ಈಗ ಅತ್ಯಾಚಾರ ‘ಕಾಮನ್ ಫೆನಾಮೆನಾ’ ನಮ್ಮ ದೇಶದಲ್ಲಿ

ಈಗ ಅತ್ಯಾಚಾರ ಕಾಮನ್ ಫೆನಾಮೆನಾ ನಮ್ಮ ದೇಶದಲ್ಲಿ. ಟೈಮ್ಸ್ ಆಫ್ ಇಂಡಿಯಾ ದ ಆನ್ ಲೈನ್ ಆವೃತ್ತಿಯ ಮಧ್ಯ ಭಾಗದ ಸುದ್ದಿ ಯಲ್ಲಿ ದಿನವೂ ರಾರಾಜಿಸುವ ಚಟುವಟಿಕೆ ಈ ರೇಪು ಎನ್ನುವ ಅಸಹ್ಯ ಹುಟ್ಟಿಸುವ perversion. ಇದಕ್ಕೆ ಮುಖ್ಯ ಕಾರಣ ಎಂದರೆ ರೇಪಿಗೆ ತಕ್ಕ ಶಿಕ್ಷೆಯ ಕೊರತೆ ಅದರೊಂದಿಗೇ ಈ ನೀಚ ಕೃತ್ಯಕ್ಕೆ ಮಹಿಳೆಯನ್ನು ಹೊಣೆಯಾಗಿಸುವ  ನಾಚಿಕೆಗೆಟ್ಟ ವರ್ತನೆ. ಮಹಿಳೆ ಸರಿಯಾಗಿ ಬಟ್ಟೆ ಉಡಲು ಅಸಮರ್ಥಳಾದರೆ ರೇಪ್ ಬಂದು ಎರಗುತ್ತದೆ ಎನ್ನುವುದು ಬಹಳಷ್ಟು ಜನರ ವಕ್ರ ನ್ಯಾಯ. ವಯಸ್ಕ, ಹದಿಹರೆಯದ ಹೆಣ್ಣಿನ ಉಡುಗೆ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡುವುದಾದರೆ ಒಂದೂವರೆ, ಎರಡು, ಮೂರು ವರ್ಷದ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಕ್ಕೆ ಏನು ಸಮಜಾಯಿಷಿ?

ಇಂದು ೧೧ ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿ ಕೊಲ್ಲಲಾಯಿತು. ಈ ಅಮಾನುಷ ಕೃತ್ಯಗಳು ನಾಗರೀಕ ಸಮಾಜದ ಕಣ್ಣು ತೆರೆಸಲು ವಿಫಲ ವಾಗುತ್ತಿರುವುದು ದಿಗಿಲನ್ನು ಹುಟ್ಟಿಸುತ್ತಿದೆ. ನನ್ನ ಪ್ರಕಾರ ಅತ್ಯಾಚಾರ ಭ್ರಷ್ಟಾಚಾರಕ್ಕಿಂತ ಕೀಳು, ಅಸಹ್ಯ. ಅತ್ಯಾಚಾರದ ವಿರುದ್ಧ ಅಣ್ಣಾ ಹಜಾರೆ, ಕೇಜರಿವಾಲ (ನಾನು ಈತನ ಫ್ಯಾನ್ ಅಲ್ಲ) ನಂಥವರು ಧ್ವನಿ ಎತ್ತುತ್ತಿಲ್ಲ?

ಅತ್ಯಾಚಾರಕ್ಕೆ ಮಹಿಳೆಯ ಉಡುಗೆ ಕಾರಣ ಎಂದು ಬರೀ ಜನ ಸಾಮಾನ್ಯನ ಅಭಿಪ್ರಾಯ ಮಾತ್ರವಲ್ಲ ಮಂತ್ರಿ ಮಹೋದಯರೂ, ಪೊಲೀಸ್ ಅಧಿಕಾರಿಗಳೂ ಈ ಮಾತಿಗೆ ಧ್ವನಿಗೂಡಿಸುತ್ತಾರೆ.  ಈಗ ಹರಿಯಾಣ ರಾಜ್ಯದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲ ಕೊಡುವ ಸಲಹೆ ಏನೆಂದರೆ ಹೆಣ್ಣು ಗಂಡುಗಳ ವಿವಾಹಾರ್ಹ ವಯಸ್ಸನ್ನು ಇಳಿಸಬೇಕು ಎನ್ನುವುದು. ಒಂದು ಕಡೆ ಸರಿಯಾಗಿ ಬಟ್ಟೆ ತೊಡು ಇಲ್ಲಾ ಮಾನ ಕಳೆದು ಕೊಳ್ಳಲು ತಯಾರಾಗು ಎನ್ನುವ ಎಚ್ಚರಿಕೆಗೆ ಮದುವೆ ವಯಸ್ಸನು ಇಳಿತ ಮಾಡಿದರೆ ರೇಪ್ ದರದಲ್ಲಿ ಕಡಿತ ಬರಬಹುದು ಎನ್ನುವ ವಾದಕ್ಕೆ ಜೋಡಿ ಎನ್ನುವಂತೆ ಬರುತ್ತಿದೆ ಮಂತ್ರಿಯ ಸಲಹೆ. ಈ ಮಾತಿನೊಂದಿಗೆ ಈ ಮು. ಮಂತ್ರಿ ಮುಘಲರನ್ನೂ ಎಳೆದು ತರುತ್ತಾನೆ. ಕುಣಿಯಲು ಬಾರದವಳು ನೆಲ ಡೊಂಕು ಎಂದಳಂತೆ, ಆಳನು ಬಾರದವನು ಮುಘಲರನ್ನು, ಪೋರ್ಚುಗೀಸರನ್ನು ಹೊನೆಯಾಗಿಸುತ್ತಾನೆ ತನ್ನ ಹೊಣೆಗೇಡಿತನಕ್ಕೆ.

ಒಟ್ಟಿನಲ್ಲಿ ಸಮಾಜದ ನಿಲುವು ಇಷ್ಟೇ. ಏನೇ ಆಗಲಿ, ಏನೇ ಬರಲಿ, ನಾವು ಮಾತ್ರ ನಮ್ಮ ಗಂಡು ಮಕ್ಕಳಿಗೆ ನೈತಿಕತೆಯ ಪಾಠ ಹೇಳೋಲ್ಲ, ಪರ ಹೆಣ್ಣನ್ನು ಗೌರವದಿಂದ ಕಾಣಲು ಉತ್ತೇ ಜಿಸೋಲ್ಲ ಎನ್ನುವ ಹೊಟ್ಟೆ ತೊಳೆಸುವಂಥ ಮೊಂಡುತನ. ನಮ್ಮ ಸಂಸ್ಕಾರ ಅಂಥದ್ದು, ಇಂಥದ್ದು ಎಂದು vainglorious ಆಗಿ ಕಣ್ಣು ಮುಚ್ಚಿ, ಎದೆಯುಬ್ಬಿಸಿ ನಡೆದರೆ ಸಾಲದು. ಅತ್ಯಾಚಾರದಂಥ ಅವಮಾನಕಾರೀ ಸಾಮಾಜಿಕ ಪಿಡುಗಿಗೆ ಇತಿಶ್ರೀ ಹಾಡಲೇ ಬೇಕು.              

ಅಕ್ಟೋಬರ್ ಒಂದು, ೧೯೬೨

ಅಕ್ಟೋಬರ್ ಒಂದು, ೧೯೬೨. ಈ ದಿನ ಅಮೆರಿಕೆಯ ಕರಿಯರ ಪಾಲಿಗೆ ವಿಶೇಷದಿನ. ಇಂದು ಅಮೆರಿಕೆಯ ಮಿಸ್ಸಿಸಿಪ್ಪಿ ವಿಶ್ವವಿದ್ಯಾಲಯದಲ್ಲಿ ಪ್ರಪ್ರಥಮವಾಗಿ ಕಪ್ಪುಜನಾಂಗಕ್ಕೆ ಸೇರಿದ ವಿದ್ಯಾರ್ಥಿಯನ್ನು ಸೇರಿಸಿಕೊಳ್ಳಲಾಯಿತು. ಅಮೆರಿಕೆಯಚರಿತ್ರೆಬಲ್ಲವರಿಗೆ ಕರಿಯ – ಬಿಳಿಯ ಜನಾಂಗದ ನಡುವಿನ ಕಂದಕ, ತಾರತಮ್ಯದ ಅರಿವು ಇದ್ದೇ ಇರುತ್ತದೆ. ಅಮೆರಿಕೆಯ ಈ ಜನಾಂಗಬೇಧ ನೀತಿ ೧೯೬೨ರಲ್ಲಿ ಮಾತ್ರವಲ್ಲ ಈಗಲೂ ಕೂಡ ಪ್ರಸ್ತುತ. ವ್ಯತ್ಯಾಸವೆಂದರೆ ಈಗಿನ ನೀತಿ ಅಲಿಖಿತ ಎನ್ನಬಹುದು. ಅಂದರೆ ಸರಕಾರ ಮತ್ತು ವ್ಯವಸ್ಥೆ ಜನಾಂಗ ಬೇಧಒಳ್ಳೆಯದಲ್ಲ ಎಂದು ಎಷ್ಟೇ ಸಾರಿದರೂ ಜನ ಮಾತ್ರ ಕೇಳಲೊಲ್ಲರು. ಎಲ್ಲರೂಅಲ್ಲ. ಸಾಕಷ್ಟುಮಂದಿ. ಹುಟ್ಟುಗುಣ….

ಮಿಸ್ಸಿಸಿಪ್ಪಿ ಪ್ರಾಂತ್ಯ ಜನಾಂಗ ಬೇಧ ನೀತಿಗೆ ಹೆಸರುವಾಸಿ. segregationist ಗಳ ತವರೂರು. ಇಲ್ಲಿನ ವಿಶ್ವವಿದ್ಯಾಲದಲ್ಲಿ ಕಪ್ಪುವಿರೋಧಿ ನೀತಿಅಂತ್ಯಗೊಂಡ ಸಂಭ್ರಮ ಈಗ ಅಮೆರಿಕೆಯಲ್ಲಿ.

ಅಮೆರಿಕೆಯ ಈಗಿನ ಅಧ್ಯಕ್ಷ ಬರಾಕ್ ಒಬಾಮ ಕಪ್ಪು ಜನಾಂಗಕ್ಕೆ ಸೇರಿದವರು. ನಾಲ್ಕು ವರ್ಷಗಳ ಹಿಂದೆ ನೆಡದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿದವರು. ಇದೇ ವರ್ಷದ ನವೆಂಬರ್ತಿಂಗಳಿನಲ್ಲಿ ಮರುಆಯ್ಕೆಗಾಗಿ ರಿಪಬ್ಲಿಕನ್ಪಕ್ಷದ ಮಿಟ್ರಾಮ್ನಿಯವರೊಂದಿಗೆಸೆಣಸುತ್ತಿದ್ದಾರೆ. ಒಬಾಮಡೆಮಾಕ್ರಾಟ್.

ಅಮೆರಿಕೆಯಲ್ಲಿ ಈಗಚುನಾವಣೆಯ ಬಿಸಿ, ಅದರೊಂದಿಗೇ ಹಣಕಾಸು ತಾಪತ್ರಯಗಳ ಬಿಸಿ, ಸಲಿಂಗಿಗಳ ವಿವಾಹದ ಬಿಸಿ, ವಲಸಿಗರ ಬಿಸಿ,….ತರಾವರಿಬಿಸಿ. ಈ ಬಿಸಿ ಸಾಲದುಎನ್ನುವಂತೆ ಒಬಾಮಾರನ್ನು ಹೇಗಾದರೂ ಸೋಲಿಸಲು ರಿಪಬ್ಲಿಕನ್ಪಕ್ಷ ಎಲ್ಲಾಅಸ್ತ್ರಗಳನ್ನೂ ಬಳಸುತ್ತಿದೆ. ಒಬಾಮಾ ಕರಿಯ, ಒಬಾಮ ಸಲಿಂಗಿಪರ, ಒಬಾಮ ಉದಾರವಾದೀ, ಒಬಾಮ anti-christ, ಕೊನೆಗೆಮಹಾಅಸ್ತ್ರಗಳಲ್ಲೇ ಘನಘೋರ ಅಸ್ತ್ರ ಎನ್ನಬಹುದಾದ ಒಬಾಮ ಬಹುಶಃ ಓರ್ವಮುಸ್ಲಿಂ ಎನ್ನುವ ಶಂಕೆ. ಶಂಕೆ, ಗುಮಾನಿ, ಬಹುಶಃಗಳೇ ಇಂದು ಪ್ರಪಂಚವನ್ನು ನಿಷ್ಕಾರುಣ್ಯವಾಗಿ ಹುರಿಯುತ್ತಿರುವುದು. ಒಬಾಮ ಮುಸ್ಲಿಂ ಎನ್ನುವ ಈ ಶಂಕೆ ಜನರಲ್ಲಿ ಬಿತ್ತಿದರೆ ಒಬಾಮ ಚಳ್ಳೆಹಣ್ಣು ತಿನ್ನುವುದು ಖಚಿತ ಎನ್ನುವುದು ರಿಪಬ್ಲಿಕನ್ ಪಂಡಿತರ ಲೆಕ್ಕಾಚಾರ. ಶಂಕೆಗಳು, ಬಹುಶಃಗಳು ಸರ್ವನಾಶವಾಗಿ ಜನ ತಿಳಿವಳಿಕೆ ಪ್ರದರ್ಶಿಸಿಯಾರೇ ಎನ್ನುವುದು ಕಾದು ನೋಡಬೇಕಾದ ಬೆಳವಣಿಗೆ.