ಹಡಗನ್ನು ಮುಳುಗಿಸಿದ ಶಾಂಪೇನ್

ನಮ್ಮ ಪಕ್ಕದ ಮನೆಯ ರಂಗಣ್ಣ ಹೊಸ “ಸುವೇಗ” ಮೊಪೆಡ್ ಕೊಂಡಾಗ ಮಾಡಿದ್ದು ಹೀಗೆ. ಒಂದು ಜಮಾನಾದಲ್ಲಿ ಸುವೇಗ ಕೊಳ್ಳೋದು ಒಂದು ಸಾಧನೆಯೇ. ಬಹಳ ಉತ್ಸಾಹ, ಹೆಮ್ಮೆಯಿಂದ ಮನೆಗೆ ತಂದಾಗ ಅವನ ಹೆಂಡತಿ ಆರತಿ ಎತ್ತಿ, ಕಾಯಿ ಒಡೆದು, ಹೂವಿನ ಹಾರ ಹಾಕಿದ ನಂತರ ಒಂದು ನಿಂಬೆ ಹಣ್ಣನ್ನು ಚಕ್ರದಡಿ ಇಟ್ಟು ಸುವೇಗ ಅದರ ಮೇಲೆ ಓಡಿಸಲು ಆದೇಶಿಸಿದಳು. ನನ್ನ ಸೋದರ ಮಾವ ಕಾರು ಕೊಂಡಾಗ ನಿಂಬೆ ಹಣ್ಣಿನ ಮೇಲೆ ಕಾರನ್ನು ಚಲಾಯಿಸಿ ‘ದರ್ಗಾ’ ದರ್ಶನ ಮಾಡಿಸಲು ಕಾರನ್ನು ಓಡಿಸಿ ಕೊಂಡು ಹೋಗಿದ್ದು ನೆನಪಿದೆ. ನಿಂಬೆ ಹಣ್ಣು ಸುವೇಗ ಭಾರಕ್ಕೆ burst ಆಗಿ ಅಪ್ಪಚ್ಚಿಯಾದರೆ ಒಳ್ಳೆಯದು, ಇಲ್ಲದಿದ್ದರೆ unlucky ಎಂದು ಅವಕೃಪೆ ಸುವೆಗಾದ ಮೇಲೂ, ಹೊಸ ಕಾರಿನ ಮೇಲೂ ಬೀಳಬಹುದೇನೋ? ಹೇಗೇ ಇರಲಿ, ಸಂಪ್ರದಾಯ ಎಂದ ಮೇಲೆ ಜನ ನಿಷ್ಠೆಯಿಂದ ಪರಿಪಾಲನೆ ಮಾಡುತ್ತಾರೆ, ಅದೆಷ್ಟೇ ನಗೆಪಾಟಲಾದರೂ ಕೂಡಾ. ಹಡಗಿನ ಶೀರ್ಷಿಕೆ ಕೊಟ್ಟು ಹಳೇ ಕಾಲದ ಬೆಡಗಿನ ಮೊಪೆಡ್ ಬಗ್ಗೆ ಏಕೆ ಪಂಚಾಯತಿ ಎಂದಿರೋ? ಇಲ್ಲಿದೆ ನೋಡಿ ಕಥೆ.

ಪ್ರತೀದಿನ ಮನೆಯಿಂದ, ಆಫೀಸು, ಆಫಿಸಿನಿಂದ ಮನೆ, ಅದರ ಮಧ್ಯೆ ಕೆಲಸದ ನಿಮಿತ್ತ ಓಡಾಟ, ಸರಾಸರಿ ದಿನಕ್ಕೆ ೨೦೦ ಕಿಲೋ ಮೀಟರ್ ಗಳಷ್ಟು. ಈ errand ಗಳಿಗೆ ಸಂಗಾತಿಯಾಗಿ ಕಾರಿನ ರೇಡಿಯೋ. ಸಂಗೀತ ಕೇಳಲು ಅಮೇರಿಕನ್ ಆರ್ಮ್ಡ್ ಫೋರ್ಸಸ್ ಚಾನಲ್, ಮತ್ತು ವಿಶ್ವದ ಆಗುಹೋಗುಗಳ ಬಗ್ಗೆ tuned ಆಗಿರಲು NPR. ಅಮೆರಿಕೆಯ NPR ತೆರನಾದ ರೇಡಿಯೋ ಭಾರತದಲ್ಲಿ ಇರಲು ಸಾಧ್ಯವಿಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ. ಅಷ್ಟೊಂದು ವೃತ್ತಿಪರತೆ ಮತ್ತು ಅಮೋಘ ಕಾರ್ಯಕ್ರಮಗಳು. ಇಟಲಿಯ (ನಮ್ಮ ಬೀಗರ ದೇಶ) ತೀರದಲ್ಲಿ ಲಕ್ಷುರಿ ಲೈನರ್ ಹಡಗು ತೀರಕ್ಕೆ ಅಪ್ಪಳಿಸಿ ಮೂರು ಜನ ಸತ್ತರು ಎನ್ನುವ ಸುದ್ದಿ ಬಂತು. ಒಂದೂವರೆ ಲಕ್ಷ ಟನ್ನು ಭಾರದ ಸರಕುಗಳನ್ನೂ, ನಾಲ್ಕು ಸಾವಿರ ಜನರನ್ನೂ ಹೊತ್ತು ಸಾಗಬಲ್ಲ ಈ floating village ಅತ್ಯಾಧುನಿಕ NAVIGATION ತಂತ್ರಜ್ಞಾನ ಹೊಂದಿತ್ತು. ಆಕಸ್ಮಾತ್ ಆಗಿ ಹಡಗಿಗೆ ಅಪಾಯಕಾರಿಯಾಗುವ ಯಾವುದೇ ಸನ್ನಿವೇಶವನ್ನೂ ಎದುರಿಸುವ ತಂತ್ರಜ್ಞಾನ ಇದ್ದೂ ಎಡವಿದ್ದು ಎಲ್ಲಿ ಎಂದು ತಜ್ಞರ ತಲೆಕೆರೆತ.

“ಕೋಸ್ಟ ಕಾನ್ಕೊರ್ಡಿಯಾ” ಹೆಸರಿನ ಹಡಗು ಮುಳುಗಲು ಆರಂಭವಾದ ಕೂಡಲೇ ಪ್ರಯಾಣಿಕರನ್ನು ರಕ್ಷಿಸುವ ಬದಲು ಎಲ್ಲರಿಗಿಂತ ಮುಂಚೆ ತೀರಕ್ಕೆ ಹಾರಿ ಬಚಾವ್ ಆದ ಶೂರ ೫೨ ರ ಪ್ರಾಯದ ಕ್ಯಾಪ್ಟನ್ ನನ್ನು ಬಂಧನದಲ್ಲಿರಿಸಿ ವಿಚಾರಣೆ ನಡೆಯುತ್ತಿದೆ. ಈ ಅತ್ಯಾಧುನಿಕ ಹಡಗು ಹೊಸತೂ ಹೌದು. ಇದರ ಚೊಚ್ಚಲ ಪ್ರಯಾಣದ ವೇಳೆ, ನಮ್ಮ ಸುವೇಗಾ ಥರ, ಹಡಗಿನ ಮೇಲ್ಮೆ ಮೇಲೆ ಶಾಂಪೇನ್ ಬಾಟಲಿ ಎಸೆಯುತ್ತಾರಂತೆ. ಇದು ಸಂಪ್ರದಾಯ. ನಮ್ಮ ನಿಂಬೆ ಹಣ್ಣಿನ ರೀತಿ. ಶಾಂಪೇನ್ ಬಾಟಲಿ ಒಡೆದು ಚೂರಾದರೆ ಶಕುನ. ಬಾಟಲಿ ಒಡೆಯದಿದ್ದರೆ unlucky. ಕೋಸ್ಟ ಕಾನ್ಕೊರ್ಡಿಯಾ ದ ಮೇಲೆ ಬಿದ್ದ ಶಾಂಪೇನ್ ಬಾಟಲಿ ಒಡೆಯಲಿಲ್ಲ. ಬಾಟಲಿ ಒಡೆಯದೆ ಹಡಗು ದುರಾದೃಷ್ಟ ದ ಹಣೆ ಪಟ್ಟಿ ಅಂಟಿಸಿಕೊಂಡಿತು. ಪ್ರಶಾಂತ “ಟಸ್ಕನ್” ದ್ವೀಪದ ಸನಿಹ ಮುಳುಗು ಹಾಕಿತು. ಈ ಹಡಗು ಸ್ಥಿಮಿತ ತಪ್ಪಿ ವಾಲುತ್ತಿದ್ದಂತೆ ಸುತ್ತಲೂ rescue boat ಗಳು, ಹೆಲಿಕಾಪ್ಟರ್ ಗಳು ಬಂದು ಅಪಾರ ಜೀವಹಾನಿಯನ್ನು ತಡೆದವು. ಕೆಲ ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಪ್ರವಾಹಕ್ಕೆ ಸಿಕ್ಕಿಹಾಕಿಕೊಂಡ ಏಳೆಂಟು ಜನರನ್ನು ಭಾರ್ತಿ ೪೮ ಘಂಟೆಗಳ ಸಮಯವಿದ್ದೂ ರಕ್ಷಿಸಲಾಗದೆ ಜಲಸಮಾಧಿ ಆಗಿದ್ದು ನೆನಪಿದೆ. ಇವರು ಜಲಸಮಾಧಿ ಆದಾಗ ಅಲ್ಲಿ ಮಂತ್ರಿ ಮಹೋದಯರೂ ಇದ್ದರು, ಇದರ ಬಗ್ಗೆ ಟೀಕೆ ಬಂದಾಗ ಮುಖ್ಯಮಂತ್ರಿ ವಸುಂಧರಾ ರಾಜೆ ಕೆರಳಿ ಮಂತ್ರಿ ಯೂ ಅವರ ಜೊತೆ ಮುಳುಗಿ ಸಾಯಬೇಕಿತ್ತೇನೋ ಎಂದು ಕೆರಳಿ ಕೇಳಿದ್ದೂ ನೆನಪಿದೆ. ನಮ್ಮಲ್ಲಿ ಮನುಷ್ಯನ ಜೀವಕ್ಕೆ ಬೆಲೆಯಿಲ್ಲ. ಮುಖ್ಯಮಂತ್ರಿಯ ಹೇಳಿ ಕಾಪ್ಟರ್ ಲ್ಯಾಂಡ್ ಆಗಲು ಒಂದೆರಡು ಘಂಟೆ ತಡವಾದರೆ ವಾಯುಪಡೆ, ಭೂಪಡೆ ಸೇರಿ ಇಡೀ ದೇಶದ ವ್ಯವಸ್ಥೆಯೇ ಸನ್ನದ್ಧ. ನಮ್ಮ ಪಕ್ಕದ ಮನೆಯ ರಂಗಣ್ಣ ಹೊಸ “ಸುವೇಗ” ಮೊಪೆಡ್ ಕೊಂಡಾಗ ಮಾಡಿದ್ದು ಹೀಗೆ. ಒಂದು ಜಮಾನಾದಲ್ಲಿ ಸುವೇಗ ಕೊಳ್ಳೋದು ಒಂದು ಸಾಧನೆಯೇ. ಬಹಳ ಉತ್ಸಾಹ, ಹೆಮ್ಮೆಯಿಂದ ಮನೆಗೆ ತಂದಾಗ ಅವನ ಹೆಂಡತಿ ಆರತಿ ಎತ್ತಿ, ಕಾಯಿ ಒಡೆದು, ಹೂವಿನ ಹಾರ ಹಾಕಿದ ನಂತರ ಒಂದು ನಿಂಬೆ ಹಣ್ಣನ್ನು ಚಕ್ರದಡಿ ಇಟ್ಟು ಸುವೇಗ ಅದರ ಮೇಲೆ ಓಡಿಸಲು ಆದೇಶಿಸಿದಳು. ನನ್ನ ಸೋದರ ಮಾವ ಕಾರು ಕೊಂಡಾಗ ನಿಂಬೆ ಹಣ್ಣಿನ ಮೇಲೆ ಕಾರನ್ನು ಚಲಾಯಿಸಿ ದರ್ಗಾ ದರ್ಶನ ಮಾಡಿಸಲು ಕಾರನ್ನು ಓಡಿಸಿ ಕೊಂಡು ಹೋಗಿದ್ದು ನೆನಪಿದೆ. ನಿಂಬೆ ಹಣ್ಣು ಸುವೇಗ ಭಾರಕ್ಕೆ burst ಆಗಿ ಅಪ್ಪಚ್ಚಿಯಾದರೆ ಒಳ್ಳೆಯದು, ಇಲ್ಲದಿದ್ದರೆ unlucky ಎಂದು ಅವಕೃಪೆ ಸುವೆಗಾದ ಮೇಲೂ, ಹೊಸ ಕಾರಿನ ಮೇಲೂ ಬೀಳಬಹುದೇನೋ? ಹೇಗೇ ಇರಲಿ, ಸಂಪ್ರದಾಯ ಎಂದ ಮೇಲೆ ಜನ ನಿಷ್ಠೆಯಿಂದ ಪರಿಪಾಲನೆ ಮಾಡುತ್ತಾರೆ, ಅದೆಷ್ಟೇ ನಗೆಪಾಟಲಾದರೂ ಕೂಡಾ. ಹಡಗಿನ ಶೀರ್ಷಿಕೆ ಕೊಟ್ಟು ಹಳೇ ಕಾಲದ ಬೆಡಗಿನ ಮೊಪೆಡ್ ಬಗ್ಗೆ ಏಕೆ ಪಂಚಾಯತಿ ಎಂದಿರೋ? ಇಲ್ಲಿದೆ ನೋಡಿ ಕಥೆ.

ಪ್ರತೀದಿನ ಮನೆಯಿಂದ, ಆಫೀಸು, ಆಫಿಸಿನಿಂದ ಮನೆ, ಅದರ ಮಧ್ಯೆ ಕೆಲಸದ ನಿಮಿತ್ತ ಓಡಾಟ, ಸರಾಸರಿ ದಿನಕ್ಕೆ ೨೦೦ ಕಿಲೋ ಮೀಟರ್ ಗಳಷ್ಟು. ಈ errand ಗಳಿಗೆ ಸಂಗಾತಿಯಾಗಿ ಕಾರಿನ ರೇಡಿಯೋ. ಸಂಗೀತ ಕೇಳಲು ಅಮೇರಿಕನ್ ಆರ್ಮ್ಡ್ ಫೋರ್ಸಸ್ ಚಾನಲ್, ಮತ್ತು ವಿಶ್ವದ ಆಗುಹೋಗುಗಳ ಬಗ್ಗೆ tuned ಆಗಿರಲು NPR. ಅಮೆರಿಕೆಯ NPR ತೆರನಾದ ರೇಡಿಯೋ ಭಾರತದಲ್ಲಿ ಇರಲು ಸಾಧ್ಯವಿಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ. ಅಷ್ಟೊಂದು ವೃತ್ತಿಪರತೆ ಮತ್ತು ಅಮೋಘ ಕಾರ್ಯಕ್ರಮಗಳು. ಇಟಲಿಯ (ನಮ್ಮ ಬೀಗರ ದೇಶ) ತೀರದಲ್ಲಿ ಲಕ್ಷುರಿ ಲೈನರ್ ಹಡಗು ತೀರಕ್ಕೆ ಅಪ್ಪಳಿಸಿ ಮೂರು ಜನ ಸತ್ತರು ಎನ್ನುವ ಸುದ್ದಿ ಬಂತು. ಒಂದೂವರೆ ಲಕ್ಷ ಟನ್ನು ಭಾರದ ಸರಕುಗಳನ್ನೂ, ನಾಲ್ಕು ಸಾವಿರ ಜನರನ್ನೂ ಹೊತ್ತು ಸಾಗಬಲ್ಲ ಈ floating village ಅತ್ಯಾಧುನಿಕ NAVIGATION ತಂತ್ರಜ್ಞಾನ ಹೊಂದಿತ್ತು. ಆಕಸ್ಮಾತ್ ಆಗಿ ಹಡಗಿಗೆ ಅಪಾಯಕಾರಿಯಾಗುವ ಯಾವುದೇ ಸನ್ನಿವೇಶವನ್ನೂ ಎದುರಿಸುವ ತಂತ್ರಜ್ಞಾನ ಇದ್ದೂ ಎಡವಿದ್ದು ಎಲ್ಲಿ ಎಂದು ತಜ್ಞರ ತಲೆಕೆರೆತ. “ಕೋಸ್ಟ ಕಾನ್ಕೊರ್ಡಿಯಾ” ಹೆಸರಿನ ಹಡಗು ಮುಳುಗಲು ಆರಂಭವಾದ ಕೂಡಲೇ ಪ್ರಯಾಣಿಕರನ್ನು ರಕ್ಷಿಸುವ ಬದಲು ಎಲ್ಲರಿಗಿಂತ ಮುಂಚೆ ತೀರಕ್ಕೆ ಹಾರಿ ಬಚಾವ್ ಆದ ಶೂರ ೫೨ ರ ಪ್ರಾಯದ ಕ್ಯಾಪ್ಟನ್ ನನ್ನು ಬಂಧನದಲ್ಲಿರಿಸಿ ವಿಚಾರಣೆ ನಡೆಯುತ್ತಿದೆ. ಈ ಅತ್ಯಾಧುನಿಕ ಹಡಗು ಹೊಸತೂ ಹೌದು. ಇದರ ಚೊಚ್ಚಲ ಪ್ರಯಾಣದ ವೇಳೆ, ನಮ್ಮ ಸುವೇಗಾ ಥರ, ಹಡಗಿನ ಮೇಲ್ಮೆ ಮೇಲೆ ಶಾಂಪೇನ್ ಬಾಟಲಿ ಎಸೆಯುತ್ತಾರಂತೆ. ಇದು ಸಂಪ್ರದಾಯ. ನಮ್ಮ ನಿಂಬೆ ಹಣ್ಣಿನ ರೀತಿ. ಶಾಂಪೇನ್ ಬಾಟಲಿ ಒಡೆದು ಚೂರಾದರೆ ಶಕುನ. ಬಾಟಲಿ ಒಡೆಯದಿದ್ದರೆ unlucky. ಕೋಸ್ಟ ಕಾನ್ಕೊರ್ಡಿಯಾ ದ ಮೇಲೆ ಬಿದ್ದ ಶಾಂಪೇನ್ ಬಾಟಲಿ ಒಡೆಯಲಿಲ್ಲ. ಬಾಟಲಿ ಒಡೆಯದೆ ಹಡಗು ದುರಾದೃಷ್ಟ ದ ಹಣೆ ಪಟ್ಟಿ ಅಂಟಿಸಿಕೊಂಡಿತು. ಪ್ರಶಾಂತ “ಟಸ್ಕನ್” ದ್ವೀಪದ ಸನಿಹ ಮುಳುಗು ಹಾಕಿತು. ಈ ಹಡಗು ಸ್ಥಿಮಿತ ತಪ್ಪಿ ವಾಲುತ್ತಿದ್ದಂತೆ ಸುತ್ತಲೂ rescue boat ಗಳು, ಹೆಲಿಕಾಪ್ಟರ್ ಗಳು ಬಂದು ಅಪಾರ ಜೀವಹಾನಿಯನ್ನು ತಡೆದವು.

ಕೆಲ ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಪ್ರವಾಹಕ್ಕೆ ಸಿಕ್ಕಿಹಾಕಿಕೊಂಡ ಏಳೆಂಟು ಜನರನ್ನು ಭಾರ್ತಿ ೪೮ ಘಂಟೆಗಳ ಸಮಯವಿದ್ದೂ ರಕ್ಷಿಸಲಾಗದೆ ಜಲಸಮಾಧಿ ಆಗಿದ್ದು ನೆನಪಿದೆ. ಇವರು ಜಲಸಮಾಧಿ ಆದಾಗ ಅಲ್ಲಿ ಮಂತ್ರಿ ಮಹೋದಯರೂ ಇದ್ದರು, ಇದರ ಬಗ್ಗೆ ಟೀಕೆ ಬಂದಾಗ ಮುಖ್ಯಮಂತ್ರಿ ವಸುಂಧರಾ ರಾಜೆ ಕೆರಳಿ ಮಂತ್ರಿ ಯೂ ಅವರ ಜೊತೆ ಮುಳುಗಿ ಸಾಯಬೇಕಿತ್ತೇನೋ ಎಂದು ಕೆರಳಿ ಕೇಳಿದ್ದೂ ನೆನಪಿದೆ. ನಮ್ಮಲ್ಲಿ ಮನುಷ್ಯನ ಜೀವಕ್ಕೆ ಬೆಲೆಯಿಲ್ಲ. ಮುಖ್ಯಮಂತ್ರಿಯ ಹೇಳಿ ಕಾಪ್ಟರ್ ಲ್ಯಾಂಡ್ ಆಗಲು ಒಂದೆರಡು ಘಂಟೆ ತಡವಾದರೆ ವಾಯುಪಡೆ, ಭೂಪಡೆ ಸೇರಿ ಇಡೀ ದೇಶದ ವ್ಯವಸ್ಥೆಯೇ ಸನ್ನದ್ಧ.

ಗೋ ಹತ್ಯೆ ನಿಷೇಧಿಸಿ

ದೇಶದ ಸಮಯ, ಸಂಪನ್ಮೂಲಗಳನ್ನು ನುಂಗುತ್ತಿರುವ ಹಲವು ತಗಾದೆಗಳಲ್ಲಿ ಗೋ ಹತ್ಯೆ ಒಂದು. ಹಿಂದೂಗಳು ಪವಿತ್ರ, ಮಾತೆ ಎಂದು ಆದರಿಸಲ್ಪಡುವ, ಗೌರವಿಸಲ್ಪಡುವ ಗೋವಿನ ಮತ್ತು ಅದನ್ನು ಸಂರಕ್ಷಿಸಬೇಕಾದ ವಿಧಾನಗಳ ಬಗ್ಗೆ ಚರ್ಚೆಗೆ ಶತಮಾನಗಳ ಇತಿಹಾಸ ಇದೆ. ಸಾಕಷ್ಟು ನೆತ್ತರೂ ಹರಿದಿದೆ. ದೇಶವನ್ನು ಕಿತ್ತು ತಿನ್ನುವ ಸಮಸ್ಯೆಗಳಿಗೆ ರಾಜಕಾರಣದ ಲೇಪನ ಇಲ್ಲದಿದ್ದರೆ ಅದಕ್ಕೆ ಮಹತ್ವವಾಗಲೀ, ಮೋಜಾಗಲೀ ಇರುವುದಿಲ್ಲ. ಗೋ ವಿನ ವಿಷಯದಲ್ಲೂ ಆಗಿದ್ದೂ ಇದೇ.  ಗೋ ಮಾಂಸ ಭಕ್ಷಕರೆಂದು ಪರಿಗಣಿಸಲ್ಪಡುವ, ಮುಖ್ಯವಾಗಿ ಕ್ರೈಸ್ತರು ಮತ್ತು ಮುಸ್ಲಿಮರಿಗೆ, ಗೋ ಮಾಂಸವನ್ನು ಅವರ ಮೆನ್ಯು (menu) ಪಟ್ಟಿಯಿಂದ ತೆಗೆದುಬಿಟ್ಟರೆ ಆಕಾಶ ಕಳಚಿ ಬೀಳೋಲ್ಲ. ಹೃದಯದ  clogged arteries ಗಳಿಗೆ ಮಾತ್ರ ದೊಡ್ಡ ಪ್ರಯೋಜನವಾಗುತ್ತದೆ ಈ ಮಾಂಸ ಮೆನ್ಯು ವಿನಿಂದ ಹೊರಗುಳಿದರೆ.

ಈಗ ಪ್ರವೇಶ ರಾಜಕಾರಣ. ಎಂಟರ್ ದಿ ಡ್ರಾಗನ್ ಥರ. ಅಪಾಯಕಾರಿ ಆದರೂ ಒಂದಿಷ್ಟು ಸೀಟುಗಳನ್ನು ಅಥವಾ ಅಧಿಕಾರದ ಗದ್ದುಗೆಯನ್ನು ತರಲು ಸಹಕಾರಿಯಾದರೆ ಗೋವನ್ನು ಮಾತ್ರವಲ್ಲ ಯಾರನ್ನು ಬೇಕಾದರೂ ಬಲಿ ಕೊಡಲು ಸಿದ್ಧ. ಗೋಮಾಂಸ ನಿಷೇಧಿಸಿದರೆ ಅಲ್ಪಸಂಖ್ಯಾತರ ಆಹಾರ ಪದ್ಧತಿ ಯಲ್ಲಿ ಹಸ್ತಕ್ಷೇಪ ನಡೆಸಿದಂತೆ ಎಂದು ರಗಳೆ ಇವರದು. ಗೋ ಮಾಂಸ ತಿಂದೇ ಸಿದ್ಧ ಎಂದು ಪಟ್ಟು ಹಿಡಿಯುವ ಅಲ್ಪತನ ಅಲ್ಪ ಸಂಖ್ಯಾತರು ತೋರಿಸರು ಎನ್ನುವ ಪ್ರಜ್ಞೆ ಇವರಿಗಿಲ್ಲ, ಆಳುವ ಮಂದಿಗೆ. ಗೋ ಮಾಂಸ ನಿಷೇಧಿಸಿ ಬಿಟ್ಟರೆ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದೀತು ಎನ್ನುವ ಅತಂತ್ರ, ಅಭದ್ರ ಮನಸ್ಥಿತಿಯವರೂ ಅಲ್ಲ ಮುಸ್ಲಿಮರು ಅಥವಾ ಕ್ರೈಸ್ತರು. ಮತ್ತೇಕೆ ಈ ಸಮಸ್ಯೆ ಆಗಾಗ ತಲೆ ಎತ್ತುತ್ತಾ ಇರುತ್ತದೆ ಎನ್ನುವುದು ಯಕ್ಷ ಪ್ರಶ್ನೆ.

ಗೋ ಹತ್ಯೆ ಬಹುಸಂಖ್ಯಾತ ವರ್ಗದವರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದಾದರೆ ಖಂಡಿತಾ ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೆ ತಂದೇ ತೀರಬೇಕು. ಗೋ ಹತ್ಯಾ ನಿಷೇಧ ಕೂಡದು ಎನ್ನುವ ಕಾಂಗ್ರೆಸ್ಸಿಗರು ಮುಸ್ಲಿಮರ ಓಟಿಗಾಗಿ ದೊಂಬರಾಟ ನಡೆಸೋದು ನಿಲ್ಲಿಸಬೇಕು. ಮುಸ್ಲಿಮರಿಗೆ ಗೋ ಮಾಂಸ ತಿನ್ನಲೇ ಬೇಕೆನ್ನುವ ನಿಯಮವೇನಿಲ್ಲ. ದಿನ ಪೂರ್ತಿ ಇದರ ಜಪ ಮಾಡುತ್ತಾ ಕೂರುವ ವ್ಯವಧಾನವೂ ಇಲ್ಲ ಅವರಲ್ಲಿ. ಅವರಿಗೆ (ಮುಸ್ಲಿಮರಿಗೆ) ತಲೆಕೆಡಿಸಿ ಕೊಳ್ಳಬೇಕಾದ ನೂರೊಂದು ವಿಷಯಗಳಿವೆ. ಮುಸ್ಲಿಂ ಧರ್ಮೀಯ ಸಸ್ಯಾಹಾರಿಯಾಗಲು ಧರ್ಮದ ಅಡ್ಡಿಯಿಲ್ಲ. ನಿಷೇಧ ಬೇಡ ಎನ್ನುವ ಕಾಂಗ್ರೆಸ್ಸಿಗರಿಗೆ ಏಕೆ ಗೋವು ಪವಿತ್ರ ಅಲ್ಲ ಅನ್ನೋದು ಒಂದು ಒಗಟು. ಹಾಗೆಯೇ ಗೋವು ಪಾವಿತ್ರ್ಯತೆಯನ್ನು ಪಡೆದು ಕೊಂಡಿದ್ದು ಯಾವಾಗಿನಿಂದ ಎಂದು ಯಾರಾದರೂ ಬೆಳಕು ಚೆಲ್ಲಿದರೆ ಉಪಕಾರ. ಈ ಸಂಬಂಧ ಪ್ರೊಫೆಸರ್ D.N. Jha ರವರು ಬರೆದ the myth of holy cow ಪುಸ್ತಕದಲ್ಲಿ ಗೋಮೇಧ, ಅಶ್ವಮೇಧ ಯಾಗಗಳು, ಗೋಮಾಂಸ ಭಕ್ಷಿಸಿದ ಉದಾಹರಣೆಗಳೊಂದಿಗೆ ವಿಸ್ತೃತವಾದ ಮಾಹಿತಿಗಳಿವೆ.

ಗೋ ಹತ್ಯೆಯ ಬಗ್ಗೆ ಮುಸ್ಲಿಮರಿಗೆ ಇರುವ ತಕರಾರಿಗಿಂತ ಬಹುಸಂಖ್ಯಾತರಿಗೆ ಹೆಚ್ಚು ಆಸಕ್ತಿಕರ ಎನ್ನುವುದು ಕಾಂಗ್ರೆಸ್ಸಿಗರ ಮತ್ತು ಇತರೆ ಪಕ್ಷಗಳವರ ಪ್ರತಿಭಟನೆಗಳಿಂದ ವ್ಯಕ್ತವಾಗುತ್ತದೆ. ಈ ತಗಾದೆಯಿಂದ ಶಾಂತಿ ಪ್ರಿಯ ಭಾರತೀಯರು ಹೊರಗುಳಿದರೆ ದೇಶಕ್ಕೆ ಒಳ್ಳೆಯದು. ಏಕೆಂದರೆ ಇಲ್ಲಿ ನಡೆಯುತ್ತಿರುವುದು ಚರ್ಚೆಗಿಂತ ಸಮುದಾಯಗಳ ನಡುವಿನ ಕಂದಕದ ನಿರ್ಮಾಣದ ಬಗ್ಗೆ ಹೆಚ್ಚಿನ ಆಸಕ್ತಿ ಕಾಣುತ್ತದೆ.     

  

 

ಭೌತ ಶಾಸ್ತ್ರದಷ್ಟೇ ಕಠಿಣ, ಹೆಣ್ಣು

ವಿಶ್ವವಿಖ್ಯಾತ ಭೌತಶಾಸ್ತ್ರಜ್ಞ, ಮತ್ತು cosmologist ಸ್ಟೀಫನ್ ಹಾಕಿಂಗ್, ಮೊನ್ನೆಯ ಭಾನುವಾರ ೭೦ನೆ ಜನ್ಮ ದಿನಾಚರಣೆ ಆಚರಿಸಿದರು. ಸರ್ ಐಸಾಕ್ ನ್ಯೂಟನ್ ನಂತರದ ಅತ್ಯಂತ ಪ್ರತಿಭಾವಂತ ವಿಜಾನಿ ಎಂದು ಪರಿಗಣಿಸಲ್ಪಡುವ ಸ್ಟೀಫನ್ ಹಾಕಿಂಗ್ ಬ್ರಿಟಿಶ್ ಪ್ರಜೆ.

ಭೌತಶಾಸ್ತ್ರ ಅಥವಾ ಬ್ರಹ್ಮಾಂಡ ಶಾಸ್ತ್ರ ನನ್ನ ಕೈಗೆಟುಕುವ ಮಾತಲ್ಲ. ಇವೆರಡೂ ಇಮಾಂ ಸಾಹೇಬರಿಗೂ, ಜನ್ಮಾಷ್ಠಮಿ ಗೂ ಇರುವ ಸಂಬಂಧ ಹೇಗೋ ಹಾಗೆ. ೧೯೮೮ ರಲ್ಲಿ ಪ್ರಕಟವಾದ ಸ್ಟೀಫನ್ ಹಾಕಿಂಗ್ ರ brief history of time ಪುಸ್ತಕ ಒಂದು ಕೋಟಿಗೂ ಹೆಚ್ಚು ಪ್ರತಿಗಳ ಮುದ್ರಣ ಕಂಡಿತು. ಇಷ್ಟು ಜನಪ್ರಿಯವಾದ ಪುಸ್ತಕದಲ್ಲಿ ಏನಿರಬಹುದು ಎಂದು ಆಸಕ್ತಿ ಕುದುರಿದ್ದರಿಂದಲೂ, ಮತ್ತು  ಈ ಪುಸ್ತಕದಲ್ಲಿ ಹಾಕಿಂಗ್ ದೇವರ ಅಸ್ತಿತ್ವದ ಸಾಧ್ಯತೆ ಬಗ್ಗೆ ಬರೆದಿದ್ದರು ಎಂದು ಕೇಳಿದ್ದರಿಂದಲೂ ಪುಸ್ತಕ ಕೊಂಡೆ. ಓದಿದ ನಂತರ ಅರ್ಥವಾಗಿದ್ದು ಅಷ್ಟಕ್ಕಷ್ಟೇ, ಆದರೆ ಈ ವಿಜ್ಞಾನಿಯ ಬಗ್ಗೆ ಆಸಕ್ತಿ ಮಾತ್ರ ನನ್ನಲ್ಲಿ ಉಳಿದುಕೊಂಡಿತು.

೧೯೪೨ ರಲ್ಲಿ ಜನಿಸಿದ ಸ್ಟೀಫನ್ ಹಾಕಿಂಗ್ ಗೆ ೨೧ ನೇ ವಯಸ್ಸಿನಲ್ಲಿ ALS (Amyotrophic lateral sclerosis) ಅಥವಾ ಲೂ ಗೆಹ್ರಿಗ್ ಎಂದೂ ಕರೆಯಲ್ಪಡುವ, ಮೆದುಳನ್ನು ಮತ್ತು ಬೆನ್ನ ಹುರಿಯನ್ನು ಬಾಧಿಸುವ ವಾಸಿಯಾಗದ ನರರೋಗ ಇದೆ ದೃಢ ಪಟ್ಟ ನಂತರ ವೈದ್ಯರು ಇವರ ಬದುಕುವ ಕಾಲ ಕೇವಲ ಇನ್ನೆರಡು ವರ್ಷ ಎಂದಿದ್ದರು. ೨೩ ನೇ ವಯಸ್ಸಿನಲ್ಲಿ ಅಂತ್ಯ ಕಾಣಬೇಕಿದ್ದ ಈ ವಿಜ್ಞಾನಿ ಕಾಯಿಲೆ ವಾಸಿಯಾಗದಿದ್ದರೂ ೭೦ ನೇ ಜನ್ಮ ದಿನ ಆಚರಿಸುತ್ತಿದ್ದಾರೆ. ಉಲ್ಬಣಗೊಳ್ಳುತ್ತಾ (debilitating and degenerative disease) ಹೋಗುವ ಈ ಕಾಯಿಲೆ ಸ್ಟೀಫನ್ ರನ್ನು ಮಾತನಾಡಲೂ, ಬರೆಯಲೂ ಸಾಧ್ಯವಾಗದಂತೆ ಮಾಡಿತು. ಜನರೊಂದಿಗೆ ಸಂವಾದಿಸಲು ಅವರಿಗಾಗಿ ಪ್ರತ್ಯೇಕ ಯಂತ್ರವನ್ನ ಕಂಡು ಹಿಡಿಯಲಾಯಿತು. ಶರೀರದ ಕೆಲವೇ ಕೆಲವು ಸ್ನಾಯುಗಳನ್ನು ಉಪಯೋಗಿಸಿ ಗಣಕ ಯಂತ್ರದ ಕೀಲಿಮಣೆ ಮೂಲಕ ಸಂವಾದ ನಡೆಸುತ್ತಿದ್ದರು ಹಾಕಿಂಗ್. ಈಗ ಅದೂ ಕಷ್ಟವಾಗಿ ಕೇವಲ ಕೆನ್ನೆಗಳ ಸ್ನಾಯುಗಳ ಸಹಾಯದಿಂದ ಸಂವಾದ ನಡೆಸುತ್ತಿದ್ದಾರೆ.

ಮೆದುಳು ಮತ್ತು ಶರೀರ tandem ಆಗಿ ಕೆಲಸ ಮಾಡುತ್ತವೆ. ಶರೀರದ ಸ್ನಾಯುಗಳು ಕೆಲಸ ಮಾಡಲು ಸಹಾಯ ಮಾಡುವುದು ಮೆದುಳಿನಿಂದ ಹೊರಡುವ ಆಜ್ಞೆಗಳು. ಆದರೆ ALS ಖಾಯಿಲೆಯಲ್ಲಿ ಸ್ನಾಯುಗಳು ಕೆಲಸ ಮಾಡದಿದ್ದರೂ ಮೆದುಳು ಮಾತ್ರ pristine ಆಗಿಯೇ ಉಳಿಯುತ್ತದೆ. ಈ ಬೆಳವಣಿಗೆ ALS ಖಾಯಿಲೆಗೆ ಸೀಮಿತವಲ್ಲದಿದ್ದರೂ ಹಾಕಿಂಗ್ ವಿಷಯದಲ್ಲಿ ಮಾತ್ರ ಅನ್ವಯವಾಗುತ್ತಿದೆ. ಹಾಕಿನ್ ರ ಮೆದುಳು ಬುದ್ದಿ ಮತ್ತೆಯಲ್ಲಿ ಇಷ್ಟೊಂದು ಪ್ರಖರವಾಗಿದ್ದರೂ ಯಾವುದೇ ಶಾರೀರಿಕ ನ್ಯೂನತೆಯಿಲ್ಲದ ಹಾಕಿಂಗ್ ಶರೀರ ಮಾತ್ರ ಏಕೆ ಈ ರೀತಿ ವರ್ತಿಸುತ್ತಿರಬಹುದು? ಒಂದು ಲೋಟ ನೀರು ಬೇಕು ಎಂದು ಕೇಳಲೂ ಸಾಧ್ಯವಾಗದ ರೀತಿಯಲ್ಲಿ ಅವರ ಶಾರೀರಿಕ ಸಾಮರ್ಥ್ಯ ಕುಗ್ಗಲು ದೇವರಿಲ್ಲ ಎಂದು ಶತಸ್ಸಿದ್ಧ ಸಾಧಿಸಲು ಹೊರಟ ಅವರಿಗೆ ಪರಮಾತ್ಮ ಕೊಡಮಾಡಿದ ಶಿಕ್ಷೆ ಇರಬಹುದೋ ಎಂದು ಕೆಲವು ಸಂದೇಹ ವ್ಯಕ್ತಪಡಿಸುತ್ತಾರೆ.  

ಭೌತ ಶಾಸ್ತ್ರಕ್ಕಿಂತಲೂ ಇವರ ಅಧ್ಯಯನ ಮತ್ತು ಸಂಶೋಧನೆ ನಭೋ ಮಂಡಲದ ಬಗ್ಗೆ. expanding universe, black hole ಹೀಗೆ ಮಾನವನ ಕುತೂಹಲ ಮತ್ತು ಅಚ್ಚರಿಯನ್ನು ಹಿಡಿದಿಟ್ಟ,  ನಮ್ಮ ಭೂಮಿ ಮತ್ತು ಬ್ರಹ್ಮಾಂಡ ಹೇಗೆ ಅಸ್ತಿತ್ವಕ್ಕೆ ಬಂದಿರಬಹುದು ಎನ್ನುವ ಶಂಶೋಧನೆಯಲ್ಲಿ ಇವರ ಆಸಕ್ತಿ. ಒಂದೊಮ್ಮೆ ದೇವರ ಅಸ್ತಿತ್ವದ ಬಗ್ಗೆ ಸಕಾರಾತ್ಮಕ ವಾಗಿದ್ದ ಅವರ ನಿಲುವು ನಂತರ ಬದಲಾಯಿತು. ಸ್ವರ್ಗ ಎನ್ನುವುದು ಒಂದು fairy story ಮಾತ್ರ ಎಂದು ಹಾಕಿಂಗ್ ರ ಅಭಿಪ್ರಾಯ.

 

ವಿಸ್ತಾರ ಗೊಳ್ಳುತ್ತಿರುವ ಬ್ರಹ್ಮಾಂಡದ ಬಗ್ಗೆ ಚಿಂತಿಸುವ, black hole ಗಳ ನಿಗೂಢತೆ ಬಗ್ಗೆ ಬಗ್ಗೆ ಅಭ್ಯಸಿಸುವ, ಈ ವಿಜ್ಞಾನಿಗೆ ಭೌತಶಾಸ್ತ್ರದಷ್ಟೇ ಕಠಿಣ ಎಂದು ತೋರಿದ ಮತ್ತೊಂದು ವಿಷಯ ಹೆಣ್ಣು. women. they are a complete mystery. ದಾರ್ಶನಿಕರು, ಕವಿಗಳು, ಭಗ್ನ ಹೃದಯೀ ಪುರುಷರು ಹಳಿದ, ಹಲುಬಿದ, ಹೆಣ್ಣು ಸ್ಟೀಫನ್ ರಿಗೂ enigma ಆದಳು. black hole ಥರ.

ಸ್ಟೀಫನ್ ಹಾಕಿಂಗ್ ರಿಗೆ ಹುಟ್ಟು ಹಬ್ಬದ ಶುಭಾಶಯಗಳೊಂದಿಗೆ……

ಸಚಿನ್ ಮತ್ತೊಬ್ಬ ಬ್ಯಾಟ್ಸ್ಮನ್, ಅಷ್ಟೇಯ

ಸಚಿನ್ ಮತ್ತೊಬ್ಬ ಬ್ಯಾಟ್ಸ್ ಮ್ಯಾನ್ ಅಷ್ಟೇ, ಎಂದ ಆಸ್ಟ್ರೇಲಿಯದ ಪೋರ. sachin is just another batsman. ಸತ್ಯವನ್ನೇ ನುಡಿದ ಆಸೀ ಬೌಲರ್ ‘ಪೀಟರ್ ಸಿಡ್ಲ್’. ಸಿಡಿಲಿನಂಥ ಮಾತು ಸಿಡ್ಲ್ ನಿಂದ. “ಸಚಿನ್ ಒಬ್ಬ ದೊಡ್ಡ ಮಿಕ. ಆತನನ್ನು ಔಟ್ ಮಾಡೋದೆಂದರೆ ಖುಷಿಯೇ. ಆದರೆ ನನಗೆ ಆತ ಮತ್ತೊಬ್ಬ ಬ್ಯಾಟ್ಸ್ಮನ್” ಎಂದು ಹೇಳಿದ ಸಿಡ್ಲ್ ಮಾತುಗಳಲ್ಲಿ ಸಚಿನ್ ಬಗ್ಗೆ ಅಭಿಮಾನವೂ, ಅದರೊಂದಿಗೇ ಸ್ಪರ್ದಾತ್ಮಕ ಕ್ರೀಡೆಯ ವಾಸ್ತವದ ಬಗೆಗಿನ ಸ್ಪಷ್ಟ ಕಲ್ಪನೆಯೂ ಕಾಣಬಹುದಿತ್ತು. ನಿಸ್ಸಂಶಯವಾಗಿಯೂ ಸಚಿನ್ ಒಬ್ಬ ಮಾಂತ್ರಿಕ, ಚಮತ್ಕಾರಿಕ ಬ್ಯಾಟ್ಸ್ಮನ್. ಆತನ ಹಲಗೆಯಿಂದ ಬಂದ ಓಟಗಳು ಶತ್ರು ಎನ್ನುವ ಭೂತದ ಬೆನ್ನು ಹತ್ತುತ್ತಿತ್ತು. ಬೌಂಡರಿಗಳ, ಸಿಕ್ಸರಗಳ ಸುರಿಮಳೆ. ಎಲ್ಲವೂ ಸರಿ. ಆತ ಅಪ್ಪಟ ಚಿನ್ನ, ಸ್ವಭಾವದಲ್ಲಿ. ಕೀರುತಿ, ಕಾಂಚಾಣ ತನ್ನ ಕಾಲ ಬುಡದಲ್ಲಿ ಬಿದ್ದಿದ್ದರೂ ಅಹಂ ಎನ್ನುವ ನೆರಳೂ ಸಹ ಅವನ ಬಳಿ ಸುಳಿಯಲಿಲ್ಲ. ಸಾಮಾನ್ಯವಾಗಿ ಜನರಿಗೆ ಯಶಸ್ಸು ಬಹು ಬೇಗ ತಲೆಗೆ ಏರಿ ಬಿಡುತ್ತದೆ. ಆದರೆ ಸಚಿನ್ ವಿಷಯದಲ್ಲಿ ಹಾಗಾಗಲಿಲ್ಲ. ತಾನು ಸೀದಾ ಸಾದಾ ಆಗಿರಲು ಬಯಸಿದ, ಹಾಗೆಯೇ ಪ್ರಪಂಚಕ್ಕೆ ತೋರಿಸಿದ ಕೂಡಾ. ಆದರೆ ಆದದ್ದೇನೆಂದರೆ ಯಶಸ್ಸು ಅವನ ತಲೆಗೆ ಹತ್ತದಿದ್ದರೂ ನಮ್ಮ ತಲೆಗಂತೂ ಖಂಡಿತಾ ಏರಿತು, ಯಶಸ್ಸಿನ ಮದ. ಸಚಿನ್ ನಂಥವನು ಹುಟ್ಟೇ ಇಲ್ಲ ಎಂದು ಒಬ್ಬ ಹೇಳಿದರೆ, ಮತ್ತೊಬ್ಬ ಹೇಳಿದ ಸಚಿನ್ ನಂಥವರು ಹುಟ್ಟೋದಿಲ್ಲ ಎಂದು. ಸಚಿನ್ ನನ್ನು ಸೃಷ್ಟಿಸಿದ ದೇವರಿಗೆ ನೇರವಾದ ಸವಾಲು. ಸಚಿನ್ ಡೋನಾಲ್ಡ್ ಬ್ರಾಡ್ಮನ್ ಎಂದು ಒಬ್ಬ ಉಲಿದರೆ, ಮತ್ತೊಬ್ಬನಿಗೆ ಬ್ರಾಡ್ಮನ್ ಗಿಂತ ಆತ ಮಿಗಿಲು. ಕೊನೆಗೆ ಒಬ್ಬ ಹೇಳಿಯೇ ಬಿಟ್ಟ. ಹೇಳಬಾರದ್ದನ್ನ. ಏನಂತ……..? ಸಚಿನ್ ಈಸ್ ಗಾಡ್………ಒಹ್ ಮೈ ಗ್ಗಾಡ್ !  ವಿವೇಚನೆಯ ಶವಪೆಟ್ಟಿಗೆಗೆ ಕಟ್ಟ ಕಡೆಯ ಮೊಳೆ. ಜನರನ್ನು ಅಟ್ಟಕ್ಕೆ ಏರಿಸುವುದು ಅಥವಾ ಚಟ್ಟಕ್ಕೆ ಏರಿಸುವುದು ಹಳೆಯ ಚಾಳಿ. ಪ್ರದರ್ಶನ ಉತ್ತಮ, ಅಮೊಘವಾದರೆ ಹೊಗಳಿಕೆ ಕಿವಿ ಗಡಚ್ಚಿಕ್ಕುವ ಹಾಗೆ. ಯಾವುದಾದರೂ ಕಾರಣಕ್ಕೆ ಸ್ವಲ್ಪ ಎಡವಟ್ಟಾಯಿತೋ ಅಂತ್ಯ ಸಂಸ್ಕಾರ ಶುರು.

ಸಚಿನ್ ಶತಕದಿಂದ ಭಾರತಕ್ಕೆ ಆದ ಲಾಭ ನಷ್ಟಗಳನ್ನು ನೋಡಿದರೆ ಬ್ಯಾಲನ್ಸ್ ಡೆಬಿಟ್ ಆಗಿ ಕಾಣುತ್ತದೆ. hasty eighties, nervous nineties ದಾಟಿಕೊಂಡು ಮುಟ್ಟುವ ಯಾವುದೇ ಶತಕ ತಂಡದ ನೆರವಿಗೆ ಬರುವುದು ಸ್ವಲ್ಪ ಕಡಿಮೆಯೇ ಎನ್ನಬಹುದು. ಸ್ಕೋರ್ ಬೋರ್ಡ್ ಕಡೆ ಕಣ್ಣು ನೆಡದೆ ಕೈ ಹೊಸಕಿಕೊಳ್ಳುತ್ತಾ ಕಾತುರದಿಂದ ವಿಜಯದ ನಿರೀಕ್ಷೆ ಅಥವಾ ಸೋಲಿನ ದವಡೆಯಿಂದ ಪಾರಾಗಲು ಪ್ರಾರ್ಥಿಸುವವರನ್ನು ಗಮನದಲ್ಲಿಟ್ಟು ಕೊಂಡು ಆಡುವ ಆಟವೇ ಬೇರೆ. ಸಚಿನ್ ಎಲ್ಲಾ ಸಮಯವೂ ಸ್ವಾರ್ಥದಿಂದ ಆಡಿದ ಎಂದಲ್ಲ ನನ್ನ ಅಭಿಪ್ರಾಯ. ಸೋಲು ಗೆಲುವಿನ ದಾಖಲೆಗಳನ್ನು ನೋಡಿದಾಗ ಕಂಪೆನಿಗೆ ನಷ್ಟ, ನೌಕರನಿಗೆ ಲಾಭದ ರೀತಿಯ ಲೆಕ್ಕಾಚಾರ ಗೋಚರಿಸುತ್ತದೆ.

ಸಚಿನ್ ನ ನೂರನೇ ಶತಕಕ್ಕಾಗಿ ದೇಶ ಚಾತಕ ಪಕ್ಷಿ. ಆಸ್ಟ್ರೇಲಿಯಾದ ವಿರುದ್ಧದ ಮೊದಲ ಟೆಸ್ಟಿನಲ್ಲಿ ಭಾರತದ ಸೋಲು. ಬೆನ್ನಟ್ಟಲು ಇದ್ದಿದ್ದು ಮುನ್ನೂರಕ್ಕೂ ಕಡಿಮೆ ರನ್ನುಗಳು. ಬ್ಯಾಟಿಂಗ್ ಆಳ ನೋಡಿದರೆ ಅಟ್ಲಾಂಟಿಕ್ ಸಾಗರದ ಥರ. ಅಗಾಧ, ಆಳ. ಈ ಅಗಾಧ, ಆಳ, ಕಾಗದದ ಮೇಲೆ ಮಾತ್ರ ಎಂದು ನಮಗೆ ಅರಿವಾಗೋದು ತಂಡ ಮೈದಾನ ಪ್ರವೇಶಿಸಿದಾಗಲೇ. ಪೇಪರ್ ಟೈಗರ್ ಗಳು ಪೇಪರ್ ಮೇಲೆ ಆಡಬೇಕು ಕ್ರಿಕೆಟನ್ನ. ‘ಸುಡೋಕೋ’ ರೀತಿ. ಅದು ಬಿಟ್ಟು ನಮ್ಮಲ್ಲಿ ದಾಖಲೆಗಳ ಮೇಲೆ ದಾಖಲೆ ಇದೆ ಎಂದು ಮೈದಾನಕ್ಕೆ ಇಳಿದರೆ, ಅದೂ ಆಸ್ಟ್ರೇಲಿಯಾದ ರೀತಿಯ ಅತ್ಯಂತ ವೃತ್ತಿಪರ ತಂಡದ ಎದುರು ನಿಂತರೆ, ಸೋತು ಸುಣ್ಣವಾಗದೆ ಬೇರೆ ದಾರಿಯಿಲ್ಲ. ಆಸೀ ಗಳು ಮೈದಾನದ ಮೇಲೆ hungry wolves. ಹರಿದು ತಿನ್ನೋ ತೋಳಗಳು. ಒಂದಿಂಚು ಸ್ಥಳಾವಕಾಶ ನೀಡಿದಿರೋ, ಮೈಲುಗಟ್ಟಲೆ ಎಳೆದು ಬಿಡುತ್ತಾರೆ. ತಂಡ ಬಿಡಿಯಾಗಿ ಆಡೋದಿಲ್ಲ. ಹನ್ನೊಂದೂ ಜನ “ಏಕಲವ್ಯ” ರಾಗಿ ಆಡುತ್ತಾರೆ, ಛಲದಿಂದ. ಆದರೆ ನಮ್ಮ ಗಮನ? ಸಚಿನ್ ಈ ಸಲ ಹೊಡೀಬಹುದಾ ಸೆಂಚುರಿ? ಇಲ್ಲಿಗೆ ಸೀಮಿತ ನಮ್ಮ ಆಶಯ, ಆಕಾಂಕ್ಷೆ. ದೇಶದ ಈ ಒತ್ತಡ ಪಾಪ ಗಿಡ್ಡ ಸಚಿನ್ ಮೇಲೆ ಅಗಾಧವಾಯಿತು. ನೂರನೇ ಶತಕ ಮರೀಚಿಕೆಯಾಗಿಯೇ ಕಾಡಲು ತೊಡಗಿತು. ಒಂದು ಉಪಾಯ ನಮ್ಮ BCCI ಗೆ ಹೊಳೆಯಲಿಲ್ಲ. ಸಚಿನ್ ನಿಂದ ಆ elusive century ಸಾಕಾರಗೊಳಿಸಲೇ ಬೇಕು ಎಂದಾಗಿದ್ದರೆ, ತಂಡವನ್ನು ಆಸ್ಟ್ರೇಲಿಯಾಗೆ ಕಳಿಸೋ ಬದಲು ಕೆನಡಾ ದೇಶಕ್ಕೋ ಅಥವಾ ಮತ್ಯಾವುದಾದರೂ mediocre ತಂಡ ಇರೋ ದೇಶಕ್ಕೋ (ಪಾಕಿಸ್ತಾನ?) ಕಳಿಸಿ ಅಲ್ಲಿ ತಮ್ಮ ಅಜೆಂಡಾ ಕಾರ್ಯಗತವಾದ ಕೂಡಲೇ ಟಿಕೆಟ್ ಬುಕ್ ಮಾಡಿಸಬಹುದಿತ್ತು ಕಾಂಗರೂ ನಾಡಿಗೆ. ಹಾಗೆ ಆಗಲಿಲ್ಲ, ಸಚಿನ ಶತಕ ಬಾರಿಸಲಿಲ್ಲ.

ಎರಡನೇ ಟೆಸ್ಟ್ ಶೀಘ್ರದಲ್ಲೇ ಶುರುವಾಗುತ್ತದೆ. ಮತ್ತೊಮೆ ಸೊಪ್ಪು ಮಾರುವ ಮಲ್ಲಮ್ಮ ನಿಂದ ಹಿಡಿದು ದೊಡ್ಡ ದೊಡ್ಡ ಕಂಪೆನಿಗಳ CEO ಗಳ ತನಕ, ಎಲ್ಲರ ಗಮನ ಮತ್ತದೇ ಗುರಿಯ ಕಡೆ. ಮರೀಚಿಕೆಗೆ ಈ ಬಾರಿ ಬಾಣ ನಾಟುತ್ತದೋ, ಇಲ್ಲಾ ಆ ಬಾಣ ನಿಟ್ಟುಸಿರಾಗಿ ನಮ್ಮ ಕಡೆಯೇ ಮರಳುತ್ತದೋ, ಕಾದು ನೋಡೋಣ.