ನಾಡಿನ ಒಳ್ಳೆಯತನ…

ನಮ್ಮೂರಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಹಿಂದೂಗಳ ಒಂದು ಸಮಾಜದವರು ತಮ್ಮ ಮನೆದೇವ್ರುಪೂಜೆ ಮಾಡುತ್ತಿದ್ದಾರೆಪ್ರತಿಯೊಬ್ಬರ ಮನೆಯಲ್ಲಿ ಎರಡು ಬ್ಯಾಟಿ ಬೀಳುತ್ತವೆಮನೆಗೆ ಬರುವ ಬಂಧುಗಳಿಗೆಊಟಕ್ಕೆ ಬರಿ ಅನ್ನ ಇದ್ದರೆ ನಡೆಯಲ್ಲಅದರ ಜೊತೆಗೆ ರೊಟ್ಟಿನೂ ಇರಬೇಕುನಾವು ಹಳ್ಳಿ ಜನ ಎರಡುರೊಟ್ಟಿ ತಿಂದರೆನೇ ಹೊಟ್ಟೆ ತುಂಬೋದು.

ಮನೆಯಲ್ಲಿರುವ ಜನರಿಗೆಬಂದಿರುವ ಸಂಬಂಧಿಕರಿಗೆ ಊಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೊಟ್ಟಿಗಳುಬೇಕು.ನೂರಾರು ರೊಟ್ಟಿ ತಯಾರಿಸಲು ಒಂದು ಕುಟುಂಬ ದವರಿಗೆ ಕಷ್ಟದ ಕೆಲಸಅದಕ್ಕೆ ಓಣಿಯಜನರಿಗೆ ರೊಟ್ಟಿ ಮಾಡಿಕೊಡಲು ಸಜ್ಜೆಅಥವಾ ಜೋಳದ ಹಿಟ್ಟು ನೀಡುತ್ತಾರೆಒಂದೊಂದು ಮನೆಗೂ ಹಿಟ್ಟುನೀಡುತ್ತಾರೆಇಲ್ಲಿ ಹಿಂದೂ ಮುಸ್ಲಿಂ ಎಂಬ ಭೇದ ಭಾವ ಇರಲ್ಲ

ನಮ್ಮ ಮನೆಗೂ ಒಂದು ಹಿಂದೂ ಕುಟುಂಬದವರು ಸಜ್ಜೆ ಹಿಟ್ಟು ನೀಡಿದ್ದರುರೊಟ್ಟಿ ಮಾಡಿ ಕೊಡಲಾಗಿದೆಕೆಳಗಡೆ ಚಿತ್ರದಲ್ಲಿ ಪುಟ್ಟಿಯಲ್ಲಿ ಒಂದು ರೊಟ್ಟಿ ಕಾಣಿಸುತ್ತಿದೆ ನೋಡಿಅದ್ಯಾಕೆ ಅಂದರೆಯಾರ ಮನೆಯವರುರೊಟ್ಟಿ ಮಾಡಿ ಕೊಡುತ್ತಾರೋ ಅವರ ಮನೆಗೆ ಪುಟ್ಟಿ ವಾಪಾಸ್ ಕಳಿಸುವಾಗ ಅದರಲ್ಲಿ ಒಂದು ರೊಟ್ಟಿ ಇಟ್ಟುಕೊಡುತ್ತಾರೆ

ನಮ್ಮ ಕಲ್ಯಾಣ ಕರ್ನಾಟಕದ ಹಳ್ಳಿಗಳಿಗೆ “ಧರ್ಮ ಭೂತ ಇನ್ನೂ ಹೊಕ್ಕಿಲ್ಲ.ಎನ್ನುವುದಕ್ಕೆ ಇಂತಹ ನೂರುಉದಾಹರಣೆಗಳನ್ನು  ನೀಡಬಲ್ಲೆ..!

article courtesy: from Mahammad Sahukar’s Facebook wall.

ನಿಮ್ಮ ಟಿಪ್ಪಣಿ ಬರೆಯಿರಿ