ಭದ್ರಾವತಿಯ ನನ್ನ ಮಿತ್ರ ಸುರೇಶ್ ಬಾಬು ನನ್ನ ತಂಗಿಯ ಮಗಳ ಮದುವೆಗೆಂದು ಮಿತ್ರರೊಂದಿಗೆ ಬಂದಿದ್ದರು. ನನ್ನ ತಂಗಿಯ ಮದುವೆಗೂ ಪತ್ನೀ ಸಮೇತರಾಗಿ ಬಂದಿದ್ದ ಅವರು ಅವಳ ಮಗಳ ಮದುವೆಗೂ ಬಂದಿದ್ದು ನಮ್ಮ ಸಂತೋಷವನ್ನು ಇಮ್ಮಡಿಗೊಳಿಸಿತ್ತು. ಸಮಯ ಹೇಗೆ ಹಾರುತ್ತದೆ ನೋಡಿ, ರೆಕ್ಕೆಗಳಿಲ್ಲದೆ. ತಂಗಿ ಮದುವೆ…ಈಗ ಅವಳ ಮಗಳ ಮದುವೆ, ನಡುವೆ ಸುಮಾರು ೨೪ ವರ್ಷಗಳ ನೆನಪುಗಳಿಂದ ತುಂಬಿದ ಕಂದರ. ಅಲ್ಲ ಅಲ್ಲ, ಹಂದರ. ನಮ್ಮ ಮಮೆಯಿಂದ ಮೂರ್ನಾಲ್ಕು ಕಿಲೋ ಮೀಟರ್ ದೂರದಲ್ಲಿ ಒಂದು ಸೊಗಸಾದ ಸೇತುವೆ ಇದೆ. ತೂಗು ಸೇತುವೆ. ಚಂದ್ರಗಿರಿ ನದಿಗೆ ಅಡ್ಡವಾಗಿ ಒಂದು ನೆಕ್ಲೇಸ್ ಥರ. ಸುತ್ತಲೂ ತೆಂಗು, ಕಂಗು, ಹಸಿರಿನ ಸುಗ್ಗಿ. ಮದುವೆ ಮುಗಿದ ಕೂಡಲೇ ಸೇತುವೆ ನೋಡಲು ಹೋದ ಸುರೇಶ ಮಂತ್ರಮುಗ್ಧ, ಪ್ರಕೃತಿಯ ಸೊಬಗಿಗೆ ದಿಗ್ಮೂಢ. ನದಿಯ ಹರಿವು ತಿರುವ ಮಾಟಕ್ಕೆ, ಬಳುಕುವ ತೆಂಗು ಕಂಗುಗಳ ಚೆಂದಕ್ಕೆ ಬೆರಗಾಗಿ ನೇತಾಡುವ ತೂಗು ಸೇತುವೆ ಸುರೇಶ್ ಅವರ ಕೆಳಗಿನ ಕವನಕ್ಕೆ ಪ್ರೇರೇಪಣೆ.
”SAY TWO WAY – ಸೇತುವೆ” ಆಡಿದ ಮಾತು
ಕಾಣದ ಅಲೆ ಅಲೆಯಾಗಿ , ಮನಕೆ ಬಂತು ,ಮನೆಗೆ ಬಂತು. ಬಂದ ಮಾತ ಮಾತನಾಡಿಸಿಧಾಗ
MAHATHMA GANDHI ಮಾತು ನಿಂತು .’ BE THE CHANGE YOU WISH TO SEE IN THEWORLD’. ಅಂತು.
ಮನಕೆ ಬಂದ ಮಾತು ಮನನವಾಗಿ, ಮನದ –ಅಂಕದಲ್ಲಿ –ಮಂಕನಾಗಿ ಇಟ್ಟ ಒಂದೆಜ್ಜೆ,
ಕಾನನವನ್ನು ಛೇಧಿಸುತ್ತ ,ಬೆಟ್ಟವನ್ನು ಸುತ್ತಿ , ಸಾಗರದತೀರದ ಮನೆಗೆ ಬಂದೆ.
ಮದುವೆಗೂ ಬಂದೆ. ಬಂದುಗಳಲಿ , ಭಾವನೆಗಳಲಿ ಒಂದಾಗಿ,
ಇಳಿಜಾರು ತೆಂಗು, ಗುಡ್ಡಗಳ ಸುತ್ತಿ, ಗಿರಿಗಳಿಂದ ಸುತ್ತುವರೆದು,
ಹಿನ್ನೀರಿನ ನದಿಯಿಂದ ಮುತ್ತು ಹರಿದು
ಆ ತೂಗುಯ್ಯಾಲೆ ಇಂದ ನೋಡಿದ ನೋಟ
ಮಂಕನನ್ನು ವೆಂಕನನ್ನಾಗಿಸಿತು.
ಪ್ರಕೃತಿಯ ಅಂತರಾಳದಲ್ಲಿ ಏನೆಲ್ಲಾ ಕೃತಿಗಳು…
ಧನ್ಯನಾದೆ.. ಧನವಂತನಾದೆ…ಮನ ತುಂಬಿದಂತೆ.
ಆಹಾ, ಆ ಸೇತುವೆ ಮೇಲೆ ನಿಂತು, ತೂಗಾಡುವ ಸೇತುವೆ…ಜೋತಾಡುವ ಸೇತುವೆ..
ಮನದ ಮಾತನಾಡುವ ಸೇತುವೆ, ಮನಸು ಮರುಳಾಗಿಸಿತು.
ನಾವು ಬದಲಾದರೆ ಬದುಕಲ್ಲಿ ಬೇಕಾದನ್ನು ಕಾಣಬಹುದು. ನಾವು ಬದ್ಧರಾದರೆ , ಬೇಕಾದ್ದನ್ನು ಪಡೆಯಬಹುಧು.
ಬದಲಾದ ಬದುಕಿನ ನೆನಪು ಮತ್ತೆ ಮತ್ತೆ ಬಾಳನ್ನು ಹದಗೊಳಿಸುತ್ತದೆ. ಅನುಭವ ಹೊಸತನವನ್ನು, ಉತ್ಸಾಹವನ್ನು, ತುಂಬುತ್ತದೆ .
ಮೇಲಿನಿಂದ ನೋಡಿದಾಗ, LATTITUDE ನಲ್ಲಿ ಕುಳಿತು ಬರೆಯುವಾಗ,
ನಮ್ಮ ATTITUDE ,
ಆಕಾಶದಂತೆ, ಭೂಮಿಯಂತೆ, ಗಾಳಿಯಂತೆ, ನೀರಿನಂತೆ ,ಸೂರ್ಯ ಕಿರಿಣದಂತೆ ಬೆತ್ತಲಾಗುತ್ತದೆ.
ಬರೆದಷ್ಟು –ಬೆರೆತಷ್ಟು ಬಾಳಾಗುತ್ತದೆ. ಬೆಳಗುತ್ತದೆ.
ಆದರೆ , ಸುಂದರ ಬಾಳಲ್ಲಿ ,ಹಂದರಗಳೇ ಹೆಚ್ಚು, ನೋಡುವ ನೋಟದಲ್ಲಿ ಸೌಂದರ್ಯದ ಹುಚ್ಹು,
ಕಾಣುವ ಕಣ್ಣಲ್ಲಿ , ಕನವರಿಸುವ ಕಿಚ್ಚು ,
ಪ್ರಕೃತಿಯನ್ನು ಒಲಿಸಿಕೊಳ್ಳುವ, ಓಲೈಸಿಕೊಳ್ಳುವ ತವಕ. ಕವ, ಕವ, ಸಂಸಾರ ಸಾಗರಕೆ ಮರುಳಾದೆ,
ಮರುಥಕವೆಂದು ಮರಳು ಮುಟ್ಟಿದೆ ಮರುಳಾದೆ,
ಉಪ್ಪು ಮೆತ್ತಿತು, ಮೆಲ್ಲನೆ, ಮೆಲ್ಲಿದೆ, ಮುಖ ಕಪ್ಪಿಟ್ಟಿತು…
‘TIMELESS PHILOSOPHY, CHANGE YOURSELF.. THE WORLD WILL CHANGE’