ ಅವರು. ಸ್ನಾನದ ನಂತರ ಒಣಗಲು ನಂತರ  ಬಾಚಲು ಸಿಗದ ಸಮಯದ ಕಾರಣ. ಮಹಿಳೆಯರು ಅಂತರಂಗದ ಸೌಂದರ್ಯಕ್ಕೆ  ಪ್ರಾಶಸ್ತ್ಯ ಕೊಟ್ಟರಾಗದೆ? ಈ ವರದಿ ಆಂಗ್ಲ ಪತ್ರಿಕೆಯಲ್ಲಿ ಬಂದಿದ್ದೆ ತಡ, ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂತು. ಬಹುತೇಕ ಓದುಗರು ದಿನೇಶ್ ರೆಡ್ಡಿಯವರ ಮಾತಿಗೆ ಸಹಮತ ವ್ಯಕಪಡಿಸಿದರು. ದಿನೇಶ ರೆಡ್ಡಿಯವರ ಪ್ರಕಾರ ಗ್ರಾಮಾಂತರ ಪ್ರದೇಶಗಳಿಗೂ ಅಂಟಿಕೊಂಡಿದೆ ಈ ಪಿಡುಗು. ಪೊಲೀಸ್ ಮುಖ್ಯಸ್ಥರ ಹೇಳಿಕೆಗೆ ಮಹಿಳಾ ಸಂಘಟನೆಗಳು ರೆಡ್ಡಿಯವರನ್ನು chauvinist ಎಂದು ಮೂದಲಿಸಿದವು.

ನಮ್ಮ ಸಂಸ್ಕೃತಿ ಪಾಶ್ಚಾತ್ಯರಿಗಿಂತ ವಿಭಿನ್ನ, ಹಾಗೆಯೇ ಅಂಥಾ ಮಾಡರ್ನ್ ಸಂಸ್ಕಾರಕ್ಕೆ ನಮ್ಮ ಸಮಾಜ ಇನ್ನೂ ತಯಾರಾಗಿಲ್ಲ, ತಯಾರಾಗುವವರೆಗೆ ನಮ್ಮ ಸಂಸ್ಕೃತಿಗೆ ತಕ್ಕುದಾದ ಉಡುಗೆ ಧರಿಸುವುದು ಒಳಿತು.

ಜ್ಯೋತಿಷ್ಯ ವೈಜ್ಞಾನಿಕವೇ?

ಜ್ಯೋತಿಷ್ಯ ಶಾಸ್ತ್ರವನ್ನು “ಖೋಟಾ ಅಧ್ಯಯನ” (fake discipline) ಎಂದಿದ್ದಾರೆ ವಿಜ್ಞಾನಕ್ಕೆ ನೊಬೆಲ್ ಪ್ರಶಸ್ತಿ ವಿಜೇತರಾದ ವೆಂಕಟರಾಮನ್ ರಾಮಕೃಷ್ಣನ್ ಅವರು. ಚನ್ನೈ ನಗರದ ಭಾರತೀಯ ವಿದ್ಯಾ ಭವನದಲ್ಲಿ ಉಪನ್ಯಾಸ ನೀಡುತ್ತಿದ್ದ ಇವರು ಜ್ಯೋತಿಷ್ಯದೊಂದಿಗೆ ಹೋಮಿಯೋಪತಿ ವೈದ್ಯ ಶಾಸ್ತ್ರವನ್ನೂ ತರಾಟೆಗೆ ತೆಗೆದುಕೊಂಡರು. ಜ್ಯೋತಿಷ್ಯದ ಹೆಸರಿನಲ್ಲಿ ಜನರನ್ನು ವಂಚಿಸುವ ಪರಿಪಾಠ ಇಂದು ನಿನ್ನೆಯದಲ್ಲ. ನಮ್ಮ ದೇಶದಲ್ಲಿ ಜ್ಯೋತಿಷ್ಯ ಕ್ಷೇತ್ರ multi million dollar ಉದ್ದಿಮೆ ಎಂದು ಸುಲಭವಾಗಿ ಹೇಳಬಹುದು. unsuspecting ಜನರನ್ನು ಲೀಲಾ ಜಾಲವಾಗಿ ವಂಚಿಸಿ ಹಣ ಕೊಳ್ಳೆ ಹೊಡೆಯುವ ಇವರಿಗೆ ನಿಯಮದ ಯಾವ ತೊಡಕೂ ಇಲ್ಲ. ಭಾಜಪ ಸರಕಾರದಲ್ಲಿ ಮಾನವ ಸಂಪನ್ಮೂಲ ಖಾತೆ ಸಚಿವರಾಗಿದ್ದ ಮುರಳಿ ಮನೋಹರ್ ಜೋಶಿ ಜ್ಯೋತಿಷ್ಯವನ್ನು ವೈದಿಕ ವಿಜ್ಞಾನದ ಅಡಿಯಲ್ಲಿ ತಂದು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ವಸ್ತುವನ್ನಾಗಿಸಿದ್ದರು. ಭಾರತದಲ್ಲಿ ಎಲ್ಲ ಸಮಾಜದ ಬಹಳಷ್ಟು ಜನ ನಂಬುವ ಜ್ಯೋತಿಷ್ಯದ ಬಗ್ಗೆ ಇಸ್ಲಾಮಿನ ನಿಲುವು ಅತ್ಯಂತ ಕಟುವಾದುದು. ಯಾವುದಾದರೂ ಜ್ಯೋತಿಷಿಯನ್ನು ಒಬ್ಬ ಕಂಡರೆ ಅವನ ನಲವತ್ತು ದಿನಗಳ ಕಾಲದ ಆರಾಧನೆ ನಷ್ಟ ಪಡುವುದು ಮಾತ್ರವಲ್ಲ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣತಿ ಪಡೆದವನು ಪಾಪದ ಹೊರೆಯನ್ನು ಹೊರುತ್ತಾನೆ ಎನ್ನುತ್ತದೆ ಇಸ್ಲಾಂ. ಜ್ಯೋತಿಷ್ಯದ ಕುರಿತ ಪವಿತ್ರ ಕುರಾನಿನ ಹೇಳಿಕೆ ಹೀಗಿದೆ.

“With Him are the keys to the unseen and none knows it except Him”.The Holy Qur’an, Chapter 6, Verse 59

“Say: None in the heavens or earth knows the unseen except Allah.”The Holy Qur’an, Chapter 27, Verse 65

ಮತ್ತೊಂದೆಡೆ ಪ್ರವಾದಿಗಳನ್ನು ಸಂಬೋಧಿಸುತ್ತಾ ಪವಿತ್ರ ಕುರಾನ್ ಹೀಗೆ ಹೇಳುತ್ತದೆ: “ಹೇಳಿ ಪ್ರವಾದಿಗಳೇ, ನನಗೆ ಅಗೊಚರವಾದದ್ದು ಕಾಣುವಂತಾಗಿದ್ದಿದ್ದರೆ ನಾನು ಒಳ್ಳೆಯದನ್ನೇ ಬಯಸುತ್ತಿದ್ದೆ, ಆದರೆ ನಾನು ಒಬ್ಬ ಸಂದೇಶವಾಹಕ ಮತ್ತು ವಿಶಾಸಿಗಳಿಗೆ ಶುಭ ವಾರ್ತೆ ತರುವವ ಮಾತ್ರ”

ಈ ರೀತಿಯ ಹೇಳಿಕೆಗಳು ಮತ್ತು ವಿಧ್ವಾಂಸರ ಅಭಿಪ್ರಾಯಗಳು ವ್ಯತಿರಿಕ್ತ ವಾಗಿದ್ದೂ ಬಹಳಷ್ಟು ಮುಸ್ಲಿಮರು ಹಸ್ತ ಸಾಮುದ್ರಿಕೆ, ಅದೂ ಇದೂ ಎಂದು ಅಲೆಯುವುದನ್ನು ನಾನು ಕಂಡಿದ್ದೇನೆ.

ಕುಹೂ ಕುಹೂ ಕೋಗಿಲೆ ಮತ್ತು ಮೆದುಳಿಲ್ಲದ ಮೀನು

ಕಾಂಗೋ ದೇಶದ ನಿತ್ಯಹರಿದ್ವರ್ಣ (rain forest) ಕಾಡಿನಲ್ಲಿ ಕುಹೂ ಕುಹೂ ಎಂದು ಹಾಡುತ್ತಾ ತಿಂದುಂಡು ಸುಖವಾಗಿರುವ ಕೋಗಿಲೆಗಳ ಆಶ್ಚರ್ಯದಾಯಕ ಪರ್ಯಟನದ ಬಗೆಗಿನ ಲೇಖನಕ್ಕೆ ಕೆಳಗೆ ಕೊಟ್ಟ ಲಿಂಕನ್ನು ಕ್ಲಿಕ್ಕಿಸಿ ಓದಿ. ಪರಿಸರ, ಪಕ್ಷಿಪ್ರಿಯರಾದ ಓದುಗರು ಖಂಡಿತ ಇದನ್ನು ಓದಿ ಕುಹೂ ಕುಹೂ ಎನ್ನದಿರಲಾರರು. ಬ್ರಿಟನ್ ದೇಶ ಬಿಟ್ಟ ಐದು ಕೋಗಿಲೆಗಳು – ಕ್ಲೆಮೆಂಟ್, ಮಾರ್ಟಿನ್, ಲಿಸ್ಟರ್, ಕ್ಯಾಸ್ಪರ್ ಮತ್ತು ಕ್ರಿಸ್ ಇವರ ಹೆಸರುಗಳು – ದೂರದ ಕಾಂಗೋ ದೇಶಕ್ಕೆ ತಲುಪಿದ್ದನ್ನು extraordinary rendezvous ಎಂದು ಬಣ್ಣಿಸಿ ಪ್ರಕಟವಾದ ಲೇಖನ ಇಂಗ್ಲೆಂಡಿನ independent ಪತ್ರಿಕೆಯಲ್ಲಿ ಕಾಣಲು ಸಿಕ್ಕಿತು. ಕಿರುರೂಪದ ಉಪಗ್ರಹ ಪ್ರಸಾರ ಯಂತ್ರ ( miniature satellite transmitter ) ಗಳನ್ನು ಕಾಲಿಗೆ ಕಟ್ಟಿಸಿಕೊಂಡು ಹಾರಿದ ಈ ಕೋಗಿಲೆಗಳ ಪ್ರಯಾಣ ನಿಜಕ್ಕೂ ವಿಸ್ಮಯಕಾರಿಯೇ. ಪ್ರಕೃತಿ ಮತ್ತು ಅದರ ಹೆಮ್ಮೆಯ ಮಕ್ಕಳು (ಮನುಷ್ಯರನ್ನು ಬಿಟ್ಟು) ಒಂದು ವಿಸ್ಮಯವೇ ಸರಿ ಅಲ್ಲವೇ? ವಸಂತ ಋತುವಿನ ಆಗಮನವನ್ನು ನಮಗೆ ಸಂಭ್ರಮದಿಂದ ಘೋಷಿಸುವ ಈ ಕೋಗಿಲೆಗಳ ಸುದೀರ್ಘ ಪಯಣ ಮತ್ತು ವಲಸೆ ದಿನೇ ದಿನೇ ಸಂಖ್ಯೆಯಲ್ಲಿ ಕ್ಷೀಣಿಸುತ್ತಿರುವ ಪಕ್ಷಿ ಸಮುದಾಯದ ಕುರಿತು ಮಾಹಿತಿ ನೀಡುತ್ತದಂತೆ. http://www.independent.co.uk/environment/nature/extraordinary-rendezvous-of-the-migrating-cuckoos-6281525.html

ಇತ್ತೀಚೆಗೆ ಅಪೂರ್ವ ಜಾತಿಯ ಮೀನಿನ ಪತ್ತೆ ಹಚ್ಚಿದ್ದಾರೆ ವಿಜ್ಞಾನಿಗಳು. ಈ ಮೀನಿಗೆ ಮೆದುಳೂ ಇಲ್ಲ, ಮುಖವೂ ಇಲ್ಲ. ಈ brainless and faceless ಮೀನಿನ ಜೊತೆ ಇನ್ನೂ ೧೫ ಜಾತಿಗಳ ಮೀನುಗಳನ್ನೂ ಕಂಡು ಹಿಡಿದ್ದಾರೆ. ಸಮುದ್ರದಲ್ಲಿ ಸಿಕ್ಕ ಮೆದುಳೂ ಇಲ್ಲದ, ಮುಖವೂ ಇಲ್ಲದ ಜಾತಿಯ ಜೀವಿ ಭೂಮಿಯ ಮೇಲೂ ನಡೆದಾಡುತ್ತಿವೆ ಅಲ್ಲವೇ? ರಾಜಕಾರಣಿಗಳಾಗಿ. ಈ ಪತ್ತೆ ಹಚ್ಚುವಿಕೆ ಕುರಿತ ಲಿಂಕು ಕೆಳಗಿದೆ ನೋಡಿ. http://www.independent.co.uk/environment/nature/rare-species-discovered-under-water-6282617.html

೨೦೧೧… ಹೀಗಿತ್ತು !

ವರ್ಷಗಳು ಉರುಳುವುದೇ ಅರಿವಾಗುವುದಿಲ್ಲ. ಅಷ್ಟು ಸಲೀಸಾಗಿ ಮಾಯವಾಗಿ ಬಿಡುತ್ತವೆ.ಮತ್ತೊಂದು ವರ್ಷ ಚರಿತ್ರೆ ಸೇರಿಕೊಂಡಿತು. ಹೊಸ ವರ್ಷವನ್ನು ಸ್ವಾಗತಿಸುವ ಮತ್ತು ಸಿಗರೇಟ್ ಬಿಡುತ್ತೇನೆ, ವಾಕ್ ಮಾಡುತ್ತೇನೆ ಎನ್ನುವ ನಿರ್ಣಯಗಳ ಮಧ್ಯೆ ಸ್ವಲ್ಪ ಬಿಡುವು ಮಾಡಿಕೊಂಡು ಸಂದು ಹೋದ ವರ್ಷ ನಮಗೆ ನೀಡಿದ ಹರ್ಷ, ಭರವಸೆ ಮತ್ತು ದುಃಖ ದುಮ್ಮಾನಗಳ ಕುರಿತು ಸ್ವಲ್ಪ ಓದಿ.

ಈ ವರ್ಷ ಸರ್ವಾಧಿಕಾರದ ಉಸಿರು ಗಟ್ಟಿಸುವ ವಾತಾವರಣದಿಂದ ಕೆಲವು ದೇಶಗಳ ಜನರಿಗೆ ಮುಕ್ತಿ ಸಿಕ್ಕಿದರೆ ತಮ್ಮ ಬದುಕಿನಲ್ಲಿ ಅಮೋಘವಾದದ್ದನ್ನು ಸಾಧಿಸಿ ಸಾರ್ಥಕ ಬದುಕು ಸಾಗಿಸಿ ಕಣ್ಮರೆಯಾದ ಚೇತನಗಳು ಹಲವು.

ಉತ್ತರ ಆಫ್ರಿಕಾದ ಪುಟ್ಟ ದೇಶ ಟುನೀಸಿಯಾದಲ್ಲಿ ಅರಬ್ ಕ್ರಾಂತಿ. “ಅರಬ್ ವಸಂತ” ಎಂದು ಬಣ್ಣಿಸಲ್ಪಟ್ಟ ಈ ಕ್ರಾಂತಿ ೨೩ ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದ ಜೈನುಲ್ ಆಬಿದೀನ್ ರ ಕುರ್ಚಿ ಪಲ್ಲಟ ಮಾಡಿತು. ಸರ್ಕಾರದ ಭ್ರಷ್ಟಾಚಾರ ಮುಗಿಲು ಮುಟ್ಟಿ ಜನಸಾಮಾನ್ಯರನ್ನು ಬಾಧಿಸಿತು. ಲಂಚಗುಳಿತನದಿಂದ ಬೇಸತ್ತ ನಿರೋದ್ಯೋಗಿ ಯುವಕ “ಮುಹಮ್ಮದ್ ಬೂ ಅಜೀಜಿ” ಆತ್ಮಹತ್ಯೆ ಮಾಡಿಕೊಂಡಾಗ ಬಂತು ಸರಕಾರಕ್ಕೆ ಸಂಚಕಾರ. ಜನ ಸಿಡಿದೆದ್ದರು, ಪ್ರದರ್ಶನಗಳು ನಡೆದವು. ಅಲ್ಲಿನ ಅಧ್ಯಕ್ಷನ ಯಾವ ಸಾಂತ್ವನದ ಮಾತುಗಳೂ ಜನರ ಆಕ್ರೋಶ ತಣಿಸಲು ವಿಫಲವಾದವು. ದಾರಿಗಾಣದೆ ಆಬಿದೀನ್ ದೇಶ ಬಿಟ್ಟು ಓಡಿದ. ಟುನೀಸಿಯಾ ಸರಕಾರ ಪತನವಾಗುತ್ತಿದಂತೆಯೇ ಈಜಿಪ್ಟ್, ಲಿಬಿಯಾ, ಸಿರಿಯಾ, ಯೆಮೆನ್, ಬಹರೇನ್, ದೇಶಗಳಿಗೂ ಕಾಲಿಟ್ಟಿತು ಅರಬ್ ವಸಂತ. ಮೂರು ದಶಕಗಳ ಕಾಲ ಈಜಿಪ್ಟ್ ದೇಶವನ್ನು ಆಳಿದ ಮುಬಾರಕ್ ಕೊನೆಗೂ ಅಧಿಕಾರ ತ್ಯಜಿಸಿದ. ರಕ್ತದ ಕೊನೇ ತೊಟ್ಟಿನ ವರೆಗೂ ಹೋರಾಡುವೆ ಎಂದ ಬಲಿಷ್ಠ ಮುಅಮ್ಮರ್  ಗದ್ದಾಫಿ ಕ್ರಾಂತಿಕಾರಿಗಳ ಕೈಗೆ ಸಿಕ್ಕಿ ಬಿದ್ದು ಹತನಾದ. ಲಿಬ್ಯಾ ವಸಂತದ ಸಂಭ್ರಮದ ಕುಣಿತ ಕಂಡಿತು. ಅರಬರಿಗೆ ಸ್ವಾತಂತ್ರ್ಯ ಎಂದರೇನು ಎಂದು ಗೊತ್ತಿಲ್ಲ ಎಂದು ಮೂಗು ಮುರಿಯುತ್ತಿದ್ದ ವಿಶ್ವ ಅರಬರ ಸ್ವಾತಂತ್ರ್ಯಕ್ಕಾಗಿನ ತುಡಿತ ನೋಡಿ ಮೂಗಿನ ಮೇಲೆ ಬೆರಳಿಟ್ಟು ಕೊಂಡಿತು.

ಅರಬ್ ದೇಶಗಳ ಈ ರಾಜಕೀಯ ವಿದ್ಯಮಾನಗಳಿಗೆ ಒತ್ತು ಕೊಟ್ಟ, ಕುಮ್ಮಕ್ಕು ನೀಡಿದ ಸಾಮಾಜಿಕ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್, ಯೂ ಟ್ಯೂಬ್ ಗಳು ರಾರಾಜಿಸಿದವು. ಸಾಮಾನ್ಯವಾಗಿ ತಂತ್ರಜ್ಞಾನ ಉಳ್ಳವರ ಸೊತ್ತು. ಆದರೆ ಸಾಮಾಜಿಕ ತಾಣಗಳು ಈ ಅಸಮಾನತೆಯನ್ನು ಅಮೋಘವಾಗಿ ಹೋಗಲಾಡಿಸಿದವು.  ಕಂಪ್ಯೂಟರ್ ತಂತ್ರಜ್ಞಾನ ಜನರನ್ನು ದಾಸ್ಯದ ಸಂಕೋಲೆಯಿಂದ ಹೊರಬರಲು ದೊಡ್ಡ ರೀತಿಯಲ್ಲಿ ಸಹಾಯ ಮಾಡಿತು.  

ಎರಡನೇ ವಿಶ್ವ ಯುದ್ಧದಲ್ಲಿ ಅಮೆರಿಕೆಯ ಕೆಂಗಣ್ಣಿಗೆ ಸಿಕ್ಕು ನುಚ್ಚು ನೂರಾದ ಜಪಾನ್ ಪ್ರಕೃತಿಯ ವಿಕೋಪಕ್ಕೆ ತುತ್ತಾಯಿತು ಮಾರ್ಚ್ ೨೦೧೧ ರಲ್ಲಿ. ತ್ಸುನಾಮಿ ಅಲೆಗಳು ಜಪಾನ್ ದ್ವೀಪವನ್ನು ನಿರ್ದಯವಾಗಿ ಗುಡಿಸಿ ಹಾಕಿತು. ೧೬,೦೦೦ ಕ್ಕೂ ಮಿಕ್ಕು ಜನ ಸತ್ತರು. ನಿಸರ್ಗ ತಮ್ಮ ಮೇಲೆ ಈ ರೀತಿ ಎರಗಿ ಬಂದರೂ ಧೃತಿಗೆಡದೆ, ದುರಾದೃಷ್ಟವನ್ನು ಶಪಿಸದೆ, ಜಪಾನೀಯರು ತಾಳ್ಮೆಯಿಂದ ಅಳಿದುಳಿದುದನ್ನು ಹೆಕ್ಕಿ ತಮ್ಮ ಬದುಕಿನ ಮರುನಿರ್ಮಾಣದ ಕಡೆ ಗಮನ ನೆಟ್ಟರು.   

ಮುಪ್ಪಿನೊಂದಿಗೆ ಶೃಂಗಾರ ಚಟುವಟಿಗಳು ಸಾಮಾನ್ಯವಾಗಿ ಕೊನೆಯಾಗುತ್ತವೆ ಅಥವಾ ಹಂಪ್ ಗಳನ್ನು ದಾಟುವ ವಾಹನಗಳಂತೆ ನಿಧಾನವಾಗುತ್ತವೆ. ಆದರೆ ಚಿರ ರಸಿಕ ಇಟಲಿಯ ಪ್ರಧಾನಿ ಸಿಲ್ವಿಯೋ ಬೆರ್ಲಸ್ಕೊನಿ ಯ ಹಾರ್ಮೋನುಗಳು ಯುವಜನರನ್ನು ನಾಚಿಸುತ್ತವೆ. ಉರುಳುವ ವರ್ಷಗಳು ಪಂಚಾಂಗಕ್ಕೆ ಮಾತ್ರ ಸೀಮಿತ, ತನ್ನ ಲೈಂಗಿಕ ಚಪಲಕ್ಕಲ್ಲ ಎಂದು ಹದಿ ಹರೆಯದ ಪೋರಿಯರೊಂದಿಗೆ ಸಲ್ಲಾಪ ಆಡಿ ಕಷ್ಟಕ್ಕೆ ಸಿಕ್ಕಿಕೊಂಡ ಪ್ರಧಾನಿ. ಲೈಂಗಿಕ ಹಗರಣಕ್ಕೆ ಬಲಿಯಾಗದೆ ಅಚ್ಚರಿದಾಯಕವಾಗಿ ಬದುಕುಳಿದ ಬೆರ್ಲೋ ಅಧಿಕಾರ ತ್ಯಜಿಸಿದ್ದು ಆರ್ಥಿಕ ಸಮಸ್ಯೆ ಕಾರಣ.

ಏಪ್ರಿಲ್ ತಿಂಗಳ ಮೊದಲ ದಿನ ಮೂರ್ಖರ ದಿನ. ಕೇಂದ್ರ ಸರಕಾರ ಭ್ರಷ್ಟಾಚಾರದ ಮೂಲಕ ಲಂಗು ಲಗಾಮಿಲ್ಲದೆ ದೇಶವನ್ನು ಒಂದು ಮೂರ್ಖರ ಸಂತೆ ರೀತಿ ನಡೆಸಿ ಕೊಳ್ಳಲು ತೊಡಗಿದಾಗ ಸಿಡಿದೆದ್ದರು “ಇಳಿ ಚೇತನ” ಅಣ್ಣಾ ಹಜಾರೆ. ತನ್ನ ಸ್ವ ಪ್ರಯತ್ನದಿಂದ ಮಹಾರಾಷ್ಟ್ರದ ಹಳ್ಳಿಯೊಂದನ್ನು ಅಭಿವೃದ್ಧಿ ಗೊಳಿಸಿದ ಈ ಸ್ವಾತಂತ್ರ್ಯ ಹೋರಾಟಗಾರ ದಿಲ್ಲಿಯಿಂದ ಹಿಡಿದು ಹಳ್ಳಿಯವರೆಗೂ ಆವರಿಸಿಕೊಂಡ ಲಂಚಗುಳಿತನವನ್ನು ಇಲ್ಲವಾಗಿಸಲು ಉಪವಾಸ ಸತ್ಯಾಗ್ರಹ ಶುರು ಮಾಡಿದರು. ಐದು ಸಾವಿರ ಮೈಲು ದೂರದಿಂದ ವ್ಯಾಪಾರಕ್ಕೆ ಎಂದು ಬಂದು ನಮ್ಮನ್ನು ಒದ್ದು, ದಬ್ಬಾಳಿಕೆಯಿಂದ ಆಡಳಿತ ನಡೆಸಿದ ಪರದೇಸೀ ಬ್ರಿಟಿಷರೂ ಉಪವಾಸ ಸತ್ಯಾಗ್ರಹಕ್ಕೆ ಮಣಿದರು. ಆದರೆ ನಮ್ಮ ದೇಸೀ ನಾಯಕರು ಜಪ್ಪಯ್ಯ ಎನ್ನಲಿಲ್ಲ. ಬ್ರಿಟಿಷರಿಗಿದ್ದ ನಾಚಿಕೆ, ಔದಾರ್ಯ ಇವ್ಯಾವುವೂ ನಮ್ಮ ನಾಯಕರಲ್ಲಿ ಕಾಣದಾಯಿತು. ಅಣ್ಣಾರವರ ಆಂದೋಲನವನ್ನು  ಮೊದ ಮೊದಲು ಅವಗಣನೆ ಮಾಡಿ ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂದು ಭಯ ಬಿದ್ದು ಲೋಕಪಾಲ್ ಮಸೂದೆಗೆ ಒಪ್ಪುವ ನಾಟಕ ಆಡಿ ಅಣ್ಣಾ ರಿಗೆ ಸೊಗಸಾಗಿ ನಾಮ ಬಳಿದರು. ಅದೂ ಸಾಲದು ಎಂಬಂತೆ ಅಣ್ಣಾ ಜೊತೆ ವೇದಿಕೆಯಲ್ಲಿರುವವರ ಪೂರ್ವಾಪರ ಚರಿತ್ರೆ ತೆಗೆದು ಅಣ್ಣಾ ದೇಶ ಎಣಿಸಿದ ಮುಗ್ಧ ಅಣ್ಣಾ ಅಲ್ಲ, ಆರೆಸ್ಸೆಸ್ ಏಜೆಂಟ್ ಎಂದು ಪ್ರಚಾರ ಮಾಡಿ ಲಂಚದ ವಿರುದ್ಧದ ಅಂದೋಲನದ ದಿಕ್ಕನ್ನೇ ದಿಕ್ಕಾ ಪಾಲು ಮಾಡಿತು ಕೇಂದ್ರ ಸರಕಾರ. ತುನೀಸಿಯಾದ ಬೂ ಅಜೀಜಿ ಯ ಆತ್ಮ ಹತ್ಯೆ ಮತ್ತು ಜನರ ಪ್ರತಿಭಟನೆಗೆ ಅಲ್ಲಿನ ಅಧ್ಯಕ್ಷ ಲಂಚಗುಳಿಯಾದರೂ, ಮರ್ಯಾದಸ್ಥನಂತೆ ತಲೆ ಬಾಗಿ ಹೊರನಡೆದ.  ನಮ್ಮಲ್ಲಿ ಹಾಗಾಗಲಿಲ್ಲ. ನಮ್ಮ ಕೇಂದ್ರ ಸರಕಾರಕ್ಕೆ ತಲೆ ಇದ್ದರಲ್ಲವೇ ಬಾಗುವ ಪ್ರಶ್ನೆ ಏಳೋದು.          

ನಾರ್ವೆ ದೇಶದಲ್ಲಿ ನರಸಂಹಾರ: ನೈಸರ್ಗಿಕ ಸಂಪನ್ಮೂಲಗಳಿಂದ ಶ್ರೀಮಂತವಾದ ಅಇರೋಪ್ಯ ಖಂಡದ “ನಾರ್ವೆ” ಪುಟ್ಟ ದೇಶ. ಇಲ್ಲಿನ ಸಾಲ್ಮನ್ ಜಾತಿಯ ಮೀನು ಜಗತ್ಪ್ರಸಿದ್ಧ. ಸಾಲ್ಮನ್ ಮೀನು ಹೃದಯಕ್ಕೆ ತುಂಬಾ ಒಳ್ಳೆಯದಂತೆ. land of midnight sun ಎಂದೂ ಅರಿಯಲ್ಪಡುವ ಈ ದೇಶದಲ್ಲಿ ವರ್ಷದ ಕೆಲವೊಂದು ತಿಂಗಳು ಸೂರ್ಯ ಮಧ್ಯ ರಾತ್ರಿ ಉದಯಿಸುತ್ತಾನೆ. ೩೨ ವರ್ಷ ಪ್ರಾಯದ ಸುಂದರ ಯುವಕ ‘ಆಂಡರ್ಸ್ ಬೆಹ್ರಿಂಗ್ ಬ್ರೆವಿಕ್’ ಪ್ರಶಾಂತ ನಾರ್ವೆ ದೇಶವನ್ನು ಶೋಕ ಸಾಗರದಲ್ಲಿ ಮುಳುಗಿಸಿದ ತನ್ನ ನಿರ್ದಯೀ ಹಿಂಸೆಯ ಮೂಲಕ. ರಾಜಧಾನಿ ಓಸ್ಲೋ ನಗರದಲ್ಲಿ ಬಾಂಬಿಟ್ಟು ನಗರದ ಸಮೀಪದಲ್ಲೇ ಇದ್ದ ದ್ವೀಪಕ್ಕೆ ಹೋಗಿ ಅಲ್ಲಿ ನೆರೆದಿದ್ದ ನೂರಾರು ಜನರ ಮೇಲೆ ಎರ್ರಾಬಿರ್ರಿ ಗುಂಡು ಹಾರಿಸಿ ೮೦ ಕ್ಕೂ ಹೆಚ್ಚು ಜನರನ್ನು ಕೊಂದ. ಕ್ರೈಸ್ತ ಮೂಲಭೂತವಾದಿಯಾಗಿದ್ದ ಈತನ ಕ್ರೌರ್ಯಕ್ಕೆ ವಿಶ್ವ ಬೆಚ್ಚಿತು, ರಾತ್ರಿ ಉದಯಿಸುತ್ತಿದ್ದ ಸೂರ್ಯ ಹಾಡು ಹಗಲೇ ಅಸ್ತಮಿಸಿದ ಇವನ ಕ್ರೌರ್ಯಕ್ಕೆ ಬೆಚ್ಚಿ.  

ಯಾವುದೇ ಕಾರಣವಿಲ್ಲದೆ ಇರಾಕಿನ ಮೇಲೆ ಧಾಳಿ ಮಾಡಿ, ಆ ದೇಶವನ್ನು ಆಕ್ರಮಿಸಿಕೊಂಡು ಎರಡು ದಶಲಕ್ಷಕ್ಕೂ ಜನರನ್ನು ಕೊಂದ ಅಮೇರಿಕಾ ತನ್ನ ಸೈನ್ಯ ಹಿಂದಕ್ಕೆ ಕರೆಸಿಕೊಳ್ಳಲು ಕೊನೆಗೂ ತೀರ್ಮಾನಿಸಿತು. ಇರಾಕಿನ ಮೇಲಿನ ಯುದ್ಧ ಯಾವ ರೀತಿ ಅಮೇರಿಕಾ, ಇಂಗ್ಲೆಂಡ್ ನಂಥ ಬಲಿಷ್ಠ ದೇಶಗಳು ಜನರ ಕಣ್ಣಿಗೆ ಬೂದಿ ಎರಚಿ ತಮ್ಮ ಸ್ವಾರ್ಥ ಸಾಧಿಸಲು ತಯಾರು ಎನ್ನುವುದಕ್ಕೆ ಇರಾಕ್ ಜ್ವಲಂತ ನಿದರ್ಶನವಾಯಿತು.

ಆಫ್ರಿಕಾ ಖಂಡದ ಸುಡಾನ್ ದೇಶದಿಂದ ದಕ್ಷಿಣ ಸುಡಾನ್ ಎನ್ನುವ ದೇಶ ಪ್ರತ್ಯೇಕಗೊಂಡು ಸ್ವಾತಂತ್ರ್ಯವಾಯಿತು. 

೨೦೧೧ ರ ನೊಬೆಲ್ ಶಾಂತಿ ಪುರಸ್ಕಾರ ಈ ಸಲ ಮೂರು ಮಹಿಳೆಯರು ಹಂಚಿಕೊಂಡರು. ಸ್ವಾತಂತ್ರ್ಯ, ಸೌಹಾರ್ದ, ಮತ್ತು ಲಿಂಗ ಬೇಧ ನಿವಾರಣೆಗೆ ಶ್ರಮಿಸಿದ ಈ ಮಹಿಳೆಯರಲ್ಲಿ ಇಬ್ಬರು ಆಫ್ರಿಕಾ ಖಂಡದ ಲೈಬೀರಿಯ ದೇಶದವರು, ಮತ್ತೊಬ್ಬರು ಅರಬ್ ಪ್ರಾಂತ್ಯದ ಯೆಮೆನ್ ದೇಶದವರು. ಸಾಂಪ್ರದಾಯಿಕ ಅರಬ್ ಮುಸ್ಲಿಂ  ಸಮಾಜದಿಂದ ಬಂದ “ತವಕ್ಕುಲ್ ಕರ್ಮಾನ್” ಯಾವ ತೊಡಕುಗಳಿಗೂ ಅಂಜದೆ ತನ್ನ ದೇಶದ ಸರ್ವಾಧಿಕಾರಿಯನ್ನು ಧೈರ್ಯವಾಗಿ ಎದುರಿಸಿ ಯಶಸ್ವಿಯಾದರು. ಮಹಿಳೆ ಧೈರ್ಯವಾಗಿ ಮುನ್ನುಗ್ಗಿದರೆ ಯಾವ ಮೂಲಭೂತವಾದಿಗಳಾಗಲೀ, ಸಮಾಜದ ಯಾವ ನಿರ್ಬಂಧಗಳೇ ಆಗಲಿ ಲೆಕ್ಕಕ್ಕೆ ಬರದು ಎಂದು ವಿಶ್ವಕ್ಕೆ ಸಾರಿದ ೩೨ ರ ಹರೆಯದ ತವಕ್ಕುಲ್ ನೊಬೆಲ್ ಪ್ರಶಸ್ತಿ ಪಡೆದ ಎರಡನೇ ಮುಸ್ಲಿಂ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಇರಾನಿನ ಶಿರೀನ ಇಬಾದಿ ನೊಬೆಲ್ (೨೦೦೩) ವಿಜೇತ ಮತ್ತೊಬ್ಬ ಮಹಿಳೆ.   

ಈ ಸಲದ ಪುರಸ್ಕಾರ ಅರಬ್ ವಿಶ್ವದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ಬ್ಲಾಗಿಗಳಿಗೆ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಸ್ವಾತಂತ್ರ್ಯದೊಂದಿಗೆ ಸಮಾನತೆಯ ಕಹಳೆ ಮೊಳಗಿಸಿದ ಧೀರ ಮಹಿಳೆಯರ ಪಾಲಾಯಿತು ನೊಬೆಲ್.  

ಕಾಲನ ಕರೆಗೆ ವಿಧೇಯರಾಗಿ ಓಗೊಟ್ಟು ಕಣ್ಮರೆಯಾದವರು

ವಿವಾದಾಸ್ಪದ ಕಲಾವಿದ ಮಕ್ಬೂಲ್ ಫಿದಾ ಹುಸೇನ್ ನಿಧನ. ಹುಸೇನರ ಕುಂಚಗಳು ತನ್ನ canvas ಗಡಿ ಮೀರಿ ಜನರ ನಂಬಿಕೆಗಳ ಮೇಲೆ ಹರಿದಾಡ ತೊಡಗಿಡಾಗ ಗಡೀ ಪಾರಾಗಬೇಕಾಯಿತು. ಕತಾರ್ ದೇಶದ ಪೌರತ್ವ ಪಡೆದರೂ ಮಾತೃ ಭೂಮಿಗಾಗಿ ಮಿಡಿಯಿತು ಹುಸೇನ್ ಮನ. ಹುಸೇನ್ ಅಂತ್ಯ ಲಂಡನ್ನಿನಲ್ಲಿ. ಹುಸೇನ್ ಮರಣಕ್ಕೆ ಪ್ರಧಾನಿ, ರಾಷ್ಟ್ರಪತಿ ಶೋಕ. ಹುಸೇನ್ ಸಾವು ರಾಷ್ಟ್ರೀಯ ನಷ್ಟ ಎಂದು ಪ್ರಧಾನಿ ಹೇಳಿದರೆ, ರಾಷ್ಟ್ರಪತಿ ಗಳು ಹೇಳಿದ್ದು ಹುಸೇನ್ ಇಲ್ಲದ ಕಲೆ ಶೂನ್ಯ ಎಂದು.

ವಿಶ್ವದ ಕುಖ್ಯಾತ ಭಯೋತ್ಪಾದಕ ಬಿನ್ ಲಾದೆನ್. ಅಮೆರಿಕೆಯ to do list ನಲ್ಲಿ ಆಗ್ರ ಪಂಕ್ತಿಯಲ್ಲಿದ್ದ ಲಾದೆನ್ ನ ಅವಸಾನ ಕೊನೆಗೂ ಕೈಗೂಡಿತು. ಪಾಕ್ ರಾಜಧಾನಿಯ ಸಮೀಪದ ಅಬೋಟ್ಟಾ ಬಾದ್ ನಲ್ಲಿ ಅಡಗಿ ಕೂತಿದ್ದ ಬಿನ್ ಲಾದೆನ್ ನನ್ನು ಅಮೆರಿಕೆಯ ಅತಿ ಪ್ರತಿಷ್ಠಿತ ಕಮಾಂಡೋ ಪಡೆ “ಸೀಲ್” ಬೇಟೆಯಾಡಿ ಅಮೇರಿಕಾ ನಿರಾಳ ಭಾವ ಅನುಭವಿಸುವಂತೆ ಮಾಡಿತು. ಬಿನ್ ಲಾದೆನ್ ಸಾವಿನ ಸುದ್ದಿ ವಿಶ್ವ ಪುರಾವೆ ಬಯಸಿದಾಗ ಅಮೇರಿಕಾ ಹೇಳಿದ್ದು, ಪ್ರದರ್ಶಿಸಲು ಪಾರಿತೋಷಕ ಅಲ್ಲ ನಮಗೆ ಸಿಕ್ಕಿದ್ದು, ನಾವು ಹೇಳಿದ್ದನ್ನು ನಂಬಿ ಎಂದು. ಸಾವಿರಾರು ಜನರ ಭವಿಷ್ಯವನ್ನು ಭೂ ಸಮಾಧಿ ಮಾಡಿದ್ದ ಬಿನ್ ಲಾದೆನ್ ಗೆ ಸತ್ತಾಗ ಸಿಕ್ಕಿದ್ದು ಜಲಸಮಾಧಿ.  

ಕಂಪ್ಯೂಟರ್ ಎಂದರೆ ಆಕರ್ಷಣೆ ಇಲ್ಲದ ಒಂದು bland ಉಪಕರಣ ಅಲ್ಲ, ಅದು ಒಂದು ಮೋಜನ್ನು, ನೀಡುವ ಆಕರ್ಷಕ ಉಪಕರಣ ಎಂದು ಜಗತ್ತಿಗೆ ತೋರಿಸಿದ “ಆಪಲ್” ನ ಒಡೆಯ ಸ್ಟೀವ್ ಜಾಬ್ಸ್  ಯಕೃತ್ತಿನ ಕ್ಯಾನ್ಸರ್ ಗೆ ಬಲಿಯಾದ. ತಂತ್ರಜ್ಞಾನ ಬಡವಾಯಿತು ಎಂದು ಶೋಕಿಸಿದರು ಟೆಕ್ಕಿಗಳು.

ಭಾರತೀಯ ಕ್ರಿಕೆಟ್ ನ ಗತಕಾಲದ ಹೀರೋ ಮನ್ಸೂರ್ ಅಲಿ ಖಾನ್ ಪಟೌಡಿ ನಿಧನದಿಂದ ಕ್ರಿಕೆಟ್ ಆಟ ತನ್ನ ಹೊಳಪನ್ನು ಕಳೆದು ಕೊಂಡಿತು. ಟೈಗರ್ ಎಂದು ಕರೆಯಲ್ಪಡುತ್ತಿದ್ದ ಈ ಸ್ಫುರದ್ರೂಪಿ “ಪಟೌಡಿ” ಪ್ರಾಂತ್ಯದ “ನವಾಬ್’ ಭಾರತದ ಯಶಸ್ವೀ ನಾಯಕರಲ್ಲೊಬ್ಬರು. ಅಂದಿನ ಪ್ರಸಿದ್ಧ ನಟಿ ಶರ್ಮಿಳಾ ಟಾಗೋರ್ ರನ್ನು ವರಿಸಿದ ಪಟೌಡಿ ಕ್ರಿಕೆಟ್ ಆಟಕ್ಕೆ ಗ್ಲಾಮರ್ ತಂದು ಕೊಟ್ಟವರು. ಪಟೌಡಿ ನಿಧನರಾದಾಗ ವಯಸ್ಸು ೭೦.

ಭೀಂ ಸೇನ್ ಜೋಶಿ, ಭಜನ್ ಲಾಲ್, ಭೂಪೇನ್ ಹಜಾರಿಕಾ, ಅಂಬಿಕಾ ಚೌಧುರಿ, ಚಿತ್ರನಟ ದೇವ್ ಆನಂದ್, ಶಮ್ಮಿ ಕಪೂರ್, ಸತ್ಯಸಾಯಿ ಬಾಬ, ಅರ್ಜುನ್ ಸಿಂಗ್ ಇತರೆ ಗಣ್ಯರು ಅಗಲಿದವರು.  

ನಮ್ಮ ರಾಜ್ಯದ ವರ್ಣರಂಜಿತ ವ್ಯಕ್ತಿತ್ವ ಕಣ್ಮರೆ. ಎಸ್, ಬಂಗಾರಪ್ಪ ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ, ಸಂಸದರಾಗಿ ರಾಜಕೀಯ ಕ್ಷೇತ್ರದಲ್ಲಿ ದುಡಿದವರು. ಒಂದು ಕಾಲದಲ್ಲಿ ನಾನು ಅವರ ಅಭಿಮಾನಿ. ಪಕ್ಷದಿಂದ ಪಕ್ಷಕ್ಕೆ ಜಿಗಿದು ಅಭಿಮಾನಿಗಳಿಗೆ ಇರುಸು ಮುರುಸು ಕಸಿವಿಸಿ ತರುತ್ತಿದ್ದ ಬಂಗಾರಪ್ಪ ಟೆನ್ನಿಸ್ ಮತ್ತು ಯೋಗ ಪ್ರೇಮಿ. ತಂದೆಯ ಹೆಸರು ಎಷ್ಟಿ ಆಕರ್ಷಕ, ಜನಪ್ರಿಯ  ಎಂದರೆ ಅವರ ಮಗನಿಗೆ ಸ್ವಂತದ ಹೆಸರಿನ ಅವಶ್ಯಕತೆಯೇ ಬರಲಿಲ್ಲ. ಕುಮಾರ್ ಬಂಗಾರಪ್ಪ ಎಂದು ಪ್ರಸಿದ್ಧನಾದ. 

ಸಮಸ್ತ ಕನ್ನಡಿಗರಿಗೂ, ಭಾರತೀಯರಿಗೂ ಬರಲಿರುವ ಹೊಸ ವರುಷ ಉಲ್ಲಾಸ, ಹರ್ಷ, ಯಶಸ್ಸನ್ನು ತರಲಿ ಎಂದು ಹಾರೈಸುತ್ತಾ…….

ನಿಮ್ಮ ಅಬ್ದುಲ್

ಬಡವಾದ ಸಾರಂಗಿ

ಖ್ಯಾತ ಗಾಯಕ ಮತ್ತು ಸಾರಂಗಿ ವಾದಕ ಉಸ್ತಾದ್ ಸುಲ್ತಾನ್ ಖಾನ್ ಇನ್ನಿಲ್ಲ. ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತ ಈ ಪ್ರತಿಭೆ ಅಗಲಿದ ವಿಷಯ ತಿಳಿದಿದ್ದು ಟ್ವೀಟ್ ಒಂದರಿಂದ. ದಿನ ಬೆಳಗಾದರೆ ಕಳ್ಳಕಾಕ ರಾಜಕಾರಣಿಗಳ ಕಳ್ಳ ಧಂಧೆ ಯನ್ನು ವರದಿ ಮಾಡಲು ವೇಳೆಯಿಲ್ಲದ ಪತ್ರಕರ್ತರಿಗೆ ಸುಲ್ತಾನ್ ಖಾನರ ನಿಧನ ಟ್ವೀಟ್ ಮೂಲಕ ತಿಳಿಯುವಂತಾಯಿತು.

ಮೂತ್ರಕೋಶದ ಖಾಯಿಲೆ ಯಿಂದ ಬಳಲುತ್ತಿದ್ದ ಸುಲ್ತಾನ್ ರಿಗೆ ೭೧ ವರ್ಷ ವಯಸ್ಸಾಗಿತ್ತು.

ಸಾರಂಗಿ ಪದದ ಮೂಲ ಹಿಂದಿ ಯಾಗಿದ್ದು, ಸೌ (ನೂರು) + ರಂಗ್ (ಬಣ್ಣ) ಪದಗಳ ಮಿಶ್ರಣದಿಂದ ಸಾರಂಗಿ ಆಯಿತು ಎಂದು ಪಂಡಿತ “ವಿಕಿ ಪೀಡಿಯ” ದ ಅಭಿಪ್ರಾಯ.