“ನೀವು ಕರೆಮಾಡಿದ ಚಂದಾದಾರರು ನಿಮ್ಮ ಯಾವುದೇ ಕರೆಗಳಿಗೂ ಪ್ರತಿಕ್ರಯಿಸುತ್ತಿಲ್ಲ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ”. – ಮೊಬೈಲ್ ಇಟ್ಟುಕೊಂಡ ಯಾವನಿಗೂ ಈ ಸಂದೇಶ ಬಾಯಿ ಪಾಠವೇ. ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಹೆಚ್ಚೂ ಕಡಿಮೆ ಎಲ್ಲಾ ಸ್ಥಾನಗಳಿಗೂ ಸ್ಪರ್ದಿಸಿ ಒಂದರಲ್ಲಾದರೂ ಗೆದ್ದು ಖಾತೆ ತೆರೆಯುವ ಭಾರತದ ಪ್ರತಿಪಕ್ಷದ ಆಸೆಗೆ ಕೇರಳದ ಜನ ಓಗೊಡದೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ನೀಡಿದ್ದಾರೆ. ಹೀಗೆ, ಕೇರಳದಲ್ಲಿ ಈ ಸಲವೂ ಭಾಜಪಕ್ಕೆ ಸಿಕ್ಕ ಸಂದೇಶ ನಾವು ಕೇಳುವ ಮೊಬೈಲ್ ಸಂದೇಶದ ರೀತಿಯೇ ಆಯಿತು. ಈ unmistakable ಸಂದೇಶ ಕೊಟ್ಟವ ಮತದಾರ ಮಹೋದಯ. ನಿರಾಶೆಯ ಸಂಗತಿ ಏನೆಂದರೆ ಈ “ಸ್ವಲ್ಪ ಸಮಯ” ಕಾಯುವಿಕೆ ಐದು ವರ್ಷಗಳಷ್ಟು ಸುದೀರ್ಘ.
ಅತ್ತ ತಮಿಳು ನಾಡಿನಲ್ಲೂ incumbent ಪಕ್ಷ ಸೋತು ಸುಣ್ಣವಾಯಿತು. 3G ಉಷ್ಣತೆ ಸ್ವಲ್ಪ ಜೋರಾಗಿಯೇ ತಗುಲಿಸಿಕೊಂಡ ದ್ರಾವಿಡ ಮುನ್ನೇಟ್ರಂ ಕಳಗಂ ತರಗೆಲೆಯಂತೆ ಉದುರಿತು ಜಯಲಲಿತಾ ಬಿರುಗಾಳಿಗೆ. ಇಲ್ಲೂ ಭಾರತದ ಅತಿ ದೊಡ್ಡ ಪ್ರತಿಪಕ್ಷಕ್ಕೆ ಅತಿ ದೊಡ್ಡ ನಿರಾಶೆಯೇ ಕಾದಿತ್ತು. ಹೀಗೆ ಕರ್ನಾಟಕವನ್ನು ಬಿಟ್ಟರೆ ದಕ್ಷಿಣದ ಯಾವುದೇ ರಾಜ್ಯದ ಮತದಾರ ಈ ಪಕ್ಷಕ್ಕೆ ಮಣೆ ಹಾಕದಿರಲು ಕಾರಣವೇನು? ಹಾಗೆಯೆ ಕರ್ನಾಟಕದಲ್ಲಿ ಒಂದು ಕಾಲದಲ್ಲಿ ಶಿಕಾರಿಪುರದ ಕೇವಲ ಒಂದು ಸ್ಥಾನದಿಂದ ಹಿಡಿದು ಈಗಿನ ಅಧಿಕಾರದ ಗದ್ದುಗೆ ಏರುವ ಭಾಜಪದ ಪಯಣದ ಯಶಸ್ಸಿಗೆ ಕಾರಣವೇನು? ಇತರೆ ಪಕ್ಷಗಳ ಅಸಡ್ಡೆ, ಅಧಿಕಾರ ದಾಹದ ಕಾರಣ ಬೇಸತ್ತ ಕರುನಾಡಿನ ಮತದಾರ last straw ಆಗಿ ಭಾಜಪವನ್ನು ಅಧಿಕಾರಕ್ಕೆ ಏರಿಸಿರಬಹುದೇ?
ಕೇರಳ, ತ.ನಾ., ಪಾಂಡಿಚೇರಿ ಪ್ರಾದೇಶಿಕ ಪಕ್ಷಗಳದ್ದೇ ಕಾರುಬಾರು. ಕೇರಳ ಕಾಂಗ್ರೆಸ್ ಅನ್ನುವುದಕ್ಕಿಂತ UDF ಅನ್ನುವುದು ಒಳ್ಳೆಯದು, ಅದೊಂದು ಪ್ರಾದೇಶಿಕ ಒಕ್ಕೂಟ.. ಹಾಗೆಯೇ, ಪಾಂಡಿಚೇರಿಯಲ್ಲಿ ಹೊಸ ಪ್ರಾದೇಶಿಕ ಪಕ್ಷಕ್ಕೆ ಕಾಂಗ್ರೆಸ್ ಸೋತ ರೀತಿ ನೋಡಿದರೆ, ಅಲ್ಲೂ ರಾಷ್ರೀಯ ಪಕ್ಷಗಳಿಗೆ ಮನ್ನಣೆಯಿಲ್ಲ ಎನ್ನುವುದು ಸ್ಪಷ್ಟ. ಆಂಧ್ರ ಆ ಕಡೆನೂ ಇಲ್ಲ ಈ ಕಡೆನೂ ಇಲ್ಲ. ಅಲ್ಲಿ ಭಾಜಪ ಅಲ್ಲೊಂದು ಇಲ್ಲೊಂದು ಕಡೆ ಗೆಲ್ಲುತ್ತದೆ. ಕರ್ನಾಟಕದ ವಿಷಯ ಸ್ವಲ್ಪ ಬೇರೆ. ಇಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮನ್ನಣೆ ಇಲ್ಲ. ದಳ(ಜಾ) ಕ್ಕೆ ರಾಜ್ಯದ ಮಾತು ಬಿಡಿ ೨-೩ ಜಿಲ್ಲೆಗಳಲ್ಲಿ ಮಾತ್ರ ಪ್ರಭಾವ. ಕಾಂಗ್ರೆಸ್ ಒಂಥರಾ ನಾಯಕರಿಲ್ಲದ ಪಕ್ಷ ಮಾತ್ರವಲ್ಲ, ಮತದಾರರಿಲ್ಲದ ಪಕ್ಷವೂ ಹೌದು ಸದ್ಯ. ಎಲ್ಲ ಕಡೆಯೊಂದಲೂ ಅನಾಥ. 🙂 ಉಳಿದದ್ದು ಭಾಜಪ ಮಾತ್ರ. ಬದಲಾವಣೆ ಎಲ್ಲ ಕಡೆ ಬರುತ್ತದೆ. ಕರ್ನಾಟಕದಲ್ಲೂ ಬರುತ್ತದೆ. ಕೇರಳದಲ್ಲೂ ಚಂದಾದಾರ ಹಲೋ ಎನ್ನುವ ಕಾಲ ಬರುತ್ತದೆ. ಇಷ್ಟು ದಿನ ಸುಮ್ಮನಿದ್ದ ಚಂದಾದಾರ ಪ.ಬಂ. ದಲ್ಲಿ ಕಾಂಗ್ರೆಸ್, ತೃ.ಮೂ.ಕಾಂ. ಗೆ ಹಲೋ ಎನ್ನಲಿಲ್ಲವೇ..
🙂