ಪ್ರಜಾ ಪ್ರಭುತ್ವದ ಯುದ್ಧ

ಮಹಾ ಸಮರ ಸೆಣಸಿ ಆಯಿತು. ಭಾಜಪ ಮುಕ್ಕಿತು ಮಣ್ಣು, ಕಾಂಗ್ರೆಸ್ ಗೆ ದಕ್ಕಿತು ಹಣ್ಣು. ಮಾಯೆಯ ಆಸೆ ದಿಲ್ಲಿ ಸೇರಲಿಲ್ಲ, ಮಮತೆಗೆ ಒಲಿಯಿತು ಅದೃಷ್ಟ. ಎಡಿಯೂರಪ್ಪನವರ ವೈಯಕ್ತಿಕ ಆಸೆ ( ಮಗ ಗೆಲ್ಲುವ ) ಈಡೇರಿದರೂ ತನ್ನ ಪಕ್ಷಕ್ಕೆ ಅಧಿಕ ಸೀಟ್ಗಳನ್ನು ಕೊಡಿಸದಾದರು. ಪಕ್ಕದ ರಾಜಶೇಖರ ರೆಡ್ಡಿಗೆ ಖುಲಾಯಿಸಿತು ಲಾಟರಿ. ಕೇರಳ, ಬಂಗಾಳದಲ್ಲಿ ಕುಡುಗೋಲಿಗೆ  ಹಿಡಿಯಿತು ತುಕ್ಕು. ಯುವರಾಜ ರಾಹುಲನ ಪಟ್ಟಾಭಿಷೇಕಕ್ಕೆ ಅನುವು ಮಾಡಿ ಕೊಟ್ಟಿತು ಈ ಚುನಾವಣೆ. ಮನಮೋಹನ ಸಿಂಗಾರ ಮೋಹಕ ನಗೆಗೆ, ಸೋನಿಯಾರ ಮಾಂತ್ರಿಕ ಕೈಗೆ ಒಲಿಯಿತು ದೇಸ.  

ಯಾರೇ ಕೂಗಾಡಲಿ, ಯಾರೇ ಹೋರಾಡಲಿ, ನನ್ನ ನೆಮ್ಮದಿಗೆ ಭಂಗವಿಲ್ಲ, ಎಮ್ಮೇ ನಿನಗೆ ಸಾಟಿಯಿಲ್ಲ, ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ ಅಳುಕದೆ ಮುಂದೇ ಸಾಗುವೆ.. ಅರೆ ವೈ.. ಅರೆ ವೈ.. ಅರೆ ವೈ..ಅರೆ ವೈ.. ಡುರ್ರ್ ಬಿಯಾ, ಅಂತ ನಮ್ಮ ಮತ್ತು ಎಮ್ಮೆಯ ಬದುಕು ನೆಮ್ಮದಿಯಾಗಿ ಸಾಗಿದರೆ ಸಾಕು.

ನಿಮ್ಮ ಟಿಪ್ಪಣಿ ಬರೆಯಿರಿ